ಬದ್ಧತೆ, ಹಿಂದುತ್ವ ಪ್ರತಿಪಾದನೆ ಮಾಡುವವರಿಗೆ ಪಕ್ಷ ಜವಾಬ್ದಾರಿ ನೀಡುತ್ತದೆ: ನಾರಾಯಣ ಸ್ವಾಮಿ
Team Udayavani, Aug 16, 2021, 4:58 PM IST
ಬೆಂಗಳೂರು: ಯಾವ ಕಾರ್ಯಕರ್ತನಿಗೆ ಬದ್ದತೆ ಇದೆ, ಹಿಂದುತ್ವ ಪ್ರತಿಪಾದನೆ ಮಾಡುತ್ತಾನೋ ಅವನಿಗೆ ಪಕ್ಷ ಜವಾಬ್ದಾರಿ ನೀಡುತ್ತದೆ. ಇದಕ್ಕೆ ನಾನೇ ಉದಾಹರಣೆ. ಪ್ರಧಾನಿ ಮೋದಿ, ಅಮಿತ್ ಶಾ, ಸಂತೋಷ್ ಅವರು ಗುರುತಿಸಿದ್ದಾರೆ. ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಕೇಂದ್ರದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮೋದಿ ಸಂಪುಟದಲ್ಲಿ ರಾಜ್ಯದ ಜನ ನನ್ನನ್ನು ಊಹಿಸಿರಲಿಲ್ಲ. ನನಗಿಂತ ಅನೇಕ ಹಿರಿಯರಿದ್ದರು. ಪಕ್ಷದ ಸಿದ್ಧಾಂತಕ್ಕೆ ಕೆಲಸ ಮಾಡಿದ ಅನೇಕರಿದ್ದರು. ಆದರೆ ನನಗೆ ದೆಹಲಿಗೆ ಬನ್ನಿ ಚರ್ಚೆ ಮಾಡಬೇಕು ಅಂತ ಮೋದಿ ಆಹ್ವಾನ ನೀಡಿದರು ಎಂದರು.
ಇದನ್ನೂ ಓದಿ:‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಸಚಿವ ಅಶೋಕ್ ಚಾಲನೆ
ಬಿಜೆಪಿ ಬಗ್ಗೆ ಅನೇಕ ವ್ಯಾಖ್ಯಾನ ಇತ್ತು. ಬ್ರಾಹ್ಮಣರ ಪಕ್ಷ ಅಂತ ಹೇಳಲಾಗಿತ್ತು. ಚುನಾವಣಾ ಪೂರ್ವ ಘೋಷಣೆ ಮಾಡುವ ಪರಂಪರೆ ಇತ್ತು. 2013ರಲ್ಲಿ ಗುಜರಾತ್ನ ಸಿಎಂ ಮೋದಿ ಹೆಸರನ್ನು ಪ್ರಧಾನಿಯಾಗಿ ಘೋಷಣೆ ಮಾಡಲಾಯಿತು. ಈ ಮೂಲಕ ಹಿಂದುಳಿದ ನಾಯಕನನ್ನ ಪ್ರಧಾನಿ ಹೆಸರಿಗೆ ಸೂಚಿಸಲಾಯ್ತು. ಈ ದೇಶದಲ್ಲಿ ಅನೇಕ ವರ್ಷಗಳು ಕಾಂಗ್ರಸ್ ಆಡಳಿತ ಮಾಡಿದೆ. ದಲಿತರಿಗೆ ಅಧಿಕಾರ ನೀಡಿದ್ದು ದುರ್ಬಿನ್ ಹಾಕಿ ನೋಡಿದ್ರು ಸಿಗೋದಿಲ್ಲ. ಆದರೆ ನಮ್ಮಲ್ಲಿ ದಲಿತರನ್ನು ರಾಷ್ಟ್ರಪತಿ, ರಾಜ್ಯಪಾಲರನ್ನಾಗಿ ಮಾಡಲಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ. ಆದರೆ ಒಂದೇ ವರ್ಷದಲ್ಲಿ ಲೋಕಸಭೆಗೆ ಟಿಕೆಟ್ ನೀಡಿದರು. ಹೊರಗಿನವನು ಎಂದೂ ನೋಡದೆ ಜನ ಗೆಲ್ಲಿಸಿದ್ದರು ಎಂದು ನಾರಯಣ ಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ