ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ
Team Udayavani, Jul 29, 2021, 7:19 PM IST
ವಾಡಿ (ಚಿತ್ತಾಪುರ): ಪದೇಪದೇ ಸರಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿರುವ ಅಂಗವಿಕಲ ನೋರ್ವ ಕಣ್ಣೀರು ಹಾಕುತ್ತಲೆ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉಗ್ರವಾಗಿ ವರ್ತಿಸಿದ ಘಟನೆ ಗುರುವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಪಟ್ಟಣದ ನಿವಾಸಿ ಧರ್ಮ ರಾಥೋಡ್, ಸರಕಾರಿ ಸೌಲಭ್ಯಗಳಿಂದ ವಂಚಿತವಾದ ಅಂಗವಿಕಲ. ಸ್ಥಳೀಯ ರೈಲು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸೇವೆ ನಿರ್ವಹಿಸುತ್ತಿದ್ದ ಈತ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿ ಇದ್ದ ತಾತ್ಕಾಲಿಕ ಉದ್ಯೋಗವೂ ಕೈತಪ್ಪಿತು. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಲಭಿಸಲಿದೆ ಎಂಬ ಆಶಾಭಾವನೆಯಿಂದ ಉಳಿಸಿ ಅನುದಾನ ಬೀದಿಗೆ ಬಿದ್ದಿರುವ ಈ ವಿಕಲಾಂಗ ವ್ಯಕ್ತಿ, ಸಾಕಲು ಸಾದ್ಯವಾಗದೆ ಹೆಂಡರು ಮಕ್ಕಳನ್ನು ತವರಿಗೆ ಕಳುಹಿಸಿ ಗೋಳಾಡುತ್ತಿದ್ದಾನೆ. ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾನೆ.
ಇತ್ತೀಚೆಗೆ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಯವರು ಪುರಸಭೆ ಅನುದಾನದಲ್ಲಿ ಖರೀದಿಸಲಾಗಿದ್ದ ತ್ರೀಚಕ್ರ ವಾಹನಗಳನ್ನು ಇತರ ಅಂಗವಿಕಲರಿಗೆ ನೀಡಿರುವ ಸುದ್ದಿ ತಿಳಿದು ಕೆಂಡಾಮಂಡಲವಾದ ವಿಕಲಾಂಗ ಧರ್ಮಸಿಂಗ್ ರಾಠೋಡ, ನೇರವಾಗಿ ಪುರಸಭೆ ಕಚೇರಿಗೆ ಆಗಮಿಸುವ ಮೂಲಕ ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ ಅವರೊಂದಿಗೆ ವಾಗ್ವಾದ ನಡೆಸಿದ್ದಾನೆ.
ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ತಾಯಿಗೆ 1.6 ಕೋಟಿ ರೂ. ವಂಚನೆ
ಎಲ್ಲರಿಗೂ ಪದೇಪದೇ ವಿವಿಧ ಸೌಲತ್ತುಗಳನ್ನು ಓದಗಿಸುತ್ತೀರಿ. ಕಾಲುಗಳಿಲ್ಲದ ನನಗೇಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸುವ ಮೂಲಕ ಕಚೇರಿಯಲ್ಲೇ ಕೂಗಾಡಿದ್ದಾನೆ. ಕೋಪ ನೆತ್ತಿಗೇರಿಸಿಕೊಂಡು ಕಣ್ಣೀರು ಸುರಿಸಿದ್ದಾನೆ. ನಾನೇ ತಪ್ಪು ಮಾಡಿದ್ದೇನೆ? ಮನೆ ಕಟ್ಟಲು ಮಂಜೂರಾದ ಸರಕಾರದ ಸಹಾಯಧನ ಕೈ ಸೇರಲಿಲ್ಲ. ಉರುಳಿಸಿದ ಗುಡಿಸಲು ಮನೆ ಪುನಃಹ ಕಟ್ಟಿಕೊಳ್ಳಲು ಸಾಧ್ಯವಾಗದೆ ಬೀದಿಗೆ ಬಿದ್ದಿದ್ದೇನೆ. ಕೊರೊನಾ ಲಾಕ್ಡೌನ್ ದಿಂದಾಗಿ ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಕೆಲಸವೂ ಹೋಗಿದೆ. ಯಾವೂದೇ ಪರಿಹಾರ ಸಿಕ್ಕಿಲ್ಲ.
ಈಗ ತ್ರೀಚಕ್ರ ವಾಹನದಿಂದಲೂ ವಂಚಿಸಿದ್ದೀರಿ. ನಾನು ಎಲ್ಲಿ ಹೋಗಿ ಸಾಯಲಿ? ನನಗೇಕೆ ಈ ಕಷ್ಟ? ನಾನು ಭೂಮಿ ಮೇಲೆ ಬದುಕಬಾರದೇ? ನಾನು ಮಾಡಿದ ಪಾಪವಾದರೂ ಏನು? ನಾನು ಅಂಕವಿಕಲನಲ್ಲವೇ? ಹೆಂಡರು ಮಕ್ಕಳಿಂದ ದೂರ ಇದ್ದು ದಿನವೂ ಸಾಯುತ್ತಿದ್ದೇನೆ. ಸೌಲಭ್ಯ ಕೊಡಿ ಅಥವ ಪುರಸಭೆ ಕಚೇರಿ ಮುಂದೇ ನನಗೆ ವಿಷ ಕೊಟ್ಟು ಸಾಯಿಸಿಬಿಡಿ. ಸಾಕಾಗಿದೆ ಈ ಜೀವನ ಎಂದು ಅವಲತ್ತುಕೊಂಡ ಪ್ರಸಂಗ ನಡೆದಿದೆ.
ಅಂಗವಿಕಲನ ಗೋಳಾಟ ತಿಳಿದು ಮೂಖವಿಸ್ಮಿತರಾದ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಧರ್ಮಸಿಂಗ್ ನನ್ನು ಸಮಾಧಾನಪಡಿಸಲು ಮುಂದಾದರು. ಯಾವುದಕ್ಕೂ ಜಗ್ಗದ ನೋಂದ ಅಂಗವಿಕಲ ಧರ್ಮಸಿಂಗ್, ನನಗೆ ನ್ಯಾಯ ಕೊಡಿ ಎಂದು ಪಟ್ಟು ಹಿಡಿದು ಏಕಾಂಗಿಯಾಗಿಯೇ ಪ್ರತಿಭಟಿಸಿ ಪುರಸಭೆ ಆಡಳಿತವನ್ನೇ ನಡುಗಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
MUST WATCH
ಹೊಸ ಸೇರ್ಪಡೆ
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!