ನಟ ಗೋವಿಂದ – ಕೃಷ್ಣ ಅಭಿಷೇಕ್ ಕುಟುಂಬ ಕಲಹ ಬಹಿರಂಗ
Team Udayavani, Sep 12, 2021, 9:48 PM IST
ಮುಂಬೈ: ಖ್ಯಾತ ಬಾಲಿವುಡ್ ನಟ ಗೋವಿಂದ ಹಾಗೂ ಅವರ ಸೋದರಳಿಯ ಕೃಷ್ಣ ಅವರ ನಡುವಿನ ಜಗಳ ಇದೀಗ ಬೀದಿಗೆ ಬಿದ್ದಿದೆ.
ನಟ ಗೋವಿಂದ ಕುಟುಂಬದ ಜೊತೆ ತಮ್ಮ ಪತಿಯ ಜಗಳದ ಬಗ್ಗೆ ಇಂದು ಮಾತನಾಡಿರುವ ಹಾಸ್ಯ ನಟ ಕೃಷ್ಣ ಅವರ ಪತ್ನಿ ಹಾಗೂ ನಟಿ ಕಾಶ್ಮೇರಾ ಶಾ, ಕಳೆದ ಐದು ವರ್ಷಗಳಿಂದ ಈ ಜನರು (ಗೋವಿಂದ್ ಫ್ಯಾಮಿಲಿ) ಜೊತೆಗಿನ ಸಂಬಂಧ ನಾನು ಕಳೆದುಕೊಂಡಿದ್ದೇನೆ. ನನಗೆ ಇವರ ಜಗಳದ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ಇನ್ನು ಇತ್ತೀಚಿಗೆ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಕೃಷ್ಣ ಅಭಿಷೇಕ್ ಇರದಿದ್ದರೆ ಮಾತ್ರ ನಾವು ಬರುತ್ತೇವೆ ಎಂದು ನಟ ಗೋವಿಂದ ಪತ್ನಿ ಸುನೀತಾ ಅಹುಜಾ ಶರತ್ತು ಹಾಕಿದ್ದರಂತೆ. ಹಾಗಾಗಿ ಕೃಷ್ಣ ಅವರು ಗೋವಿಂದ ಎಪಿಸೋಡ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ‘ನಮ್ಮ ಮಧ್ಯೆ ಇರುವ ಸಮಸ್ಯೆ ಎಂದಿಗೂ ಬಗೆಹರಿಯೋದಿಲ್ಲ, ನನಗೆ ಎಂದಿಗೂ ಕೃಷ್ಣ ಅಭಿಷೇಕ್ ಮುಖ ನೋಡಲು ಇಷ್ಟವಿಲ್ಲ’ ಎಂದು ಸುನೀತಾ ಅಹುಜಾ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆಯೇ ಗೋವಿಂದ ಹಾಗೂ ಕೃಷ್ಣ ಅಭಿಷೇಕ್ ಸಂಬಂಧ ಮುರಿದು ಬಿದ್ದಿತ್ತು. ಕೃಷ್ಣಾ ಪತ್ನಿ ಕಶ್ಮೆರಾ ನಡವಳಿಕೆಯಿಂದ ಸುನೀತಾ ಅವರಿಗೆ ಬೇಸರ ಆಗಿದೆಯಂತೆ. ಆದರೆ ಸಮಸ್ಯೆ ಏನೂ ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ