ಲಿಂಗನಮಕ್ಕಿ ಭರ್ತಿಗೆ 7 ಅಡಿ ಬಾಕಿ
Team Udayavani, Aug 13, 2021, 9:26 PM IST
ಹೊನ್ನಾವರ: ನಿರೀಕ್ಷೆಯಂತೆ ಲಿಂಗನಮಕ್ಕಿ ಅಣೆಕಟ್ಟು ತುಂಬುತ್ತ ಬಂದಿದೆ. ಅಣೆಕಟ್ಟಿನ ಜಲಾಗಾರ ಶೇ. 85.18 ರಷ್ಟು ಭರ್ತಿಯಾಗಿದ್ದು ವಿಶಾಲವಾಗಿ ಸಮುದ್ರದಂತೆ ತೋರುತ್ತಿದ್ದು ತೆರೆಗಳು ಅಣೆಕಟ್ಟನ್ನು ಮುತ್ತಿಡುತ್ತಿವೆ.
ಶರಾವತಿಕೊಳ್ಳ ಇನ್ನು ನಿದ್ದೆಗೆಡಬೇಕಾಗಿದೆ. ಗುರುವಾರ 0.15 ಫೂಟ್ ಮಾತ್ರ ಏರಿದೆ. ಅಣೆಕಟ್ಟಿನ ಒಳಹರಿವು 11,174 ಕ್ಯೂಸೆಕ್ ಇದೆ. ಜಲಾನಯನ ಪ್ರದೇಶದಲ್ಲಿ 13.80 ಮಿಮೀ ಮಳೆ ಸುರಿದಿದೆ. ಲಿಂಗನಮಕ್ಕಿ ಅಣೆಕಟ್ಟು ಆರಂಭವಾದ ಮೇಲೆ ಕೇವಲ ನಾಲ್ಕಾರು ಬಾರಿ ಪೂರ್ತಿ ತುಂಬಿ ಸ್ಯೂಸ್ ಗೇಟ್ ತೆರೆದು ನೀರು ಬಿಡಲಾಗಿದೆ. ಹೆಚ್ಚಿನ ವರ್ಷ ಪೂರ್ತಿ ತುಂಬುತ್ತ 1817 ಅಡಿ ತಲುಪಿದ ಮೇಲೆ ಮಳೆ ನಿಂತು ಹೋದ ದಾಖಲೆ ಇದೆ. ನಂತರ ಒರತೆಯ ನೀರು 1819 ಅಡಿಗಳಿಗೆ ತಲುಪಿ ಗಂಗಾಪೂಜೆ ನೆರವೇರಿದೆ.
1980ರಲ್ಲಿ ನೆರೆ ಬಂದ ವರ್ಷ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದು ಮೊದಲ ದಿನ 4ಅಡಿ, ಮರುದಿನ 3ಅಡಿ ನೀರು ಬಂದ ಕಾರಣ ಅನಿವಾರ್ಯವಾಗಿ ನೀರು ಬಿಡಲಾಗಿತ್ತು. ಅದೇ ಕಾಲಕ್ಕೆ ಶರಾವತಿ ಕೊಳ್ಳದಲ್ಲಿ ಮಳೆ ಇತ್ತು. ಕೊಳ್ಳವನ್ನು ಸೇರಿಕೊಳ್ಳುವ ಗೇರುಸೊಪ್ಪಾ ಕಲ್ಕಟ್ಟೆ, ಮಾಗೋಡು, ಹಡಿನಬಾಳ, ಭಾಸ್ಕೇರಿ ಹೊಳೆಗಳು ತುಂಬಿ ಹರಿದ ಪರಿಣಾಮ ಶರಾವತಿ ಎಡಬಲದಂಡೆಯನ್ನು ಮೀರಿ ಕಿಮೀ ವಿಸ್ತಾರದಲ್ಲಿ ಹೊನ್ನಾವರದ ತಗ್ಗುಪ್ರದೇಶಕ್ಕೂ ನೀರು ನುಗ್ಗಿತ್ತು.
ಅಮವಾಸ್ಯೆ ಭರ್ತಿ ಇದ್ದ ಕಾರಣ ಸಮುದ್ರಕ್ಕೆ ನೀರು ಸೇರಿಕೊಳ್ಳುವುದು ವಿಳಂಬವಾಗಿ ಅನಾಹುತ ಸಂಭವಿಸಿತ್ತು. ನಂತರ ಕೆಲವು ವರ್ಷ ಲಿಂಗನಮಕ್ಕಿಯಲ್ಲಿ ನೀರು ತುಂಬಿದರೂ ಗೇಟು ತೆರೆದರೂ ಸ್ವಲ್ಪಸ್ವಲ್ಪ ನೀರು ಬಿಟ್ಟ ಕಾರಣ, ಶರಾವತಿಕೊಳ್ಳದಲ್ಲಿ ಮಳೆ ಇಲ್ಲದ ಕಾರಣ ನೆರೆ ಬರಲಿಲ್ಲ. ಈ ಬಾರಿ ಎಲ್ಲೆಡೆ ಮಳೆ ಇದೆ. ಲಿಂಗನಮಕ್ಕಿ ತುಂಬುತ್ತಿದೆ. ಟೇಲರೀಸ್ ಆಣೆಕಟ್ಟು ತನ್ನ 55 ಮೀಟರ್ ಹತ್ತಿರದಲ್ಲಿದೆ. ಆದ್ದರಿಂದ ಇನ್ನೂ ಕೆಲವು ದಿನ ಕುತೂಹಲ ಉಳಿದುಕೊಳ್ಳಲಿದೆ. ಕೆಪಿಸಿ ಮಾಮೂಲಿಯಂತೆ ನೀರು ಬಿಡುವ ಅಂತಿಮ ಸೂಚನೆ ನೀಡಿ ಶರಾವತಿಕೊಳ್ಳದ ಜನರನ್ನು ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ