ನಗರದೊಳಗಿನ ರಸ್ತೆ ಮಧ್ಯೆ ಹೊಂಡ ಸೃಷ್ಟಿ!


Team Udayavani, Aug 4, 2021, 4:00 AM IST

ನಗರದೊಳಗಿನ ರಸ್ತೆ ಮಧ್ಯೆ ಹೊಂಡ ಸೃಷ್ಟಿ!

ಕಾರ್ಕಳ:  ನಗರ ವ್ಯಾಪ್ತಿಯ ಮುಖ್ಯ ಪೇಟೆಯ ಮೂರು ಮಾರ್ಗ ಜಂಕ್ಷನ್‌ನಿಂದ ಆನೆಕೆರೆ, ಮಂಗಳೂರು ಭಾಗಕ್ಕೆ  ತೆರಳುವ ಮಾರ್ಗದಲ್ಲಿ ಅಲ್ಪ ದೂರ  ರಸ್ತೆ  ಸಂಪೂರ್ಣ ಕೆಟ್ಟಿದ್ದು  ಸಂಚಾರ ದುಸ್ತರವಾಗಿದೆ. ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ತೊಂದರೆಯಾಗುತ್ತಿದೆ. ಮಳೆಗೆ  ರಸ್ತೆ ಹೊಂಡದಲ್ಲಿ ಕೆಸರು ತುಂಬಿಕೊಂಡು ಸಮಸ್ಯೆಯಾದರೆ, ಬಿಸಿಲು ಬಂದೊಡನೆ ಧೂಳಿನ ಸಮಸ್ಯೆ ಸಂಚಾರಕ್ಕೆ ಕಂಟಕವಾಗಿದೆ.

ನಗರದ ಮುಖ್ಯ ಪೇಟೆಯ ಮೂರು ಮಾರ್ಗ ಜಂಕ್ಸನ್‌ನಿಂದ  ಸ್ವಲ್ಪ ಮುಂದಕ್ಕೆ  ಸೆಂಟ್ರಲ್‌ ಬ್ಯಾಂಕ್‌ ಎದುರಿನ  ಸುಮಾರು 100 ಮೀ.ನಷ್ಟು  ಕೂಡ ದೂರವಿಲ್ಲದ ವ್ಯಾಪ್ತಿಯಲ್ಲಿ  ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮಧ್ಯೆ ಅಲ್ಲಲ್ಲಿ  ಹೊಂಡಗಳಿರುವುದು ಸಂಚಾರಕ್ಕೆ  ತೀವ್ರ ಅಡಚಣೆಯಾಗುತ್ತಿದೆ.  ವಾಹನಗಳು ಹೊಂಡಗುಂಡಿಗಳಲ್ಲಿ ಎದ್ದು  ಬಿದ್ದು  ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಒಳಚರಂಡಿ ಕಾಮಗಾರಿಗೆ  ಪೈಪ್‌ ಅಳವಡಿಕೆ ವೇಳೆ ರಸ್ತೆಯನ್ನು ಅಗೆಯಲಾಗಿತ್ತು. ಅನಂತರದಲ್ಲಿ  ರಸ್ತೆಯ ಹೊಂಡಗಳನ್ನು  ಮುಚ್ಚಿ,  ಜಲ್ಲಿ ಮತ್ತು  ಜಲ್ಲಿ   ಹುಡಿಯನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿತ್ತು.

ಇಕ್ಕಟ್ಟಾದ ರಸ್ತೆಯಲ್ಲಿ  ವಾಹನಗಳ ಭಯದ  ಅತ್ತಿತ್ತ ಸಾಗಬೇಕಾದ  ಪರಿಸ್ಥಿತಿ ಪಾದಚಾರಿಗಳದು.  ಮಂಗಳೂರು ಭಾಗದಿಂದ ಬರುವ ಬಸ್‌ಗಳು ಇದೇ ಮಾರ್ಗವಾಗಿ ಬರುವುದು ಹೋಗುವುದು ಮಾಡುತ್ತಿದ್ದು  ಇಕ್ಕಟ್ಟಾದ ರಸ್ತೆಯಲ್ಲಿ  ಸಂಚರಿಸಲಾಗದೆ  ತ್ರಾಸ ಪಡುವ ಸ್ಥಿತಿಯಿದೆ. ಮೂರು ಮಾರ್ಗದಿಂದ ಆನೆಕೆರೆ ತನಕ ಸೂಕ್ತ ಚರಂಡಿಯೂ ಇಲ್ಲ. ಈ ನಡುವೆ  ರಸ್ತೆ ಹದಗೆಟ್ಟ ಸ್ಥಳಗಳಲ್ಲಿ   ಮಳೆ  ನೀರು  ಹರಿಯುತ್ತಿದ್ದು, ಪಕ್ಕದ ಅಂಗಡಿಗಳಿಗೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ  ಸಂಬಂಧಿಸಿದವರು ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಸಂಚಾರ ಹರಸಾಹಸ :

ದುರಸ್ತಿ ಅನಂತರದಲ್ಲಿ ಮಳೆಯೂ ಸುರಿದಿದ್ದರಿಂದ  ರಸ್ತೆ ಹೆಚ್ಚು ಕೆಡಲು ಕಾರಣವಾಗಿದೆ. ಜತೆಗೆ  ಸೂಕ್ತ ಚರಂಡಿಯೂ ಇಲ್ಲದೆ ಇರುವುದರಿಂದ  ಸಮಸ್ಯೆ ಮತ್ತಷ್ಟು ಹೆಚ್ಚಿದ್ದು  ಆನೆಕೆರೆಯಿಂದ  ಬರುವ ಮತ್ತು ಅಲ್ಲಿಗೆ ತೆರಳುವ  ವಾಹನಗಳು ಮೂರು ಮಾರ್ಗ ದಾಟಿ  ಹಳೆ ಬಸ್‌ ನಿಲ್ದಾಣ ಸಹಿತ ಮುಖ್ಯ ಪೇಟೆ ತಲುಪಲು   ಹರಸಾಹಸ ಪಡಬೇಕಾಗಿದೆ.  ಲಘು,  ದ್ವಿಚಕ್ರ ವಾಹನಗಳು  ಇಲ್ಲಿ  ತೆರಳುವಾಗ  ಎದ್ದು ಬಿದ್ದು ಹೋಗಬೇಕಾದ ಸ್ಥಿತಿಯಿದೆ.  ಈ ವೇಳೆ ಅಪಾಯ  ಸಂಭವಿಸುವ ಸಾಧ್ಯತೆ ಇದೆ.

ಒಳಚರಂಡಿ ಕಾಮಗಾರಿ ನಡೆಸುವ ವೇಳೆ  ರಸ್ತೆಗೆ ಹಾನಿಯಾಗಿದೆ. ಒಳಚರಂಡಿಯವರ ಗಮನಕ್ಕೆ ತಂದಾಗ ಹಣವಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಈ ಬಗ್ಗೆ  ಮತ್ತೆ ಅವರ ಗಮನಕ್ಕೆ ತರುವೆ.ರೂಪಾ ಶೆಟ್ಟಿ  ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

ಟಾಪ್ ನ್ಯೂಸ್

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.