ಶೇ.75 ಇಂಧನ ಉಳಿತಾಯ; ಹೊಗೆ ಕಡಿಮೆ, ಆರೋಗ್ಯಕ್ಕೆ ಉತ್ತಮ

ಮಿತ ಇಂಧನ ಬಳಕೆಗೆ ಸಹಕಾರಿ ಒಲೆ

Team Udayavani, Sep 30, 2021, 6:45 AM IST

ಶೇ.75 ಇಂಧನ ಉಳಿತಾಯ; ಹೊಗೆ ಕಡಿಮೆ, ಆರೋಗ್ಯಕ್ಕೆ ಉತ್ತಮ

ಕುಂದಾಪುರ: ಕೋಟೇಶ್ವರದ ಕೃಷ್ಣಯ್ಯ ಆಚಾರ್ಯ ಕೂರಾಡಿ ಅವರು ಕಲಿತದ್ದು ಎಸೆಸೆಲ್ಸಿ. ಮುಂದಿನ ಕಲಿಕೆಗೆ ಕೈಯಲ್ಲಿ ಹಣ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಶೈಕ್ಷಣಿಕ ಜೀವನ ಮೊಟಕುಗೊಳಿಸಿದ ಕೃಷ್ಣಯ್ಯ ಆಚಾರ್ಯ ಅವರು ಇಂದು ಎಂಜಿನಿಯರಿಂಗ್‌ ಕಲಿತವರು ಕೂಡ ಶಹಬಾಸ್‌ ಎನ್ನುವಂಥ ಸಂಶೋಧನೆ ಮಾಡಿದ್ದಾರೆ. ಈಚಿನ ಇವರ ಸಂಶೋಧನೆ ಎಂದರೆ ಮಿತ ಇಂಧನ ಬಳಕೆಯ ಒಲೆ.

ಏನಿದು ಒಲೆ?
ದರಳೆ (ಒಣ ಎಲೆ), ಕಸ, ಕಡ್ಡಿ, ಮರದ ತುಂಡು, ಗೆರಟೆ, ತೆಂಗಿನಕಾಯಿ ಸಿಪ್ಪೆ, ಅಡಿಕೆ ಸಿಪ್ಪೆ, ಪೇಪರ್‌ ಹೀಗೆ ಏನೇ ಕಸ ಹಾಕಿದರೂ ಸಾಕು ಎಂಬಷ್ಟು ಮಿತವಾಗಿ ಇಂಧನ ಬಳಕೆಯಾಗುವ ಒಲೆ ಇದು. ಇದರಲ್ಲಿ ಅನ್ನ, ಸಾರು ಬೇಯುವಾಗ ಜತೆಯಾಗಿ ಬಿಸಿನೀರು ಕಾಯಿಸುವ ವ್ಯವಸ್ಥೆಯಿದೆ. ಹೊಗೆ ಕಡಿಮೆ. ಇದ ರಿಂದಾಗಿ ಆರೋಗ್ಯಕ್ಕೂ ಕ್ಷೇಮ, ಜೇಬಿಗೂ ಹಿತಕರ. ಹಾಕಿದ ಇಂಧನ ಒಲೆಯ ಬುಡಕ್ಕೆ ಮುಂದೂಡಲು ಸೂð ಮಾದರಿಯನ್ನು ಬಳಸಿದ್ದಾರೆ. ಅಂತೆಯೇ ಬಿಸಿನೀರಿಗಾಗಿ ನೀರು ಹೊರಹೋಗುವ, ಒಳ ಬರುವ ಎರಡು ಪ್ರತ್ಯೇಕ ಪ್ರವೇಶಿಕೆಗಳನ್ನು ನೀಡಿದ್ದಾರೆ. ತಣ್ಣೀರು ಬರಲು ಟ್ಯಾಂಕ್‌ನಿಂದ ನೇರ ಸಂಪರ್ಕ ನೀಡಿ ಬಿಸಿ ನೀರು ಇನ್ನೊಂದು ಕೊಳವೆ ಮೂಲಕ ಹೋಗುವ ವ್ಯವಸ್ಥೆಯಿದೆ. ಟ್ಯಾಂಕ್‌ ಇಲ್ಲದಿದ್ದ ಮನೆ ಗಳಿಗೆ ನೀರು ತುಂಬಿಸುವ ಪ್ರತ್ಯೇಕ ವ್ಯವಸ್ಥೆಯೂ ಇದೆ.

ಆವಿಷ್ಕಾರ
ಕೋಟೇಶ್ವರದ ಸರ್ವಿಸ್‌ ರಸ್ತೆ ಬದಿ ಸಣ್ಣ ವೆಲ್ಡಿಂಗ್‌ ಶಾಪ್‌ ಹೊಂದಿರುವ ಆಚಾರ್ಯರು ತಮ್ಮ ವೆಲ್ಡಿಂಗ್‌ ವೃತ್ತಿಗಿಂತ ಹೆಚ್ಚು ಸಮಯ ಇಂತಹ ಸಂಶೋಧನೆಗೆ ಮೀಸಲಿಡುತ್ತಾರೆ.

ಇದನ್ನೂ ಓದಿ:ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗರಂ ಆದ ಹಾಲಾಡಿ ಶ್ರೀನಿವಾಸ ಶೆಟ್ಟಿ

ರೈಲು ತ್ಯಾಜ್ಯ ವಿಲೇಗೆ ಆವಿಷ್ಕಾರ
ಬೆಂಗಳೂರಿಗ ಹೋಗಿದ್ದಾಗ ರೈಲಿನಲ್ಲಿ ಪ್ರಯಾಣಿಕರು ಮಾಡಿದ ತ್ಯಾಜ್ಯ ಹಳಿ ಮೇಲೆ ಬೀಳುವುದು ಕಂಡರು. ನಿಲ್ದಾಣಗಳಲ್ಲಿ ದುರ್ವಾಸನೆಗೆ ಕಾರಣವಾಗುವ, ಮೆಕಾನಿಕ್‌ಗಳ್ಳೋ ಯಾರಾದರೂ ರೈಲಿನ ಅಡಿಭಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಶುಚಿ ವಾತಾವರಣ ಇರುವುದನ್ನು ಮನಗಂಡರು. ಅದಕ್ಕಾಗಿ ಒಂದು ಉಪಕರಣ ಕಂಡುಹಿಡಿದರು. ಪ್ರತಿ 80 ಕಿ.ಮೀ.ಗೊಂದು ಶೌಚಗುಂಡಿ ಮಾದರಿಯಲ್ಲಿ ರೈಲು ಹಳಿ ಪಕ್ಕದಲ್ಲಿ ನಿರ್ಮಾಣ. ಅದಕ್ಕೆ ರಿಲೀಸರ್‌ ಮೂಲಕ ತ್ಯಾಜ್ಯ ಸುರಿಯುವ ಸ್ವಯಂಚಾಲಿತ ವ್ಯವಸ್ಥೆ ಮಾಡಿದ್ದರು. ಇದನ್ನು ರೈಲ್ವೆ ಇಲಾಖೆ ಮೆಚ್ಚುಗೆ ಸೂಚಿಸಿತ್ತು.

ಕಡಿಮೆ ಇಂಧನ
ಈಗಾಗಲೇ ಸತತ ತಯಾರಿ ಮೂಲಕ ಈಗ ಐದನೇ ಒಲೆ ತಯಾರಿಸಿದ್ದಾರೆ. ಪ್ರತಿ ಸಲ ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಹೊಗೆ ಎತ್ತರಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರು ಹೇಳುವಂತೆ ಶೇ.25ರಷ್ಟು ಇಂಧನ ಸಾಕಾಗುತ್ತದೆ. ಅಂದರೆ ಶೇ.75 ಇಂಧನ ಉಳಿತಾಯವಾಗುತ್ತದೆ. ಹೋಟೆಲ್‌, ಮನೆ, ಕಾರ್ಖಾನೆಗಳಲ್ಲಿ ಬಳಕೆಗೆ ಬೇಡಿಕೆಯಿದೆ.

ಹೊಸತರ ಕಡೆಗೆ ತುಡಿತ
4 ತಿಂಗಳ ಸತತ ಪರಿಶ್ರಮದಿಂದ ಮಿತ ಇಂಧನದ ಈ ಒಲೆ ಸಿದ್ಧವಾಗಿದೆ. ಪ್ರಾಯೋಗಿಕವಾಗಿ ಅನೇಕ ಒಲೆಗಳನ್ನು ಮಾಡಿದ್ದು ಬಳಿಕ ಮಾರ್ಪಾಡುಗಳನ್ನೂ ಮಾಡಿದ್ದೇನೆ. ಇಂಧನ ಬೆಲೆ ಏರಿದೆ ಎಂದು ಬೊಬ್ಬೆ ಹಾಕುವುದಕ್ಕಿಂತ ಅದಕ್ಕೆ ಪರಿಹಾರ ಹೇಗೆ ಎಂದು ಯೋಚಿಸುವುದು ಹೆಚ್ಚು ಪ್ರಸ್ತುತ ಎನಿಸಿತು.-ಕೃಷ್ಣಯ್ಯ ಆಚಾರ್ಯ ಕೂರಾಡಿ, ಕೋಟೇಶ್ವರ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.