ಕೆಎಸ್ಆರ್ಪಿ ಸಿಬಂದಿಗೂ ಸಿವಿಲ್ ಸೇವೆಗೆ ಅವಕಾಶ
Team Udayavani, Aug 20, 2021, 7:10 AM IST
ಕಲಬುರಗಿ: ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬಂದಿ (ಕಾನ್ಸ್ಟೆಬಲ್)ಗೆ ಇನ್ನು ಮುಂದೆ ಸಿವಿಲ್ ಪೊಲೀಸರಾಗಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಈ ಮೂಲಕ ಅವರ ಬಹು ದಿನಗಳ ಬೇಡಿಕೆ ಈಡೇರಲಿದೆ.
ಈಗಾಗಲೇ ಗೃಹ ಇಲಾಖೆಯಲ್ಲಿ ಈ ಕುರಿತು ನಿಯಮಾವಳಿ ಬದಲಾವಣೆ ಮಾಡಲಾಗಿದೆ. ಮುಖ್ಯಮಂತ್ರಿಗಳು, ಗೃಹಸಚಿವರು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪರೀಕ್ಷೆ ನಿಗದಿ :
ಕೆಎಸ್ಆರ್ಪಿಗೆ ಸೇರಿ 10 ವರ್ಷ ಪೂರೈಸದಿರುವ ಸಿಬಂದಿಗೆ ಮಾತ್ರ ಈ ಅವಕಾಶ ಸಿಗಲಿದೆ. ಇವರನ್ನೂ ಪರೀಕ್ಷೆ ಮೂಲಕ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಸಿವಿಲ್ ಸೇವೆಗೆ ಪಾದಾರ್ಪಣೆ ಮಾಡಬಹುದು.
ಸಿವಿಲ್ ಸೇವೆ ಆಯ್ಕೆ ಏಕೆ? :
ಯುವಕರು ಉತ್ಸುಕತೆಯಿಂದ ಕೆಎಸ್ಆರ್ಪಿಗೆ ಸೇರುತ್ತಾರೆ. ವರ್ಷಗಳ ಬಳಿಕ ದಿನವೂ ಸೇವೆ ಸಲ್ಲಿಸಲು ಅವಕಾಶ ಇಲ್ಲದಿರು
ವುದು, ಅಹಿತಕರ ಘಟನೆಗಳು ನಡೆದಂತಹ ಸ್ಥಳಗಳಲ್ಲಷ್ಟೇ ಕರ್ತವ್ಯ ನಿಭಾಯಿಸಬೇಕೆಂಬ ಹಿನ್ನೆಲೆ, ಸಿವಿಲ್ನಂತೆ ಸಾಮಾಜಿಕವಾಗಿ ಸೇವೆ
ಸಲ್ಲಿಸಲು ಅವಕಾಶ ಇಲ್ಲವಲ್ಲ ಎನ್ನುವ ಕೊರಗು, ಖನ್ನತೆ ಆರಂಭವಾಗುತ್ತದೆ. ಕೆಎಸ್ಆರ್ಪಿ ಹಾಗೂ ಸಿವಿಲ್ ಪೊಲೀಸ್ಗೂ ಒಂದೇ ತೆರನಾದ ವೇತನ ಇರುತ್ತದೆ. ಆದರೆ ಸಿವಿಲ್ ಪೊಲೀಸರಂತೆ ಕೆಎಸ್ಆರ್ಪಿ ಸಿಬಂದಿಗೆ ಕೆಲವು ವಿಶೇಷ ಭತ್ತೆಗಳು ಸಿಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಅವರು ಸಿವಿಲ್ ಸೇವೆಗೆ ಸೇರುವ ಬಗ್ಗೆ ಉತ್ಸುಕರಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
MUST WATCH
ಹೊಸ ಸೇರ್ಪಡೆ
Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ