ಈಜುಕೊಳಕ್ಕೆ ಕೂಡಿ ಬಾರದ ಮುಹೂರ್ತ

ಪ್ರಾರಂಭವಾಗದಿರುವ ಏಕೈಕ ಯಾವುದಾದರೂ ಇದ್ದರೆ ಈಜುಕೊಳ ಮಾತ್ರವಾಗಿದೆ.

Team Udayavani, Sep 28, 2021, 6:18 PM IST

ಈಜುಕೊಳಕ್ಕೆ ಕೂಡಿ ಬಾರದ ಮುಹೂರ್ತ

ಕಲಬುರಗಿ: ಜಿಮ್‌, ಮಾಲ್‌, ಚಲನಚಿತ್ರ ಮಂದಿರ ಹೀಗೆ ಎಲ್ಲವೂ ಪ್ರಾರಂಭವಾಗಿದೆ. ಎಲ್ಲ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗಿವೆ. ಆದರೆ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ನಗರದ ಏಕೈಕ ಈಜುಕೊಳ ಮಾತ್ರ ಪ್ರಾರಂಭವಾಗುತ್ತಿಲ್ಲ. ಕೋವಿಡ್‌-19 ಪ್ರಥಮ ಅಲೆ ಸಂದರ್ಭದಲ್ಲಿ ಅಂದರೆ 2020ರ ಮಾರ್ಚ್‌ ತಿಂಗಳಲ್ಲಿ ಬಂದಾಗಿರುವ ಇಲ್ಲಿನ ಚಂದ್ರಶೇಖರ ಪಾಟೀಲ್‌ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಮತ್ತೆ ಪ್ರಾರಂಭವಾಗುತ್ತಿಲ್ಲ.

ಒಂದುವರೆ ವರ್ಷದಿಂದ ಈಜುಕೊಳ ಸಂಪೂರ್ಣ ಬಂದಾಗಿದ್ದು, ಈಜು ಪ್ರಿಯರು ಈಜುಕೊಳ ಯಾವಾಗ ಕಾರ್ಯಾರಂಭವಾಗುತ್ತದೆ ಎಂಬುದನ್ನು ಬಕಪ್ಷಕಿಯಂತೆ ಕಾಯುತ್ತಿದ್ದಾರೆ. ಈಜುಕೋಳದಲ್ಲಿ ನೀರು ಭರ್ತಿ ಮಾಡಲಾಗಿದೆ. ಈಜುಕೊಳ ಬಳಕೆಯಾಗದೇ ಇರುವುದರಿಂದ ನೀರು ಕಶ್ಮಲವಾಗುವ ಸಾಧ್ಯತೆಗಳೇ ಹೆಚ್ಚು. ಕೋವಿಡ್‌ ಮೊದಲ ಅಲೆ ಕಡಿಮೆಯಾದ ನಂತರ ಎಲ್ಲ ವಾಣಿಜ್ಯ ಚಟುವಟಿಕೆಗಳು ಹಾಗೂ ಇತರ ಎಲ್ಲ ವಿಧಧ ಮನರಂಜನಾ ಕಾರ್ಯಗಳು ಪುನಾರರಂಭಗೊಂಡಿದ್ದರೂ ಈ ಈಜುಕೊಳ ಮಾತ್ರ ಪ್ರಾರಂಭವಾಗಲೇ ಇಲ್ಲ. ಆದರೆ ಈಗ ಎರಡನೇ ಅಲೆ ನಿಯಂತ್ರಣಗೊಂಡ ಮೇಲಂತು ಎಲ್ಲ ವಹಿವಾಟು ಹಾಗೂ ಮನೋರಂಜನೆಯ ಎಲ್ಲ ಕಾರ್ಯಗಳು ಪುನಾರರಂಭಗೊಂಡಿವೆ.

ಆದರೆ ಪ್ರಾರಂಭವಾಗದಿರುವ ಏಕೈಕ ಯಾವುದಾದರೂ ಇದ್ದರೆ ಈಜುಕೊಳ ಮಾತ್ರವಾಗಿದೆ. ಕಲಬುರಗಿ ಮೊದಲೇ ಬಿಸಿಲು ನಾಡು. ಈಜಾಡುವುದು ತುಂಬಾನೇ ಆಸಕ್ತಿದಾಯಕವಾಗಿದೆ. ಈಜುಕೊಳ ಪ್ರಾರಂಭವಾದರೆ ದಿನಾಲು 250ರಿಂದ 300 ಜನರು ಈಜಾಡುತ್ತಾರೆ. ಒಂದುವರೆ ವರ್ಷದಿಂದ ಈಜುಕೊಳ ಬಂದಾಗಿದ್ದರಿಂದ ಎಲ್ಲವೂ ಅಸ್ತವ್ಯಸ್ಥಗೊಂಡಿದೆ. ಈಜಾಡುವ ಮುಂಚೆ ಹಾಗೂ ನಂತರ ಸ್ನಾನ ಮಾಡುವ ರೂಂಗಳು ಹಾಗೂ ಶೌಚಾಲಯ ವ್ಯವಸ್ಥೆ
ಉಪಯೋಗಕ್ಕೆ ಬಾರದಂತಾಗಿವೆ. ಈಗ ಅವುಗಳನ್ನೆಲ್ಲ ದುರಸ್ತಿಪಡಿಸುವುದು ಅತಿ ಜರೂರಾಗಿದೆ.

ಸಂಕಷ್ಟದಲ್ಲಿ ಈಜು ಸ್ಪರ್ಧಾಗಾರರು: ಕಲಬುರಗಿಯ ಈಜುಕೊಳದಲ್ಲಿ ಅಂತಾರಾಷ್ಟ್ರೀಯ ಈಜುಕೊಳದ ಸ್ಪರ್ಧೆ ನಡೆದಿದೆ. ಅದಲ್ಲದೇ ವರ್ಷ ಇಪ್ಪತ್ತುಕ್ಕೂ ಹೆಚ್ಚು ಸ್ಪರ್ಧಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧಾ ಕೂಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆದರೆ ಒಂದುವರೆ ವರ್ಷದಿಂದ ಈಜುಕೋಳ ಬಂದಾಗಿದ್ದರಿಂದ ಈಜು ಸ್ಪರ್ಧೆಗೆ ನೆಲೆ ಇಲ್ಲ ಎನ್ನುವಂತಾಗಿದೆ.

ಸಿಬ್ಬಂದಿಯೂ ಇಲ್ಲ ಸಂಬಳವೂ ಇಲ್ಲ: ಈಜುಕೊಳ ನಿರ್ವಹಣೆಗೆ ತರಬೇತಿದಾರರಿಂದ ಹಿಡಿದು 9 ಜನ ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲಾಗಿತ್ತು. ಈಜುಕೋಳ ಬಂದಾದ ನಂತರ ಮೊದಲ ಮೂರು ತಿಂಗಳ ಸಂಬಳ ನೀಡಲಾಯಿತು. ನಂತರ ಸಂಬಳ ನೀಡದೇ ಇದ್ದುದ್ದಕ್ಕೆ ಆರು ಜನ ಬಿಟ್ಟು ಹೋಗಿದ್ದಾರೆ. ಈಗೇನಿದ್ದರೂ ಮೂರು ಜನ ಉಳಿದಿದ್ದಾರೆ. ಪ್ರಾದೇಶಿಕ ಆಯುಕ್ತರೇ ಈಜುಕೊಳ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರಾದರೂ ಆಸಕ್ತಿ ವಹಿಸಿ ಈಜುಕೊಳದ ಅಭಿವೃದ್ಧಿಗೆ ಒತ್ತು ನೀಡಿದ್ದರೆ ಹಾಗೂ ನೌಕರರಿಗೆ ಸಂಬಳ ನೀಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ಈಗಲಾದರೂ ಈಜುಕೊಳ ಪ್ರಾರಂಭವಾಗಿ ಜನರಿಗೆ ಈಜಾಡುವ ಅವಕಾಶ ಕಲ್ಪಿಸಲಿ ಎನ್ನುವುದೇ ಜನಾಶಯವಾಗಿದೆ.

ತರಬೇತಿಗೆ ಮೊದಲು ಅವಕಾಶ
ಈಜುಕೋಳ ಈಗ ಈಜು ತರಬೇತಿಗೆ ಮಾತ್ರ ಅವಕಾಶ ಕಲ್ಪಿಸಿ, ತದನಂತರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲು ಮುಂದಾಗಲಾಗುತ್ತಿದೆ ಎನ್ನಲಾಗುತ್ತಿದೆ. ಒಟ್ಟಾರೆ ಮೊದಲು ಈಜು ಸ್ಪರ್ಧಾರುಗಾರರಿಗೆ ಅವಕಾಶ ದೊರೆಯಲಿ. ಮುಂದಿನ ತಿಂಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧಾಕೂಟ ನಡೆಯುತ್ತಿದೆ. ಹೀಗಾಗಿ ಈಜುಕೊಳ ಪ್ರಾರಂಭವಾಗಿ ಉತ್ತಮ ತರಬೇತಿ ನಡೆದು ಉತ್ತಮ ಪ್ರದರ್ಶನ ತೋರಲಿ ಎನ್ನುವುದು ತರಬೇತಿದಾರರ ಆಶಯವಾಗಿದೆ.

ಈಜುಕೋಳ ಪ್ರಾರಂಭ ನಿಟ್ಟಿನಲ್ಲಿ ನಿಯಮಾವಳಿ ಬಂದಿದ್ದು, ಎರಡ್ಮೂರು ದಿನದೊಳಗೆ ಸಭೆ ನಡೆಸಿ ನಾಲ್ಕೈದು ದಿನದೊಳಗೆ ಈಜುಕೊಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸುಧಾರಣೆಗೈದು ಈಜುಕೊಳ ಪ್ರಾರಂಭಿಸಲಾಗುವುದು.
ಆರ್‌.ಜಿ. ನಾಡಿಗೇರ,
ಸಹಾಯಕ ನಿರ್ದೇಶಕರು,
ಜಿಲ್ಲಾ ಯುವಜನ
ಸೇವಾ ಕ್ರೀಡಾ ಇಲಾಖೆ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.