ಜನಪ್ರಿಯ ಯಕ್ಷಗಾನ ಮಂಡಳಿ ಮುಂಬಯಿ: ನವೀಕೃತ ಕಚೇರಿಯ ಉದ್ಘಾಟನೆ
Team Udayavani, Aug 5, 2021, 2:20 PM IST
ಮುಂಬಯಿ: ವಿಶ್ವ ವಿಖ್ಯಾತ ಪ್ರಸಿದ್ದ ಜಿಎಸ್ಬಿ ಸೇವಾ ಮಂಡಲದ ಗಣೇಶೋತ್ಸವದ ಅಂಗ ಸಂಸ್ಥೆಯಾಗಿರುವ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ತನ್ನ ಸ್ವಂತ ಕಚೇರಿಯನ್ನು ಕುರ್ಲಾ ಪಶ್ಚಿಮದ ಶಾಂತಿ ನಿವಾಸದಲ್ಲಿ ಹೊಂದಿದೆ.
ಇದ ನವೀಕೃತ ಕಚೇರಿಯ ಉದ್ಘಾಟನ ಸಮಾರಂಭವು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ, ಶ್ರೀಮದ್ ಸಮ್ಯಮೇಂದ್ರ
ತೀರ್ಥ ಸ್ವಾಮೀಜಿಯವರ ಶುಭಾ ಶೀರ್ವಾದಗಳೊಂದಿಗೆ ಜರಗಿತು.
ಜು. 30ರಂದು ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತುಹೋಮ, ನವಗ್ರಹ ಹೋಮ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯ
ವಿಧಿ-ವಿಧಾನವನ್ನು ವೇದಮೂರ್ತಿ ಪ್ರಶಾಂತ್ ಭಟ್, ಹರೀಶ್ ಭಟ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಮಂಡಳಿಯ ವತಿಯಿಂದ ದೀಪಕ್ ಶೆಣೈ, ಆರ್. ಜಿ. ಭಟ್ ಅವರನ್ನು ಗೌರವಿಸಲಾಯಿತು. ಅನ್ನ ಸಂತರ್ಪಣೆ ಪ್ರಸಾದವನ್ನು ವಿಜಯ್ ದಿನೇಶ್
ಪ್ರಭು ಅವರ ಸೇವಾರ್ಥಕವಾಗಿ ಆಯೋಜಿಸಲಾಯಿತು. ಕಚೇರಿ ನವೀಕರಣಕ್ಕೆ ದೀಪಕ್ ಶೆಣೈ, ಸಹಾಯಕರಾಗಿ ಮತ್ತು ಪೂಜಾ
ಯಜಮಾನರಾಗಿಯೂ ಮಂಡಳಿಯ ಅಧ್ಯಕ್ಷ ಮೇಲು ಗಂಗೊಳ್ಳಿ ರವೀಂದ್ರ ಪೈ, ಕಾರ್ಯದರ್ಶಿ ಕುಕ್ಕೆಹಳ್ಳಿ ವಿಠಲ್ ಪ್ರಭು, ಕೋಶಾಧಿಕಾರಿ ಯೋಗೇಶ್ ಕೃಷ್ಣ ಡಾಂಗೆ ಅವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಎಲ್ಲ ಸದಸ್ಯರು, ಕಲಾವಿದರು ಉಪಸ್ಥಿತರಿದ್ದರು.
65 ವರ್ಷಗಳ ಹಿಂದೆ ಗೌಡ ಸಾರಸ್ವತ ಬ್ರಾಹ್ಮಣ ಬಾಂಧವರು ಒಟ್ಟುಗೂಡಿ ಯಕ್ಷಗಾನ ಮಂಡಳಿಯ ಸ್ಥಾಪನೆಗಾಗಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಲ್ಲಿ ಪ್ರಸ್ತಾವನೆಯನ್ನು ಇಟ್ಟಿದ್ದರು. ಈ ಪ್ರಸ್ತಾವನೆಗೆ ಗುರುಗಳು ಸಂತೋಷದಿಂದ ಒಪ್ಪಿಗೆ ಕೊಟ್ಟು ಇದಕ್ಕೆ ಜನಪ್ರಿಯ ಯಕ್ಷಗಾನ ಮಂಡಳಿ ಎಂದು ನಾಮಕರಣ ಮಾಡಿದರು. ಇದೀಗ ಮಂಡಳಿಯು 65ನೇ ವರ್ಷಾಚರಣೆಯಲ್ಲಿದ್ದು, ವರ್ಷಪೂರ್ತಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರದರ್ಶಿಸುವಲ್ಲಿಮಂಡಳಿಯು ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ