ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ


Team Udayavani, Aug 2, 2021, 3:20 AM IST

ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ

ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಒಟ್ಟು 5 ಯೋಜನೆಗಳು ಮಂಜೂರು ಆಗಿವೆ. ಈ ಯೋಜನೆಗಳು ಮಂಜೂರು ಆಗಿ ಕೆಲವು ವರ್ಷಗಳಾಗಿದ್ದು, ಒಂದು ಯೋಜನೆ ಹೊರತುಪಡಿಸಿ ಉಳಿದಂತೆ ಎಲ್ಲ ಯೋಜನೆಗಳು ಇನ್ನೂ ನಿರ್ಮಾಣ ಹಂತಕ್ಕೆ ಬಂದಿಲ್ಲ. ಯೋಜನೆ ಅನುಷ್ಠಾನದಲ್ಲಿ ವಿಳಂಬದಿಂದಾಗಿ ಫಲಾನುಭವಿಗಳು ಮನೆ ಹೊಂದುವ ಕನಸು ಮರೀಚಿಕೆಯಾಗುತ್ತಿದೆ.

ಕೇಂದ್ರ ಪುರಸ್ಕೃತ ಸರ್ವರಿಗೂ ಸೂರು ಯೋಜನೆಯಲ್ಲಿ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಜ್‌ ಯೋಜನೆಯಡಿ ವಸತಿರಹಿತರಿಗೆ ನಗರದ ಪದವು ಗ್ರಾಮದ ಶಕ್ತಿನಗರದಲ್ಲಿ ಒಂದು, ಇಡ್ಯಾದಲ್ಲಿ ಎರಡು, ತಿರುವೈಲಿನಲ್ಲಿ ಒಂದು ಜಿ ಪ್ಲಸ್‌3 ಮಾದರಿಯ ವಸತಿ ಯೋಜನೆಗಳು ಮಂಜೂರಾಗಿತ್ತು. ಇದರಲ್ಲಿ ಇಡ್ಯಾದ 2 ಯೋಜನೆಗಳು ಮಾತ್ರ ಅನುಷ್ಠಾನದಲ್ಲಿದೆ. ಮಂಗಳೂರಿನ ಶಕ್ತಿನಗರದಲ್ಲಿ ಜಿಪ್ಲಸ್‌ ಮಾದರಿಯಲ್ಲಿ ವಸತಿ ಯೋಜನೆ ಮಂಜೂರಾಗಿ 4 ವರ್ಷಗಳಾಗಿವೆ. 950 ಫಲಾನುಭವಿಗಳಿಗೆ 3 ವರ್ಷಗಳ ಹಿಂದೆ ಹಕ್ಕುಪತ್ರ ವಿತರಣೆಯಾಗಿದೆ. ಆದರೆ ಜಾಗದ ತಾಂತ್ರಿಕ ಸಮಸ್ಯೆಯಿಂದಾಗಿ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಜಾಗದ ಸಮಸ್ಯೆ ಇತ್ಯರ್ಥ ಹಂತಕ್ಕೆ ತಲುಪಿದ್ದು ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಆಡಳಿತ ವ್ಯವಸ್ಥೆ ಹೇಳುತ್ತಿದೆ. ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸಿ ಯೋಜನೆ ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಿ ಫಲಾನುಭವಿಗಳ ಅತಂತ್ರ ಸ್ಥಿತಿಯನ್ನು ನಿವಾರಿಸಬೇಕಾಗಿದೆ.

ಕಣ್ಣೂರಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರಿಂದ 500 ಮನೆಗಳನ್ನು ಜಿಪ್ಲಸ್‌ ಮಾದರಿಯಲ್ಲಿ ನಿರ್ಮಿಸುವ ಯೋಜನೆ ಮಂಜೂರಾಗಿ 5 ವರ್ಷಗಳು ಕಳೆದಿದೆ. 7.24 ಎಕರೆ ಜಮೀನು ಕೂಡ ಇದಕ್ಕೆ ಕಾದಿರಿಸಲಾಗಿದೆ. ಆದರೆ ಯೋಜನೆ ಅನುಷ್ಠಾನಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ತಿರುವೈಲು ಗ್ರಾಮದಲ್ಲಿ 600 ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಪ್ಲಸ್‌ 3 ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆ ಮಂಜೂರಾಗಿ 3 ವರ್ಷಗಳಾಗಿವೆ. 6.33 ಎಕರೆ ಜಮೀನು ಕಾದಿರಿಸಲಾಗಿದೆ. ಆದರೆ ಜಾಗ ವಸತಿ ಯೋಜನೆಗೆ ಸೂಕ್ತವಾಗಿಲ್ಲ ಎಂಬ ಕಾರಣದಿಂದ ನನೆಗುದಿಯಲ್ಲಿದೆ. ಕುಂಜತ್ತಬೈಲ್‌ನಲ್ಲಿ 3 ಎಕರೆ ಜಮೀನಿನಲ್ಲಿ ಹೊಸದಾಗಿ ವಸತಿ ಸಂಕೀರ್ಣ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ತಯಾರಿಸುವ ಪ್ರಕ್ರಿಯೆ ಜಾರಿಯಲ್ಲಿದೆ.

ಸರ್ವರಿಗೂ ಸೂರು ಕಲ್ಪಿಸುವುದು ವಸತಿ ಯೋಜನೆಯ ಆಶಯ. ಈ ನಿಟ್ಟಿನಲ್ಲಿ ಮಂಜೂರುಗೊಳ್ಳುವ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ಅರ್ಹ ಫಲಾನುವಿಗಳಿಗೆ ಮನೆ ದೊರೆತಾಗ ಮಾತ್ರ ಇದರ ಉದ್ದೇಶ ಸಫಲವಾಗುತ್ತದೆ. ಯೋಜನೆಗೆ ನಿವೇಶನಗಳನ್ನು ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಡಳಿತ ವ್ಯವಸ್ಥೆಯ ಮೇಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಮಂಜೂರುಗೊಂಡಿರುವ ಮೂರು ಯೋಜನೆಗಳು ಜಾಗದ ಸಮಸ್ಯೆಯನ್ನು ಎದುರಿಸುತ್ತಿದೆ. ಸಮಸ್ಯೆಯನ್ನು ಬಗೆಹರಿಸಿ ಹಲವಾರು ವರ್ಷಗಳಿಂದ ವಸತಿಗಾಗಿ ಕಾಯುತ್ತಿರುವವರಿಗೆ ಶೀಘ್ರ ವಸತಿಗಳನ್ನು ಲಭ್ಯವಾಗುವ ಕಾರ್ಯ ಆಗಬೇಕಾಗಿದೆ.

   -ಸಂ.

ಟಾಪ್ ನ್ಯೂಸ್

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

Madikeri ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ

Madikeri ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

ಸಕ್ಕರೆ ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

ಪಾಸಾಗುವುದಷ್ಟೇ ಮುಖ್ಯ ಎಂದು ಮೂಗು ಮುರಿಯಬೇಡಿ !

ಪಾಸಾಗುವುದಷ್ಟೇ ಮುಖ್ಯ ಎಂದು ಮೂಗು ಮುರಿಯಬೇಡಿ !

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

ಕೊಳಚಿಕಂಬಳ: ಮರುವಾಯಿ ಹೆಕ್ಕಲು ನದಿಗಿಳಿದ ಓರ್ವ ನೀರುಪಾಲು; ಮೂವರನ್ನು ರಕ್ಷಿಸಿದ ಸ್ಥಳೀಯರು

ಕೊಳಚಿಕಂಬಳ: ಮರುವಾಯಿ ಹೆಕ್ಕಲು ನದಿಗಿಳಿದ ಓರ್ವ ನೀರುಪಾಲು; ಮೂವರನ್ನು ರಕ್ಷಿಸಿದ ಸ್ಥಳೀಯರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

Madikeri ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ

Madikeri ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.