ಗೋವಾ ರಾಜ್ಯದ ರಾಜಕಾರಣ ವಿರುದ್ಧ ಸಚಿವ ಸತ್ಯೇಂದ್ರ ಜೈನ್ ವಾಗ್ದಾಳಿ
Team Udayavani, Jul 27, 2021, 6:53 PM IST
ಪಣಜಿ: ರಾಜ್ಯದಲ್ಲಿನ ಮಂತ್ರಿಗಳಿಗೆ 5000 ಯೂನಿಟ್ ಅಥವಾ ದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಸವಲತ್ತಿದೆ. ಆದರೆ ಗೋವಾದ ಜನಸಾಮಾನ್ಯರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲು ಏಕೆ ಸಾಧ್ಯವಾಗುವುದಿಲ್ಲ..? ಎಂದು ದೆಹಲಿಯ ಇಂಧನ ಸಚಿವ ಸತ್ಯೇಂದ್ರ ಜೈನ್ ಗೋವಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪಣಜಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಡನಾಡಿದ ಅವರು- ಗೋವಾದಲ್ಲಿ ಶೇ 87 ರಷ್ಟು ಗ್ರಾಹಕರು ಗೃಹಬಳಕೆಯ ವಿದ್ಯುತ್ ಬಳಸುತ್ತಿದ್ದು, ಇವರ ಗೃಹ ಬಳಕೆಯ ವಿದ್ಯುತ್ ಸುಮಾರು 300 ಯೂನಿಟ್ ಆಸುಪಾಸಿನಲ್ಲಿದೆ. ಸರ್ಕಾರಿ ನಿವಾಸಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ, ಆದರೆ ರಾಜ್ಯದ ಜನರಿಗೆ ಏಕೆ ಉಚಿತ ವಿದ್ಯುತ್ ಇಲ್ಲ…? ಗೋವಾ ರಾಜ್ಯದ ರಾಜಕಾರಣ “ಥರ್ಡ್ ಕ್ಲಾಸ್” ರಾಜಕಾರಣವಾಗಿದೆ ಎಂದು ಸತ್ಯೇಂದ್ರ ಜೈನ್ ಠೀಕಾ ಪ್ರಹಾರ ನಡೆಸಿದರು.
ಗೋವಾಕ್ಕೆ ಅಪಮಾನ ಮಾಡಿದಂತೆ…
ಗೋವಾದ ರಾಜಕಾರಣವನ್ನು ಆಮ್ ಆದ್ಮಿ ಪಕ್ಷವು ಥರ್ಡ್ ಕ್ಲಾಸ್ ಎಂದು ಹೇಳಿರುವುದು ಗೋವಾದ ಮಾಜಿ ಮುಖ್ಯಮಂತ್ರಿಗಳಾದ ಬಾವುಸಾಹೇಬ್ ಬಾಂದೋಡಕರ್, ಮನೋಹರ್ ಪರೀಕರ್, ರಾಜೇಂದ್ರ ಅರ್ಲೇಕರ್, ಶ್ರೀಪಾದ ನಾಯ್ಕ ರವರಂತಹ ಭೂಮಿಪುತ್ರರಿಗೆ ಅಪಮಾನ ಮಾಡಿದಂತೆ ಇಂತಹ ಅಪಮಾನವನ್ನು ನಾವು ಸಹಿಸುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ