ಇ-ತಿಮ್ಮಸಂದ್ರ  ಗ್ರಾಪಂನಿಂದ ಮಾದರಿ ಲೈಬ್ರರಿ


Team Udayavani, Sep 29, 2021, 2:22 PM IST

ಇ-ತಿಮ್ಮಸಂದ್ರ  ಗ್ರಾಪಂನಿಂದ ಮಾದರಿ ಲೈಬ್ರರಿ

ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಯಡಿ ಬಹುಮಾನ್‌ ಚೆಕ್‌ ಡ್ಯಾಂ, ಅಂಗನವಾಡಿ, ಶಾಲಾಕಟ್ಟಡಗಳಿಗೆ ಹೊಸ ರೂಪ ನೀಡುವ ಮೂಲಕಗಮನ ಸೆಳೆದಿದ್ದ ಜಿಲ್ಲೆ ಈಗ, ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನರ್ಜನೆ ಹೆಚ್ಚಿಸಲು ಸುಸಜ್ಜಿತ ಗ್ರಂಥಾಲಯ ನಿರ್ಮಿಸಿ ಮಾದರಿ ಆಗಿದೆ.

ಜಿಲ್ಲೆಯಲ್ಲಿ ಸಿಇಒ ಆಗಿದ್ದ ಫೌಝಿಯಾ ತರುನ್ನಮ್‌ ನರೇಗಾ ಯೋಜನೆ ಪರಿಣಾಮಕಾರಿ ಆಗಿ ಅನುಷ್ಠಾನಗೊಳಿಸಿ ರಾಷ್ಟ್ರ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಗುರುತಿಸುವಂತೆ ಮಾಡಿದ್ದರು. ಗ್ರಾಮೀಣ ಮಕ್ಕಳ ಕಲಿಕೆಗೆ ಉತ್ತಮವಾತಾವರಣ ಒದಗಿಸಲು ಶಾಲಾ, ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿ ಗೊಳಿಸಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆಬೆಳೆಗಾರರಿಗೆ ಅನೇಕ ಸೌಲಭ್ಯ ಒದಗಿಸಿದ್ದರು.

ಗ್ರಾಮೀಣ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಜ್ಞಾನರ್ಜನೆ ಹೆಚ್ಚಿಸುವ ಸಲುವಾಗಿ ಡಿಜಿಟಲ್‌ ಲೈಬ್ರರಿ ಮಾಡುವ ಕನಸನ್ನುಜಿಪಂ ನಿಕಟಪೂರ್ವ ಸಿಇಒ ಫೌಝಿಯಾ ತರುನುಮ್‌ ಹೊಂದಿದ್ದರು. ಅದನ್ನು ಈಗಿನ ಸಿಇಒ ಪಿ. ಶಿವಶಂಕರ್‌ ನನಸು ಮಾಡಿದ್ದು, ಇದಕ್ಕೆ ತಾಲೂಕಿನ ಇ-ತಿಮ್ಮಸಂದ್ರದಲ್ಲಿನ ಗ್ರಂಥಾಲಯ ಸಾಕ್ಷಿಯಾಗಿದೆ.

ಸಕಲ ಸೌಲಭ್ಯ: ಇ-ತಿಮ್ಮಸಂದ್ರ ಗ್ರಾಪಂನ ಅಭಿವೃದ್ಧಿ ಅಧಿಕಾರಿ ತನ್ವೀರ್‌ ಅಹಮದ್‌ ವಿಶೇಷ ಆಸಕ್ತಿವಹಿಸಿಸಾರ್ವಜನಿಕ ಗ್ರಂಥಾಲಯವನ್ನು ಗ್ರಾಪಂನಿಂದವರ್ಣಮಯವಾಗಿಸಿದ್ದಾರೆ. ಇಡೀ ಗ್ರಂಥಾಲಯದ ವಾತಾವರಣವೇ ಬದಲಾಗಿದೆ. ಈ ಹಿಂದೆಗ್ರಂಥಾಲಯದಲ್ಲಿ ಓದುಗರು ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಇರಲಿಲ್ಲ. ಕಟ್ಟಡ ಸುಣ್ಣಬಣ್ಣ ಕಾಣದೇ ಹಳೇಯದ್ದಾಗಿತ್ತು. ಇದೀಗ ಓದುಗರುಉತ್ಸಾಹದಿಂದ ಗ್ರಂಥಾಲಯದತ್ತ ಹೆಜ್ಜೆ ಇಡುವಂತಹ ವಾತಾವರಣ ಸೃಷ್ಟಿಸಲಾಗಿದೆ.

ಪುಸ್ತಕಗಳ ಕೊಡುಗೆ: ಕೊಂಡೂರು ಫೌಂಡೇಷನ್‌ನಿಂದ 69, ಸ್ಮಿತ್‌ ಶಾ ಪವರ್‌ ಆಫ್‌ ಟೆನ್‌ ಟ್ರಸ್ಟ್ ನವರು ಪುಸ್ತಕಗಳು ಕೊಡುಗೆಯಾಗಿ ನೀಡಿದ್ದಾರೆ. ಗ್ರಾಪಂನಿಂದ ಸುಣ್ಣಬಣ್ಣ ಬಳಿದು ಗ್ರಂಥಾಲಯವನ್ನುಆಕರ್ಷಣೀಯ ಗೊಳಿಸಲಾಗಿದೆ. ಶಿಡ್ಲಘಟ್ಟ ತಾಲೂಕು ಕೇಂದ್ರದಿಂದ 40 ಕಿ.ಮೀ.ದೂರದಲ್ಲಿರುವ ಇ-ತಿಮ್ಮಸಂದ್ರ ಗ್ರಾಪಂ ಕೇಂದ್ರದಲ್ಲಿಜನ ಆಕರ್ಷಕ ಡಿಜಿಟಲ್‌ ಗ್ರಂಥಾಲಯ ನಿರ್ಮಿಸಿ ಓದುಗರಿಗಾಗಿ ಎರಡು ಕಂಪ್ಯೂಟರ್‌, ಸ್ಮಾರ್ಟ್‌ ಟೀವಿ ಒದಗಿಸಲಾಗಿದೆ. ಆನ್‌ಲೈನ್‌ ಮೂಲಕವೇ ( https://www.karnatakadigitalpubliclibrary.org/login )ನೋಂದಣಿ ಮಾಡಿಸಿ ಓದುಗರಿಗೆ ಅನುಕೂಲ ಕಲ್ಪಿಸಲಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳು ಜ್ಞಾನರ್ಜನೆ ಹೆಚ್ಚಿಸಿಕೊಳ್ಳಲು ಸಾರ್ವಜನಿಕ ಗ್ರಂಥಾಲಯ ಬಳಸಿಕೊಳ್ಳಬೇಕು, ಈನಿಟ್ಟಿನಲ್ಲಿ ಗ್ರಾಪಂ ಮೂಲಕ ಇ-ತಿಮ್ಮ ಸಂದ್ರ ಗ್ರಾಮದಲ್ಲಿ ಡಿಜಿಟಲ್‌ ಗ್ರಂಥಾಲಯ ಅಭಿವೃದ್ಧಿಗೊಳಿಸಲಾಗಿದೆ. ಅದನ್ನುಸಂರಕ್ಷಣೆ ಮಾಡಿಕೊಂಡು ಇಡೀ ರಾಜ್ಯಡಿದಲ್ಲಿ ಮಾದರಿ ಗ್ರಂಥಾಲಯವಾಗಿ ಅಭಿವೃದ್ಧಿ ಹೊಂದಲಿ.– ಚಂದ್ರಕಾಂತ್‌, ತಾಪಂ ಇಒ, ಶಿಡ್ಲಘಟ್ಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 157 ಗ್ರಾಪಂ ಪೈಕಿ 132ರಲ್ಲಿರುವ ಗ್ರಾಮೀಣ ಗ್ರಂಥಾಲಯಗಳನ್ನುಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗ್ರಾಮೀಣಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಿಗೆವರ್ಗಾಯಿಸಿದ ಬಳಿಕ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಜ್ಞಾನರ್ಜನೆ ಮತ್ತು ಮಾಹಿತಿ ಒದಗಿಸುವ ಸಲುವಾಗಿ ಗ್ರಾಪಂ ಅನುದಾನ ಬಳಸಿ ಕೊಂಡು ಉನ್ನತೀಕರಿಸಲಾಗುತ್ತಿದೆ. ಈಗಾಗಲೇ ಕೆಲ ಗ್ರಂಥಾಲಯ ಮಾದರಿಯಾಗಿ ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇ-ತಿಮ್ಮಸಂದ್ರ ಗ್ರಾಪಂ ಪಿಡಿಒ ಅತ್ಯುತ್ತಮ ಕೆಲಸ ಮಾಡಿದ್ದಾರೆ.– ಪಿ.ಶಿವಶಂಕರ್‌, ಜಿಪಂ ಸಿಇಒ, ಚಿಕ್ಕಬಳ್ಳಾಪುರ.

ಗ್ರಾಪಂ ಅನುದಾನ ಬಳಸಿ ಸಾರ್ವಜನಿಕ ಗ್ರಂಥಾಲಯ ಮಾದರಿ ಆಗಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಎಲ್ಲಾ ವಿಧವಾದ ಪುಸ್ತಕಗಳನ್ನು ನೀಡಲಾಗಿದೆ. ಹಲವುಪುಸ್ತಕಗಳನ್ನು ದಾನಿಗಳು ಕೊಡುಗೆ ನೀಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯಾರ್ಥಿಗಳಿಗೆಗ್ರಂಥಾಲಯದಿಂದ ಹೆಚ್ಚಿನ ಅನುಕೂಲವಾಗಿದೆ.ತಾಲೂಕು ಕೇಂದ್ರದಿಂದ ದೂರವಿದ್ದರೂ ಗ್ರಾಪಂಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆಹೆಚ್ಚಿಸಿಕೊಳ್ಳಲು ಗ್ರಂಥಾಲಯ ಸಹಕಾರಿಯಾಗಿದೆ.– ತನ್ವೀರ್‌ಅಹಮದ್‌, ಪಿಡಿಒ, ಇ-ತಿಮ್ಮಸಂದ್ರ ಗ್ರಾಪಂ, ಶಿಡ್ಲಘಟ್ಟ ತಾಲೂಕು

-ಎಂ.ಎ.ಅಬ್ದುಲ್‌ ವಹಾಬ್‌

ಟಾಪ್ ನ್ಯೂಸ್

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.