ಭಾಯಂದರ್ ಮಂಥನ್ ಸಾಮಾಜಿಕ ಸೇವಾ ಸಂಸ್ಥೆ; ಉಚಿತ ಆರೋಗ್ಯ ತಪಾಸಣೆ ಶಿಬಿರ
Team Udayavani, Sep 7, 2021, 2:24 PM IST
ಭಾಯಂದರ್: ಭಾಯಂದರ್ ಪೂರ್ವದ ಮಂಥನ್ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವು ಸೆ. 1 ರಂದು ಅಪರಾಹ್ನ 4ರಿಂದ ರಾತ್ರಿ 9ರ ವರೆಗೆ ನವಘರ್ ರೋಡ್ನ ಸಾಯಿಪಾರ್ಕ್ ವಸತಿ ಸಂಕೀರ್ಣದ ಆವರಣದಲ್ಲಿ ನಡೆಯಿತು.
ಸ್ಥಳೀಯ ಶಾಸಕ ಪ್ರತಾಪ್ ಸರ್ನಾಯಕ್ ಮಾರ್ಗದರ್ಶನದಲ್ಲಿ ಹಾಗೂ ವಾರ್ಡ್ ನಂಬರ್ ಮೂರರ ಶಿವಸೇನೆ ಶಾಖೆಯ ಸಂಪೂರ್ಣ ಸಹಕಾರ ದೊಂದಿಗೆ ಮಂಥನ್ ಸಾಮಾಜಿಕ ಸಂಸ್ಥೆಯ ಅಧ್ಯಕ್ಷ, ಸಮಾಜ ಸೇವಕ ರಾಜೇಶ್ ವೆತೋಸ್ಕರ್ ಅವರ ಮುಂದಾಳತ್ವದಲ್ಲಿ ನಡೆದ ಈ ಶಿಬಿ ರದಲ್ಲಿ ತುಳು-ಕನ್ನಡಿಗರು ಸಹಿತ ಸುಮಾರು 297 ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.
ಇದನ್ನೂ ಓದಿ:ಯುವಕರಿಗೆ ಹೇಳಿ ಮಾಡಿಸಿದಂತಿದೆ ನಾಯ್ಸ್ ಫಿಟ್ ಕೋರ್ ಸ್ಮಾರ್ಟ್ ವಾಚ್..! ಇಲ್ಲಿದೆ ಮಾಹಿತಿ
ಮುಬಯಿ, ನಲಸೋಪರದ ರಿಯಲೇಬಲ್ ಪೆಥೋಲಜಿ ಲ್ಯಾಬ್ ಮತ್ತು ತಾಬ್ಡೆ ಆಪ್ಟಿಕಲ್ಸ್ನ ಸಿಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಾರ್ಡ್ ಕ್ರಮಾಂಕ ಮೂರರ ಶಿವಸೇನೆ ಶಾಖಾ ಅಧ್ಯಕ್ಷ ಶಶಿಕಾಂತ್ ನಾಯಕ್ ಮತ್ತು ಪದಾಧಿ ಕಾರಿಗಳು, ಸದಸ್ಯರು, ಮಂಥನ್ ಸಂಸ್ಥೆಯ ಸದಸ್ಯರಾದ ವೇಣು ಗೋಪಾಲ್ ಪುತ್ರನ್, ಸುಜಾತಾ ಕೋಟ್ಯಾನ್, ಹರೀಶ್ ಪೂಜಾರಿ, ಸಂಜಯ್ ಭಾಯಿ, ಪ್ರದೀಪ್ ತಾಬ್ಡೆ, ತಿಮ್ಮಪ್ಪ ಪೂಜಾರಿ ಮೊದಲಾದವರು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ
LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ