ಹಾರರ್ ಚಿತ್ರದಲ್ಲಿ ನಾಯಕನಾಗಿ ಶರಣ್
Team Udayavani, Oct 10, 2021, 5:39 PM IST
ನಟ ಶರಣ್ ಅವರು ಈಗಾಗಲೇ ಗುರು ಶಿಷ್ಯರು ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇನ್ನೂ ಹೆಸರಿಡದ ಪೂರ್ಣ ಪ್ರಮಾಣದ ಹಾರರ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ನವನೀತ್ ಅವರ ತಂಡದೊಂದಿಗೆ ಶರಣ್ ಸೇರಿಕೊಳ್ಳಲಿದ್ದು, ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸಲಿದ್ದಾರೆ. ಈ ಮೊದಲು ವಿಕ್ಟರಿ 2, ರೋಸ್ನಂತಹ ಚಿತ್ರಗಳನ್ನು ನಿರ್ಮಿಸಿದ ತಂಡಕ್ಕೆ ಇದು ಐದನೇ ಚಿತ್ರವಾಗಿದೆ. ಕರ್ವ ಮತ್ತು ಬಕಾಸುರ ಚಿತ್ರಗಳ ಬಳಿಕ ನವನೀತ್ ನಿರ್ದೇಶಿಸುತ್ತಿರುವ ಮೂರನೇ ಚಿತ್ರ ಇದಾಗಿದೆ.
ನಾನು ಶರಣ್ ಜೊತೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ. ಶರಣ್ ಅವರಿಗೆ ನಾನು 50 ದಿನಗಳ ಹಿಂದೆ ಕಥೆಯನ್ನು ಹೇಳಿದ್ದು, ಅವರು ಕಥೆಯನ್ನು ಕೇಳಿ ಪ್ರಭಾವಿತರಾಗಿ ಈ ಚಿತ್ರದಲ್ಲಿ ಮುಂದುವರೆಯಲು ಒಪ್ಪಿಕೊಂಡರು ಎಂದು ನಿರ್ದೇಶಕ ನವನೀತ್ ಹೇಳಿದ್ದಾರೆ.
ಇದನ್ನೂ ಓದಿ: ದುಷ್ಕರ್ಮಿಗಳಿಂದ 2 ಬಾಂಬ್ ಎಸೆತ : ಬಿಜೆಪಿ ಶಾಸಕ ಪಾರು
ಈ ಚಿತ್ರ ನವೆಂಬರ್ ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಚಿತ್ರದ ಛಾಯಾಗ್ರಹಣವನ್ನು ಅನೂಪ್ ಕಟ್ಟುಕರನ್ ಅವರು ಉತ್ತರಾಖಂಡದ ಹಿಮ ಪ್ರದೇಶದಲ್ಲಿ ರಮಣೀಯ ಸ್ಥಳಗಳನ್ನು ಗುರುತಿಸಿದ್ದು, ಚಿತ್ರದ ಶೇ. 90 ಭಾಗ ಇಲ್ಲಿಯೇ ಚಿತ್ರೀಕರಣಗೊಳ್ಳಿದೆ.
ಅನೂಪ್ ಅವರು ಹಲವಾರು ಜಾಹಿರಾತುಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಚಿತ್ರ ಕನ್ನಡದಲ್ಲಿ ಮೊದಲ ಚಿತ್ರವಾಗಿದೆ ಎಂದು ನವನೀತ್ ಹೇಳಿದ್ದಾರೆ.
ಚಿತ್ರಕ್ಕೆ ಪಾತ್ರಗಳು, ಸಿಬ್ಬಂದಿ ವರ್ಗ, ಶೀರ್ಷಿಕೆಯನ್ನು ಸದ್ಯದಲ್ಲೇ ಅಧಿಕೃತವಾಗಿ ಘೋಷಿಸಲಿದ್ದು, ಈ ಚಿತ್ರದಲ್ಲಿ ಪ್ರಸಿದ್ಧ ನಟರು ನಟಿಸಲಿದ್ದಾರೆ ಎಂದು ಚಿತ್ರ ತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ