ಅ.15ರಿಂದ ಮರಳುಗಾರಿಕೆ ಋತು ಆರಂಭ; ಅಕ್ರಮ ಮರಳುಗಾರಿಕೆಗೆ ಬೀಳದ ಕಡಿವಾಣ


Team Udayavani, Oct 5, 2021, 5:01 AM IST

ಅ.15ರಿಂದ ಮರಳುಗಾರಿಕೆ ಋತು ಆರಂಭ; ಅಕ್ರಮ ಮರಳುಗಾರಿಕೆಗೆ ಬೀಳದ ಕಡಿವಾಣ

ವಿಶೇಷ ವರದಿ- ಕುಂದಾಪುರ: ಕಟ್ಟಡ, ಮನೆ ನಿರ್ಮಾಣಕ್ಕೆ ಮರಳು ಯಾವಾಗ ದೊರೆಯುತ್ತದೆ ಎಂದು ಕೊರಳು ಉದ್ದ ಮಾಡುವವರಿಗೆ ಶುಭ ಸುದ್ದಿ. ಅ.15ರಿಂದ ಮರಳುಗಾರಿಕೆ ಕುಂದಾಪುರ, ಬೈಂದೂರಿನಲ್ಲಿ ಆರಂಭವಾಗಲಿದ್ದು ಜಿಲ್ಲೆಯ ಇತರೆಡೆ ಕೆಲವೇ ದಿನಗಳಲ್ಲಿ ಮರಳು ಲಭ್ಯವಾಗಲಿದೆ.

ಮರಳಿಲ್ಲ
ಅಭಿವೃದ್ಧಿ ಕಾರ್ಯಗಳಿಗೆ, ಖಾಸಗಿ ಕಟ್ಟಡಗಳ ರಚನೆಗೆ ಮರಳಿಗಾಗಿ ಜಿಲ್ಲೆಯಲ್ಲಿ ಮರಳು ಗಣಿ ಆರಂಭವಾಗದೆ ಹೊರ ತಾಲೂಕನ್ನು ಆಶ್ರಯಿಸಬೇಕಿದೆ. ಮರಳು ಆ್ಯಪ್‌ ಮೂಲಕ ಮರಳು ಪಡೆಯಲು ಅವಕಾಶ ಇರುವಾಗಲೂ ದೂರದಿಂದ ಬರುವ ಕಾರಣ ದುಬಾರಿಯಾಗುತ್ತದೆ. ಹಿರಿಯಡಕ, ಬ್ರಹ್ಮಾವರ ತಾಲೂಕಿನಿಂದ ಬೈಂದೂರು ತಾಲೂಕಿನ ಮೂಲೆ ಮೂಲೆಗೆ ಮರಳು ತಲುಪುವಾಗ ಸಾಗಾಟ ವೆಚ್ಚವೇ ಅಧಿಕವಾಗುತ್ತದೆ.

ಅನುಮತಿ
ಗುಲ್ವಾಡಿ, ಕಾವ್ರಾಡಿ, ಬಳ್ಕೂರು, ಜಪ್ತಿ, ಹಳ್ನಾಡು ಗ್ರಾಮಗಳಲ್ಲಿ ವಾರಾಹಿ ನದಿಯಲ್ಲಿ ಮರಳುಗಾರಿಕೆಗೆ ಐದು ವರ್ಷಗಳ ಅವಧಿಗೆ 2019ರ ಸೆಪ್ಟಂಬರ್‌ನಿಂದ 2024ರ ಸೆಪ್ಟಂಬರ್‌ವರೆಗೆ ಮರಳುಗಾರಿಕೆಗೆ ಇಬ್ಬರಿಗೆ ಅನುಮತಿ ನೀಡಲಾಗಿತ್ತು. ಇಲ್ಲಿ ಅ.15ರಿಂದ ಮರಳು ತೆಗೆಯಲು ಆರಂಭಿಸಿ ಗ್ರಾಹಕರಿಗೆ ವಿತರಿಸಲಿವೆ.

ಮರಳು ಮಾರಾಟ
ಅನುಮತಿಯ ಬಳಿಕ ಪ್ರತೀ ವರ್ಷ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ವ್ಯಾಪ್ತಿಯಲ್ಲಿ ಬ್ಲಾಕ್‌ ನಂ.4ರಲ್ಲಿ 56,821 ಮೆ.ಟನ್‌ ಮರಳು ತೆಗೆಯಲು ಅನುಮತಿ ಇತ್ತು. ಈ ಪೈಕಿ ಕಳೆದ ವರ್ಷ 48 ಸಾವಿರ ಮೆ.ಟನ್‌ ಮರಳು ತೆಗೆಯಲಾಗಿದೆ. ಉಳಿಕೆ 8,821 ಮೆ. ಟನ್‌ 2021ರ ಮಾರ್ಚ್‌ ವೇಳೆಗೆ ತೆಗೆಯಬೇಕಿತ್ತು. 700 ಲೋಡ್‌ನ‌ಷ್ಟು ಮರಳು ಸಂಗ್ರಹ ಮಾಡಿದ್ದರೂ ಸಕಾಲದಲ್ಲಿ ವಿತರಣೆ ಸಾಧ್ಯವಾಗಿರಲಿಲ್ಲ. ಹಳ್ನಾಡು, ಜಪ್ತಿ ವ್ಯಾಪ್ತಿಯಲ್ಲಿ ಬ್ಲಾಕ್‌ ನಂ.6ರಲ್ಲಿ ಪ್ರತೀ ವರ್ಷ 27,218 ಮೆ. ಟನ್‌ ಮರಳು ತೆಗೆಯಲು ಅನುಮತಿಯಿದ್ದು ಕಳೆದ ವರ್ಷ ಪೂರ್ಣ ಪ್ರಮಾಣದಲ್ಲಿ ತೆಗೆಯಲಾಗಿದೆ. ಇಲ್ಲಿ 1 ಟನ್‌ಗೆ 7 ಸಾವಿರ ರೂ.ಗಳಂತೆ ಮರಳನ್ನು ನೀಡಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಸೇರಿಲ್ಲ.

ಇದನ್ನೂ ಓದಿ:ಅ.8 ರಂದು ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ರಾಷ್ಟ್ರಪತಿ ಆಗಮನ: ಹೆಲಿಪ್ಯಾಡ್‌ಗೆ ಸಿದ್ಧತೆ

ಅನುಮತಿ
ಉಡುಪಿ ಜಿಲ್ಲೆಯಲ್ಲಿ 171 ಪರವಾನಿಗೆದಾರರು ಮರಳುಗಾರಿಕೆ ಅನುಮತಿ ಪಡೆದಿದ್ದು ಆ್ಯಪ್‌ ಮೂಲಕ ಮರಳು ತರಿಸಿಕೊಳ್ಳಬಹುದು . ನಾನ್‌ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಗೆ ಹೊಸ ಮರಳು ನೀತಿಯನ್ವಯ ಮರಳು ಅಡ್ಡೆಗಳನ್ನು ಗುರುತಿಸಿ ಅನುಮತಿ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ.

ಅಕ್ರಮ ಮರಳುಗಾರಿಕೆ
ಬಂಟ್ವಾಡಿ, ಮೊವಾಡಿ, ನಾಡ, ಬಡಾಕೆರೆ, ಗಂಗೊಳ್ಳಿ, ತೊಪ್ಲು, ಚುಂಗಿಗುಡ್ಡೆ, ಜೋಯಿಸರಬೆಟ್ಟು ಮೊದಲಾದೆಡೆ ಮರಳುಗಾರಿಕೆ ನಡೆಯುತ್ತಿದೆ. ಹೊರರಾಜ್ಯದ 1,884 ಕಾರ್ಮಿಕರು ಇಲ್ಲೆಲ್ಲ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಜಿಪಿಎಸ್‌ ಅಳವಡಿಸಿದ ದೋಣಿ, ಟಿಪ್ಪರ್‌ ಇರಬೇಕೆಂಬ ನಿಯಮ ಇದ್ದರೂ ಅದನ್ನು ಉಲ್ಲಂ ಸಲಾಗಿದೆ. ಅದನ್ನು ಮರವೊಂದಕ್ಕೆ ತೂಗುಹಾಕುವ ಮೂಲಕ ಲಾರಿ ಎಲ್ಲಿಯೂ ಚಲಿಸುತ್ತಿಲ್ಲ ಎಂದು ಭಾಸವಾಗುವಂತೆ ಮಾಡಲಾಗಿದೆ ಎಂಬ ಆರೋಪವೂ ಇದೆ. ಜನಸಾಮಾನ್ಯರು ಅಕ್ರಮ ಮರಳುಗಾರಿಕೆಯಿಂದ ರೋಸಿ ಹೋಗಿದ್ದಾರೆ. ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಪವಾದವೂ ಇದೆ.

ಬಗೆಹರಿಯದ ಸಮಸ್ಯೆ
ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ತೆಗೆಯುವ ಮರಳು ಧಕ್ಕೆಯಲ್ಲಿ ಒಂದು ಮೆಟ್ರಿಕ್‌ ಟನ್‌ಗೆ 550 ರೂ. ದರ ನಿಗದಿಪಡಿಸಲಾಗಿದೆ. ಮೂರು ಯುನಿಟ್‌ (10 ಮೆಟ್ರಿಕ್‌ ಟನ್‌) ಮರಳು 5,500 ರೂ.ಗಳಿಗೆ ಗ್ರಾಹಕರಿಗೆ ಲಭ್ಯವಾಗಬೇಕು. ಇದರಲ್ಲಿ ಸರಕಾರದ ರಾಜಸ್ವವೂ ಸೇರಿದೆ. ಲಾರಿಯಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ 2,500 ರೂ. ದರ ನಿಗದಿಗೊಳಿಸಲಾಗಿದೆ. ಅನಂತರದ ಪ್ರತೀ ಕಿ.ಮೀ.ಗೆ 50 ರೂ. ಹೆಚ್ಚುವರಿ ದರ ನಿಗದಿಯಾಗಿದೆ. ಮರಳು ಬುಕ್ಕಿಂಗ್‌ ಆ್ಯಪ್‌ ಗೊಂದಲಮಯವಾಗಿದ್ದು, ಸರ್ವರ್‌ ತೊಂದರೆ, ಒಟಿಪಿ ಸರಿಯಾಗಿ ಬಾರದೆ ಇರುವುದು ಅನೇಕ ತಾಂತ್ರಿಕ ಸಮಸ್ಯೆಗಳಿದ್ದವು. ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಿದರೆ ಮರಳಿನ ದರ 5,500 ರೂ., ಲಾರಿ ಬಾಡಿಗೆ, ಜಿಎಸ್‌ಟಿ ಇತ್ಯಾದಿ ಸೇರಿ 9 ಸಾವಿರ ರೂ. ಬರಬೇಕು. ಆದರೆ ಬುಕ್ಕಿಂಗ್‌ ಮಾಡುತ್ತಾ ಹೋದಂತೆ 13,149 ರೂ.ಗೆ ತಲುಪುತ್ತಿತ್ತು. ಆ್ಯಪ್‌ ಶುಲ್ಕ ಮತ್ತಿತರ ಶುಲ್ಕ ಸೇರಿ 10 ಮೆ.ಟ. ಮರಳಿಗೆ 13 ರಿಂದ 16,000 ರೂ.ಗಳಾಗುತ್ತಿತ್ತು. ಈ ಬಾರಿ ಸಮಸ್ಯೆ ನಿವಾರಣೆಯಾಗುವ ಭರವಸೆ ಜನರದ್ದು.

ಮಳೆ ಬಂದರೆ ರಸ್ತೆ ಕೆಸರು ಗದ್ದೆ
ಹೊಸಾಡು ಗ್ರಾಮದ ಬಂಟ್ವಾಡಿ ಮೊದಲಾದೆಡೆ ಅಕ್ರಮ ಮರಳುಗಾರಿಕೆಯ ವಾಹನಗಳು ಹೋಗುವ ಕಾರಣ ರಸ್ತೆ ಹಾಳಾಗಿದೆ. ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ. ಹೊಂಡ ಗುಂಡಿಯ ರಸ್ತೆಯಲ್ಲಿ ವಾಹನಗಳ ಓಡಾಟ ಕಠಿನವಾಗಿದೆ. ಒಂದು ತಿಂಗಳಿನಿಂದ ಸೇತುವೆ ಬಳಿ ಮರಳುಗಾರಿಕೆ ಆರಂಭವಾಗಿದೆ. ಮನೆಯ ಆವರಣ ಗೋಡೆ ಬಿರುಕು ಬಿಟ್ಟು ಬೀಳುವ ಭೀತಿಯಿದೆ. ಮನೆಗಳ ಛಾವಣಿ ಬಿರುಕುಬಿಟ್ಟಿದ್ದು ನೀರು ಸರಬರಾಜಿನ ಪೈಪುಗಳು ಒಡೆದಿವೆ. ಅನಾರೋಗ್ಯವಾದರೆ ಈ ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳು ಬರದಂತಾಗಿದೆ.

ಅನುಮತಿ ಪ್ರಕ್ರಿಯೆ
ಕುಂದಾಪುರದಲ್ಲಿ ಈಗಾಗಲೇ ನೀಡಿದ ಪರವಾನಿಗೆ 2024ರ ವರೆಗೆ ಇದ್ದು ಉಳಿದೆಡೆ ಶೀಘ್ರದಲ್ಲಿ ಆರಂಭವಾಗಲಿದೆ. ಈ ಕುರಿತು ಪ್ರಕ್ರಿಯೆಗಳು ನಡೆಯುತ್ತಿವೆ. ಸಮಿತಿ ಸಭೆ ನಡೆದಿದ್ದು ಅನುಮತಿ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
-ಸಂದೀಪ್‌ ಜಿ.ಯು.
ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.