ಲಂಕೆಯೊಳಗೆ ಮಾಸ್ ಮಿಂಚು
Team Udayavani, Sep 12, 2021, 2:10 PM IST
ಒಂದೊಳ್ಳೆಯ ಕಥೆ, ಮಾಸ್ ಆಡಿಯನ್ಸ್ಗೆಇಷ್ಟವಾಗುವ ಡೈಲಾಗ್, ಹೈವೋಲ್ಟೇಜ್ ಫೈಟ್,ಜೊತೆಗೆ ಒಂಚೂರು ಲವ್, ಸೆಂಟಿಮೆಂಟ್…ಇವಿಷ್ಟದ್ದರೆ ಒಂದು ಸಿನಿಮಾವನ್ನು ಆರಾಮವಾಗಿಕುಳಿತು ನೋಡಬಹುದು.
ಒಬ್ಬ ನಿರ್ದೇಶಕನಾದವನು ಇವಿಷ್ಟನ್ನು ಜಾಣ್ಮೆಯಿಂದ ಜೋಡಿಸಿಕೊಡುವುದಷ್ಟೇ ಮುಖ್ಯವಾಗುತ್ತದೆ. ಈವಿಚಾರದಲ್ಲಿ “ಲಂಕೆ’ ಚಿತ್ರದ ನಿರ್ದೇಶಕರಪೂರ್ವತಯಾರಿ ತೆರೆಮೇಲೆ ಎದ್ದು ಕಾಣುತ್ತದೆ. ಹೌದು, ಈ ವಾರ ತೆರೆಕಂಡಿರುವಲೂಸ್ ಮಾದ “ಯೋಗಿ’ ಅಭಿನಯದ”ಲಂಕೆ’ ಚಿತ್ರ ಮಾಸ್ ಆಡಿಯನ್ಸ್ಗೆ ಖಂಡಿತಾ ಇಷ್ಟವಾಗುತ್ತದೆ.
ಆ ಮಟ್ಟಿಗೆ ಇಡೀ ಸಿನಿಮಾವನ್ನುಔಟ್ ಅಂಡ್ ಔಟ್ಕಮರ್ಷಿಯಲ್ ಆಗಿಕಟ್ಟಿಕೊಟ್ಟಿದ್ದಾರೆ. ಇಲ್ಲಿ ನಿರ್ದೇಶಕರ ಟಾರ್ಗೆಟ್ಆಡಿಯನ್ಸ್ ಮಾಸ್. ಜೊತೆಗೆ ಫ್ಯಾಮಿಲಿ. ಆನಿಟ್ಟಿನಲ್ಲಿ ಚಿತ್ರದಲ್ಲಿ ಹೊಡೆದಾಟ,ಬಡಿದಾಟದ ಜೊತೆಗೆ ಲವ್,ಸೆಂಟಿಮೆಂಟ್ ಅಂಶಗಳನ್ನುಕೂಡಾನೀಟಾಗಿ ಜೋಡಿಸಿದ್ದಾರೆ.ಚಿತ್ರದಲ್ಲಿ ಅಂಡರ್ವರ್ಲ್ಡ್,ವಿಲನ್ವೊಬ್ಬಳ ಆಟ ಈ ಮಧ್ಯೆ ಸೆಂಟಿಮೆಂಟ್… ಹೀಗೆ ಸಾಕಷ್ಟುಅಂಶಗಳೊಂದಿಗೆ ಸಿನಿಮಾಸಾಗುತ್ತದೆ.
ಇದನ್ನೂ ಓದಿ:ರಗಡ್ ಲುಕ್ ನಲ್ಲಿ ಲಂಕಾಸುರ
ಸಮಾಜ ಸೇವಕಿ ಮುಖವಾಡದ ಹಿಂದಿನಕರಾಳ ಮುಖ, ಮತ್ತೂಬ್ಟಾಕೆಯ ಮಾತೃಹೃದಯ, ಸಿಟ್ಟಿಗೆ ಬಲಿಯಾಗಿ ಜೈಲಿಗೆಹೋಗಿ ಬಂದಿರುವ ನಾಯಕ… ಈ ಅಂಶಗಳನ್ನುನಿರ್ದೇಶಕರು ಎಲ್ಲೂ ಬೋರ್ ಆಗದಂತೆಜೋಡಿಸಿದ್ದಾರೆ. ಮಂದಾರ ದೇವಿ, ಪಾವನಿಹಾಗೂ ರಾಮ್ ಈ ಮೂರು ಪಾತ್ರಗಳ ಮೂಲಕಮೂರು ವಿಭಿನ್ನ ಮನಸ್ಥಿತಿಗಳನ್ನು ತೆರೆದಿಡುವಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.ಎಲ್ಲಾ ಓಕೆ, ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು.
ಚಿತ್ರದಲ್ಲಿ ನಾಯಕ ರಾಮ್ನದ್ದು ರಾಮಣ ತೇಜಸ್ಸು ಹಾಗೂ ರಾವಣನ ವರ್ಚಸ್ಸು.ಅನ್ಯಾಯವನ್ನು ಸಹಿಸುವ ವ್ಯಕ್ತಿತ್ವ ಅವನದ್ದಲ್ಲ.ಹೀಗಿರುವಾಗ ಮಂದಾರ ದೇವಿ ಎಂಬ ಖತರ್ನಾಕ್ ಲೇಡಿಯ ಎಂಟ್ರಿ. ಆಕೆ ನಡೆಸುತ್ತಿರುವವೇಶ್ಯಾವಾಟಿಕೆ ದಂಧೆಗೆ ಬಲಿಯಾಗುತ್ತಿರುವಅಮಾಯಕ ಹೆಣ್ಣು ಮಕ್ಕಳು… ಹೀಗೆ ಟ್ವಿಸ್ಟ್ಮೇಲೆ ಟ್ವಿಸ್ಟ್ನೊಂದಿಗೆ ಸಾಗುವಕಥೆಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತದೆ.ಹೈವೋಲ್ಟೆàಜ್ ಫೈಟ್ಗಳ ಜೊತೆ ಚಿತ್ರದ ಹಾಡುಗಳು ಇಷ್ಟವಾಗುತ್ತವೆ. ಪ್ರತಿ ಹಾಡನ್ನು ಆಯಾಸನ್ನಿವೇಶಕ್ಕೆ ತಕ್ಕಂತೆ ಕಟ್ಟಿಕೊಡಲಾಗಿದೆ.
ಪಕ್ಕಾಕಮರ್ಷಿಯಲ್ ಮಾಸ್ ಸಿನಿಮಾವೊಂದನ್ನುಕಣ್ತುಂಬಿಕೊಳ್ಳಬೇಕೆಂದು ಬಯಸುವವರಿಗೆ”ಲಂಕೆ’ ಇಷ್ಟವಾಗುತ್ತದೆ. ಚಿತ್ರದಲ್ಲಿ ರಾಮ್ ಆಗಿಕಾಣಿಸಿಕೊಂಡ ಯೋಗಿ ತಮ್ಮ ಪಾತ್ರಕ್ಕೆ ನ್ಯಾಯಒದಗಿಸಿದ್ದಾರೆ. ಹಾಡು, ಫೈಟ್ನಲ್ಲಿ ಯೋಗಿ ಸ್ವಲ್ಪಹೆಚ್ಚೇ ಇಷ್ಟವಾಗುತ್ತಾರೆ. ಫ್ಲ್ಯಾಶ್ಬ್ಯಾಕ್ನಲ್ಲಿ ಬರುವಪಾತ್ರವೊಂದರಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.ಉಳಿದಂತೆ “ಮಂದಾರ ದೇವಿ’ಯಾಗಿ ಕಾವ್ಯ,”ಪಾವನಿ’ಯಾಗಿ ಕೃಷಿ ಗಮನ ಸೆಳೆದರೆ,ಶೋಭರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರಪ್ರಸಾದ್, ವಾಣಿಶ್ರೀ, ಎಸ್ತಾರ್ ನರೋನ ಸೇರಿದಂತೆಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ