ಜೋಕಾಲಿ ಜೀಕಿ ಹಳ್ಳಿಗರ ಸಂಭ್ರಮಾಚರಣೆ

ಕೊರೊನಾತಂಕದಲ್ಲೇ ಪಂಚಮಿ­ಉತ್ಸಾಹ ಇಮ್ಮಡಿ­| ಕಳೆದ ವರ್ಷದಂತಿಲ್ಲ ಸ್ವಯಂ ಷರತ್ತು

Team Udayavani, Aug 13, 2021, 1:13 PM IST

frtyry

ವರದಿ: ಬಸವರಾಜ ಹೊಂಗಲ್‌

ಧಾರವಾಡ: ಒಂದೆಡೆ ಕೊರೊನಾ ಕರಿಛಾಯೆ, ಮತ್ತೂಂದೆಡೆ ಲಾಕ್‌ಡೌನ್‌ ನಿಂದ ಕಂಗೆಟ್ಟಿದ್ದ ಜನರಿಗೆ ಪಂಚಮಿ ಹಬ್ಬ ಸಂಭ್ರಮಿಸುವ ತವಕ. ಬೆನ್ನ ಹಿಂದೆಯೇ 3ನೇ ಅಲೆಯ ಆತಂಕ, ಉಂಡು ಉಸುಳಿ ತಿಂದು ಮೋಜು ಮಸ್ತಿ ಮಾಡುವ ನಾಗರ ಪಂಚಮಿಗೆ ಹಳ್ಳಿಗರು ಈ ವರ್ಷ ಯಾವುದೇ ಕಟ್ಟಳೆಗಳನ್ನು ಹಾಕಿಕೊಳ್ಳದೇ ಸಂಭ್ರಮಿಸಲು ಮುಂದಾಗಿದ್ದಾರೆ.

ಹೌದು. ಪಂಚಮಿ ಹಬ್ಬ ಅಂದರೆ ಹಳ್ಳಿಗರಿಗೆ ಮೂರು ದಿನಗಳ ಹಬ್ಬ, ರೊಟ್ಟಿ ಪಂಚಮಿ, ನಾಗಪ್ಪನಿಗೆ ಹಾಲೆರೆಯುವುದು, ಗ್ರಾಮೀಣ ಕ್ರೀಡೆಗಳ ಮೋಜಿಗಾಗಿ ನಾಗ ಪಂಚಮಿ, ಖರೀದಿ ಪದಾರ್ಥಗಳನ್ನು ಭೂತಾಯಿ(ಹೊಲ)ಗೆ ಚರಗ ಚೆಲ್ಲುವುದು ಹಾಗೂ ಐದನೇ ದಿನ ವರ್ಷ ತೊಡಕು. ಹೀಗೆ ನಾಲ್ಕೈದು ದಿನಗಳ ಕಾಲ ತರಾವರಿ ಉಂಡಿ, ಉಸುಳಿ, ಕೊಬ್ಬರಿ ಬಟ್ಟಲ, ಜೋಕಾಲಿ ಜೀಗುವುದು ಸೇರಿದಂತೆ ದೇಶಿ ಮೋಜಿನಾಟಗಳೊಂದಿಗೆ ಸಂಭ್ರಮಿಸುವ ಹಬ್ಬ. ಎಂತಹ ಬರಗಾಲ ಬಿದ್ದರೂ ಸಾಲ ಮಾಡಿಯಾದರೂ ಸೈ ಪಂಚಮಿ ಹಬ್ಬವನ್ನು ಸಂಭ್ರಮಿಸುತ್ತಿದ್ದರು ಉತ್ತರ ಕರ್ನಾಟಕದ ಜನ. ಇದೀಗ ಕೊರೊನಾ ಕರಿನೆರಳಲ್ಲಿಯೇ ನಾಗರ ಪಂಚಮಿ ಆಚರಿಸುವಂತಾಗಿದೆ.

ಸ್ವಯಂ ಕಟ್ಟುಪಾಡು ಇಲ್ಲ: ಕೊರೊನಾ 2ನೇ ಅಲೆಯ ಹೊಡೆತಕ್ಕೆ ನಲುಗಿ ಹೋಗಿದ್ದ ಹಳ್ಳಿಗಳಲ್ಲಿ ಸಾಕಷ್ಟು ಜನರು ತೀರಿ ಹೋಗಿದ್ದಾರೆ. ಈಗಷ್ಟೇ ಲಾಕ್‌ ಡೌನ್‌ ತೆರವಿನಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಹಳ್ಳಿಗರಿಗೆ ಇದೀಗ ಹಬ್ಬಗಳ ಸರಣಿ ಎದೆಯ ಮೇಲೆ ಬಂದು ಕುಳಿತಿದೆ. ಪಂಚಮಿ, ಗಣೇಶ ಚತುರ್ಥಿ, ಮಹಾನವಮಿ, ಸೀಗೆ ಹುಣ್ಣಿಮೆ, ದೀಪಾವಳಿ ಹೀಗೆ ಎಲ್ಲವೂ ದೊಡ್ಡ ದೊಡ್ಡ ಹಬ್ಬಗಳಿದ್ದು, ಕೊರೊನಾ 3ನೇ ಅಲೆ ಆತಂಕ ಮಾತ್ರ ಎಲ್ಲರಲ್ಲೂ ಇದೆ. ಕಳೆದ ವರ್ಷ ಗ್ರಾಮಗಳೇ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ ಘೋಷಣೆ ಮಾಡಿಕೊಂಡು ನಾಗರ ಪಂಚಮಿ ಹಬ್ಬ ಆಚರಿಸದಂತೆ, ಪರ ಊರುಗಳಿಂದ ಮನೆ ಹೆಣ್ಣು ಮಕ್ಕಳನ್ನು ಕರೆಯದಂತೆ, ಬುತ್ತಿ ರೊಟ್ಟಿ ಹಂಚದಂತೆ, ಎಲ್ಲರೂ ಒಂದೆಡೆ ಸೇರಿ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ಹಬ್ಬ ಮಾಡದಂತೆ ಡಂಗೂರ ಸಾರಿದ್ದವು. ಆದರೆ ಈ ವರ್ಷ ಸದ್ಯ ಯಾವುದೇ ಹಳ್ಳಿಗಳಲ್ಲಿ ಕೊರೊನಾ ಪ್ರಕರಣಗಳು ಇದ್ದಂತಿಲ್ಲ. ಹೀಗಾಗಿ ಹಳ್ಳಿಗರ ಉತ್ಸಾಹ ಹಬ್ಬ ಪಂಚಮಿಯಲ್ಲಿ ಜೋಕಾಲಿ ಜೋರಾಗಿ ಜೀಕಲು ಸಜ್ಜಾಗಿದ್ದಾರೆ.

ಚೇತರಿಸಿಕೊಂಡ ವ್ಯಾಪಾರ: ಪಂಚಮಿ ಹಬ್ಬಕ್ಕೆ ಹೊಸ ಬಟ್ಟೆ ಕಿರಾಣಿ ಸಂತಿ, ಸಿಹಿ ತಿನಿಸುಗಳ ಮಾರಾಟ ಮಾಡುವ ಖುಷಿಯಲ್ಲಿದ್ದಾರೆ ವ್ಯಾಪಾರಸ್ಥರು. ಕಳೆದ ವರ್ಷ ಪೇಟೆ ಸಂಪೂರ್ಣ ಬಂದ್‌ ಆಗಿತ್ತು. ಉಂಡಿ, ಕಾರದಾನಿ, ಜೋಳದ ಅಳ್ಳು, ಸಿದ್ಧಪಡಿಸಿ ಮಾರುತ್ತಿದ್ದ ಸಣ್ಣ ಸಣ್ಣ ವ್ಯಾಪಾರಸ್ಥರು ಮತ್ತು ಅದನ್ನು ಸಿದ್ಧಪಡಿಸುತ್ತಿದ್ದ ಬಡವರು ನಷ್ಟ ಅನುಭವಿಸಿದ್ದರು. ಈ ವರ್ಷ ಲಾಕ್‌ ಡೌನ್‌ ತೆರವುಗೊಂಡಿದ್ದರಿಂದ ಕೊಂಚ ಅನುಕೂಲವಾಗಿದೆ. ವರ್ಷಕ್ಕಾಗುವಷ್ಟು ಲಾಭ ಇದೊಂದೇ ಹಬ್ಬದಲ್ಲಿ ಪಡೆಯುವ ತವಕದಲ್ಲಿದ್ದಾರೆ ವ್ಯಾಪಾರಿಗಳು. ಅಳ್ಳು, ಕೊಬ್ಬರಿ, ಬುಂದಿ, ಖಾರದಾನಿ, ತುಪ್ಪ ಸೇರಿದಂತೆ ಹಬ್ಬದ ವ್ಯಾಪಾರ ಮತ್ತು ಸಾಮಗ್ರಿ ಖರೀದಿ ಜೋರಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಉಂಡಿಗೆ ಬಳಕೆಯಾಗುವ ಬುಂದಿ, ಖಾರದಾನಿ, ಬೇಸನ್‌ ಲಾಡು ತುಪ್ಪ ಅತ್ಯಂತ ದುಬಾರಿಯಾಗಿದ್ದು, ಬೆಲೆ ಶೇ.30 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 100 ರೂ.ಗೆ ಕೆ.ಜಿ. ಇದ್ದ ಬೂಂದಿ ಮತ್ತು ಸಪ್ಪ ಖಾರಾ ಈ ವರ್ಷ 180 ರೂ. ವರೆಗೆ ಏರಿಕೆಯಾಗಿದೆ.

ಟಾಪ್ ನ್ಯೂಸ್

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.