ಜಗ್ಗೇಶ್ ಮನೆಯ ಗಣಪನಿಗಿದೆ 34 ವರ್ಷಗಳ ಇತಿಹಾಸ|ಈ ವಿನಾಯಕನ ವೈಶಿಷ್ಟ್ಯ ಏನು ಗೊತ್ತಾ ?  


Team Udayavani, Sep 10, 2021, 6:57 PM IST

dxetre4

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್ ಅವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.

ಜಗ್ಗೇಶ್ ಅವರ ಮನೆಯಲ್ಲಿರುವ ಗಣೇಶನ ಮೂರ್ತಿಗೆ ತನ್ನದೆಯಾದ ಮಹತ್ವ ಇದೆ. ಪ್ರತಿವರ್ಷ ಜಗ್ಗೇಶ್ ಅದೇ ಗಣೇಶನನ್ನು ಕೂರಿಸಿ ಪೂಜೆ ಮಾಡುತ್ತಾರೆ. ಆದರೆ, ಆ ಗಣೇಶನನ್ನು ವಿಸರ್ಜನೆ ಮಾಡುವುದಿಲ್ಲವಂತೆ. ಜಗ್ಗೇಶ್ ಮನೆಯಲ್ಲಿರುವ ಹಳೆಯ ಗಣೇಶನ ಮಹತ್ವನನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವು ಕಷ್ಟದಲ್ಲಿದ್ದ ಸಮಯದಲ್ಲಿ ಕೊಂಡುಕೊಂಡ ಗಣೇಶನನ್ನು ಇಂದಿಗೂ ಆರಾಧನೆ ಮಾಡುವ ಬಗ್ಗೆ ಜಗ್ಗೇಶ್ ಅದರ ಮಹತ್ವವನ್ನು ಹೇಳಿದ್ದಾರೆ.

“ಈ ಗಣಪನಿಗೆ 34 ವರ್ಷ. 1987 ರಲ್ಲಿ ಬಿಡಿಗಾಸಿಲ್ಲದ ದಿನಗಳು. ರವಿಚಂದ್ರನ್ ರವರ ರಣಧೀರ ಚಿತ್ರೀಕರಣ ಸಮಯ. ಅವರ ಸಂಸ್ಥೆಯಲ್ಲಿ 500ರೂ. ಸಂಬಳ ಪಡೆದು ನಾನು ಪರಿಮಳ ಮಲ್ಲೇಶ್ವರ 10ನೆ ಕ್ರಾಸ್ ಜೀರಿಗೆ ವ್ಯಾಯಾಮ ಶಾಲೆ ಬಳಿ 20ರೂ. ಈ ಗಣಪನ ಕೊಂಡು ಮನೆಯಲ್ಲಿ ಇಟ್ಟು ಚಿತ್ರಿಕರಣಕ್ಕೆ 8ನೇ ಮೈಲಿ ಸ್ಟೋನ್ ಮೆಡೋ ಮನೆಗೆ ಓಡಿದೆ” ಎಂದು ಹೇಳಿದ್ದಾರೆ.

“ನನ್ನ ಗ್ರಹಚಾರಕ್ಕೆ ಅಂದು ಚಿತ್ರಿಕರಣ ರಾತ್ರಿ 2 ಘಂಟೆಗೆ ಮುಗಿಯಿತು. ಪಾಪ ಪರಿಮಳ ನನಗಾಗಿ ನಿದ್ರೆ ಮಾಡದೆ ಕಾಯುತ್ತಿದ್ದಳು. ಆಗ ಮನೆಗೆ ಬಂದು ಸ್ನಾನ ಮಾಡಿ ಗಣಪತಿ ವ್ರತ ಶುರುಮಾಡಿ ಬೆಳಗಿನ ಜಾವ 5ಕ್ಕೆ ಮುಗಿಸಿ ಗಣಪನಿಗೆ ಪ್ರಾರ್ಥಿಸಿದೆ. ಗಣಪ ಎಲ್ಲರೂ ಪೂಜೆ ನಂತರ ನಿನ್ನ ವಿಸರ್ಜನೆ ಮಾಡಿ ಬಿಡುತ್ತಾರೆ ನಾನು ಮಾತ್ರ ನಿನ್ನ ನನ್ನ ಕೊನೆ ಉಸಿರಿನವರೆಗೂ ಇಟ್ಟುಕೊಳ್ಳುವೆ ಎಂದು ಸಂಕಲ್ಪ ಮಾಡಿದೆ” ಎಂದು ಅಂದು ಮಾಡಿದ ಸಂಕಲ್ಪದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

“ಅದರಂತೆ ಇಂದಿಗೂ ಈ ಗಣಪನೆ ನನ್ನ ಆತ್ಮೀಯ ಬಂಧು. ಇಂದು ಇವನಿಗೆ ಪೂಜೆ ಮಾಡುವಾಗ ನನ್ನ ಬೆಳವಣಿಗೆ ನೆನೆದು ಆಶ್ಚರ್ಯ ಅನುಭವ ಆಯಿತು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಶ್ರದ್ಧಾವಾನ್ ಲಭತೆ ಜ್ಞಾನಂ. ಶ್ರದ್ಧೆ ಇದ್ದ ಜಾಗದಲ್ಲಿ ಸರ್ವ ಜ್ಞಾನ ನೀಡುವೆ ಎಂದು ಧನ್ಯೋಸ್ಮಿ. ಈ ಗಣಪನಿಗೆ ನನ್ನ ಹಿರಿಮಗ ಗುರುರಾಜನಿಗೆ ಒಂದೆ ವಯಸ್ಸು 34 ವರ್ಷಗಳು. ನಂಬಿಕೆಗೆ ಕೆಡುಕಿಲ್ಲಾ ಗೆದ್ದೆ ಗೆಲ್ಲುವ ಅದಕ್ಕೆ 4 ಬಾರಿ ತೀರ್ಪು ಎಂದರು ತಮಿಳು ಕವಿ ಭಾರತೀಯಾರ್. ಸರ್ವರಿಗು ಗಣಪನ ಹಬ್ಬದ ಶುಭಾಶಯ” ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

ಜಗ್ಗೇಶ್ ಅವರಿಗೆ ಅನೇಕರು ಕಾಮೆಂಟ್ ಮಾಡಿ 34 ವರ್ಷಗಳಾದರು ಏನು ಆಗಿಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಣ್ಣಿನ ಗಣಪತಿ ಇಷ್ಟು ವರ್ಷಗಳಾದರೂ ಏನು ಆಗಿಲ್ಲವಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗಕರಿಗೆ ಜಗ್ಗೇಶ್, “ತುಂಬಾ ಎಚ್ಚರದಿಂದ ಕಾಪಾಡಿರುವೆ” ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.