ಐಫೋನ್‍ ಗೂ ಇಎಂಐ -ಗೋಲ್ಗಪ್ಪಕ್ಕೂ ಇಎಂಐ! ‘ಪೋಸ್ಟ್ ಪೇ’: ಸಾಲ ನೀಡುವ ಡಿಜಿಟಲ್‍ ಆ್ಯಪ್‍


Team Udayavani, Oct 10, 2021, 10:06 AM IST

ಐಫೋನ್‍ ಗೂ ಇಎಂಐ -ಗೋಲ್ಗಪ್ಪಕ್ಕೂ ಇಎಂಐ! ‘ಪೋಸ್ಟ್ ಪೇ’: ಸಾಲ ನೀಡುವ ಡಿಜಿಟಲ್‍ ಆ್ಯಪ್‍

ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಕಂಪನಿಗಳಲ್ಲಿ ಒಂದಾದ ಭಾರತ್‌ ಪೇ, ತನ್ನ  ಹೊಸ ಉತ್ಪನ್ನ ‘ಪೋಸ್ಟ್‌ಪೇ’ ಪರಿಚಯಿಸುವ ಮೂಲಕ ‘ಈಗ ಖರೀದಿಸಿ ನಂತರ ಪಾವತಿಸಿ ಬಿಎನ್‍ಪಿಎಲ್‍  (ಬೈ ನೌ ಪೇ ಲೇಟರ್‍) ವಿಭಾಗಕ್ಕೆ ಪ್ರವೇಶ ಪಡೆದಿದೆ.

ಪೋಸ್ಟ್ ಪೇ, ಗ್ರಾಹಕರಿಗೆ ಈಗ ಖರೀದಿಸಲು ಮತ್ತು ನಂತರ, ಪಾವತಿಸಲು ಸಾಲ ನೀಡುತ್ತದೆ. ಗ್ರಾಹಕರು ಪೋಸ್ಟ್‌ಪೇ ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ಬಡ್ಡಿ ರಹಿತ ಕ್ರೆಡಿಟ್ ಮಿತಿಯನ್ನು ರೂ. 10 ಲಕ್ಷದವರೆಗೂ ನೀಡಿದೆ.

ಈ ಡಿಜಿಟಲ್ ಉತ್ಪನ್ನವು ಗ್ರಾಹಕರಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಲು ಮತ್ತು ಇಎಂಐ ಗಳ ಮೂಲಕ ಸುಲಭವಾಗಿ ಮರುಪಾವತಿ ಮಾಡಲು ಅವಕಾಶ ಒದಗಿಸುತ್ತದೆ. ಗ್ರಾಹಕರು ಪೋಸ್ಟ್‌ಪೇ ಆಪ್ ಅನ್ನು ತೆರೆದು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ವ್ಯಾಪಾರ ಮಳಿಗೆಗಳಲ್ಲಿ ಪೋಸ್ಟ್‌ಪೇ ಕ್ರೆಡಿಟ್ ಬಳಸಿ ಪಾವತಿಸಬಹುದು. ಲಕ್ಷಾಂತರ ಆಫ್‌ಲೈನ್ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳಲ್ಲಿ ಸ್ವೀಕರಿಸಲ್ಪಡುವ ಪೋಸ್ಟ್‌ಪೇ ಕಾರ್ಡ್ ಮೂಲಕ ಪಾವತಿಸಲು ಅವರಿಗೆ ಅವಕಾಶವಿದೆ. ಗ್ರಾಹಕರು ತಮ್ಮ ಮೊದಲ ಮತ್ತು ನಿರ್ದಿಷ್ಟ ಮೈಲಿಗಲ್ಲು ವಹಿವಾಟುಗಳಲ್ಲಿ ಕ್ಯಾಶ್‌ ಬ್ಯಾಕ್‌ಗಳನ್ನು ಪಡೆಯಬಹುದು.

ಇದನ್ನೂ ಓದಿ:ಡ್ರೀಮ್‌ 11 ಆ್ಯಪ್‌ ವಿರುದ್ಧ ಎಫ್ಐಆರ್‌

ಡಿಜಿಟಲ್ ಪಾವತಿ ವಿಧಾನಗಳನ್ನು ಚೆನ್ನಾಗಿ ತಿಳಿದಿರುವ ಹೊಸ ಪೀಳಿಗೆಯ ಗ್ರಾಹಕರಿಗಾಗಿ ಪೋಸ್ಟ್‌ಪೇಯನ್ನು ವಿನ್ಯಾಸಗೊಳಿಸಲಾಗಿದೆ. ಪೋಸ್ಟ್‌ಪೇ ಗ್ರಾಹಕರು ಮಾಡಿದ ಎಲ್ಲಾ ವಹಿವಾಟುಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮರುಪಾವತಿಗಾಗಿ ಒಂದು ಬಿಲ್ ಅನ್ನು ತಯಾರಿಸುತ್ತದೆ. ಅಲ್ಲದೆ, ಪೋಸ್ಟ್‌ಪೇ ಆ್ಯಪ್ ಅಥವಾ ಪೋಸ್ಟ್‌ಪೇ ಕಾರ್ಡ್ ಮೂಲಕ ಪಾವತಿಗಳ ಮೇಲೆ ಯಾವುದೇ ವಾರ್ಷಿಕ ಶುಲ್ಕ ಅಥವಾ ವಹಿವಾಟು ಶುಲ್ಕಗಳಿರುವುದಿಲ್ಲ.

ಪೋಸ್ಟ್‌ಪೇ ಈ ವರ್ಷ ದುಬೈನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ನ ಜಾಗತಿಕ ಪ್ರಾಯೋಜಕರಾಗಿದ್ದಾರೆ. ಎಲ್ಲಾ ವಹಿವಾಟು ನಡೆಸುವ ಗ್ರಾಹಕರು ಅ. 17 ರಿಂದ 14 ನವೆಂಬರ್ ವರೆಗೆ ನಡೆಯಲಿರುವ ವಿಶ್ವಕಪ್ ಪಂದ್ಯಗಳಿಗೆ 3,500 ಉಚಿತ ಪಾಸ್‌ಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಅ. 24 ರಂದು ಭಾರತ vs ಪಾಕಿಸ್ತಾನ ಪಂದ್ಯದ ಪಾಸ್‌ಗಳನ್ನು ಪುರಸ್ಕರಿಸುವ ಏಕೈಕ ಅಪ್ಲಿಕೇಶನ್ ಪೋಸ್ಟ್‌ಪೇ ಮಾತ್ರ.

ಭಾರತ್ ಪೇ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಮಾತನಾಡಿ, ಪೋಸ್ಟ್ ಪೆ ಮೂಲಕ ನಮ್ಮ ಗುರಿಯೇನೆಂದರೆ ದೈನಂದಿನ ಖರೀದಿಗಳಿಗೂ ಇಎಂಐ ದೊರಕುವಂತೆ ಮಾಡುವುದು. ಇಎಂಐ ಮೂಲಕ ಐಫೋನ್‍ ಹೇಗೋ ಹಾಗೆ ಇಎಂಐ ಮೂಲಕ ಗೋಲ್ಗಪ್ಪ ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ ಎಂದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.