ರಾಸು ಸಾವನ್ನಪ್ಪಿದರೂ ಅಧಿಕಾರಿಗಳ ಮೌನ
Team Udayavani, Sep 27, 2021, 3:19 PM IST
ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವೇ ಹೋಬಳಿ ಸುತ್ತಮುತ್ತ ಕಾಲುಬಾಯಿ ಜ್ವರ ಉಲ್ಬಣವಾಗಿರುವಹಿನ್ನೆಲೆ 150ಕ್ಕೂ ಅಧಿಕ ಕುರಿ, 10ಕ್ಕೂ ಹೆಚ್ಚು ಮೇಕೆ, ದನ-ಕರುಗಳು ಸಾವನ್ನಪ್ಪಿದೆ.ಆದರೂ, ಪಶು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಧೋಗತಿ: ಹರವೇ ಹೋಬಳಿ ವ್ಯಾಪ್ತಿಯ ಹಳೇಪುರ, ಕೇತಹಳ್ಳಿ, ಹೊಸಹಳ್ಳಿ,ಮುಕ್ಕಡಹಳ್ಳಿ, ಮಲಿಯೂರು ಸೇರಿ ಇನ್ನಿತರಹಲವು ಗ್ರಾಮಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವ ಪರಿಣಾಮ ಒಂದೇಮನೆಯಲ್ಲಿ ಸುಮಾರು 4ರಿಂದ 5 ಕುರಿ,ಮೇಕೆ ಸಾವನ್ನಪ್ಪಿದೆ. ಇದರಿಂದಹೈನುಗಾರಿಕೆಯನ್ನೇ ನಂಬಿ ಜೀವನನಡೆಸುತ್ತಿರುವ ರೈತರ ಬದುಕು ಅಧೋಗತಿಗೆ ತಲುಪಿದೆ.
ಕಳೆದ 1 ತಿಂಗಳಿಂದ ಕಾಲುಬಾಯಿ ಜ್ವರ ಉಲ್ಬಣವಾಗುತ್ತಿದ್ದರೂ ಪಶು ಪಾಲನಾಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ. ಇದರಿಂದ ಪ್ರತಿ ದಿನವೂ ಮೇಕೆ, ಕುರಿ, ಹಸುಸಾವನ್ನಪ್ಪುತ್ತಿವೆ. ಶೀಘ್ರ ಸೂಕ್ತ ಚಿಕಿತ್ಸೆನೀಡದಿದ್ದರೆ ರೋಗ ಮತ್ತಷ್ಟು ವ್ಯಾಪಿಸಿ ಹೆಚ್ಚಿನಅನಾಹುತ ಸಂಭವಿಸಲಿದೆ ಎಂದು ಸ್ಥಳೀಯರಾದ ಗಿರೀಶ್ ತಿಳಿಸಿದರು.
ತಿಳಿವಳಿಕೆ ನೀಡದ ಇಲಾಖೆ: ಪಶು ಪಾಲನಾ ಇಲಾಖೆ ಅಧಿಕಾರಿಗಳು ಹರವೇ ಭಾಗದಯಾವೊಂದು ಗ್ರಾಮಕ್ಕೂ ತೆರಳುತ್ತಿಲ್ಲ. ಕಾಲುಬಾಯಿ ಜ್ವರ ಹರಡುವ ಕುರಿತು ಸ್ಥಳೀಯರಿಗೆಅರಿವಿಲ್ಲದ ಕಾರಣ ಈಗಾಗಲೇ ಅಧಿಕ ಮೇಕೆಗಳು ಸಾವನ್ನಪ್ಪಿವೆ.
ಮನೆಗೆ ಬಂದು ಚಿಕಿತ್ಸೆ ನೀಡಿ: ಕೆಲವು ಆಸ್ಪತ್ರೆಗಳಿಗೆ ಜ್ವರ ಲಸಿಕೆ ನೀಡುತ್ತಿದ್ದಾರೆ. ಇದರಿಂದ ರೋಗ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ. ಹೀಗಾಗಿ ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕೆಂದು ಹರವೇ ರೈತ ಮಹೇಶ್ ಆಗ್ರಹಿಸಿದರು.
ಸೂಕ್ತ ಪರಿಹಾರಕ್ಕೆ ಮಾಲಿಕರಿಂದ ಒತ್ತಾಯ: ಕಾಲು ಬಾಯಿ ರೋಗಕ್ಕೆ ತುತ್ತಾಗಿ ಸುಮಾರು 150ಕ್ಕೂ ಹೆಚ್ಚು ಕುರಿ, ಮೇಕೆ ಸಾವನ್ನಪ್ಪಿದ್ದು ರೈತರಿಗೆ ಸಾಕಷ್ಟು ನಷ್ಟವಾಗಿದೆ. ಈಹಿನ್ನೆಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಮೃತಪಟ್ಟ ಸಾಕುಪ್ರಾಣಿ ಮಾಲಿಕರಿಗೆಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು
ಹರವೇ ಭಾಗದಲ್ಲಿ ಕಾಲುಬಾಯಿ ಜ್ವರದಿಂದ ಮೇಕೆ-ಕುರಿ ಸಾವನ್ನಪ್ಪಿರುವ ವಿಷಯ ತನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಪಶುವೈದ್ಯರನ್ನು ಮನೆ ಮನೆಗಳಿಗೆ ಕಳುಹಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುವುದು.– ಡಾ.ಶಿವಣ್ಣ, ಸಹಾಯಕ ನಿರ್ದೇಶಕರು, ಚಾಮರಾಜನಗರ
30 ರಾಸು, ಕುರಿಗಳಿಂದ ಜೀವನ ಸಾಗಿಸುತ್ತಿದ್ದೇನೆ. ಇದೀಗ ಕಾಲು ಬಾಯಿ ಜ್ವರದಿಂದ 4 ಕುರಿ ಸಾವನ್ನಪ್ಪಿದೆ. ಶೀಘ್ರ ಚಿಕಿತ್ಸೆ ಕೊಡದಿದ್ದರೆ ಮತ್ತಷ್ಟು ಕುರಿ ಸಾವನ್ನಪ್ಪುವ ಮುನ್ಸೂಚನೆ ಇದೆ.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಬೇಕು. ಜತೆಗೆ ಸಾವನ್ನಪ್ಪಿರುವ ಕುರಿಗಳಿಗೆ ಪರಿಹಾರ ಕೊಡಬೇಕು. – ರಾಜಶೇಖರ್ ಮೂರ್ತಿ, ಕುರಿ ಮಾಲಿಕ
– ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ