ಕೊಪ್ಪಳ: ಏತ ನೀರಾವರಿ ಯೋಜನೆಗೆ ಆಮೆ ವೇಗ

ಬಲಭಾಗಕ್ಕೆ ಇರುವ ನೀರಾವರಿ ಎಡ ಭಾಗಕ್ಕೆ ಏಕಿಲ್ಲ? | ಜಾತಕ ಪಕ್ಷಿಯಂತೆ ಕಾಯುತ್ತಿರುವ ಜನ

Team Udayavani, Oct 13, 2021, 9:25 PM IST

gdfgrtr

ವರದಿ: ದತ್ತು ಕಮ್ಮಾರ

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆ ಆರಂಭವಾಗಿ ದಶಕವೇ ಕಳೆದಿದೆ. ಬಲ ಭಾಗ ನೀರಾವರಿ ಸೌಲಭ್ಯ ಕಂಡಿದೆ. ಆದರೆ ಎಡ ಭಾಗದಲ್ಲಿ ನೀರಾವರಿ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಎಡ ಭಾಗವನ್ನು ಹರಿ ನೀರಾವರಿ ಬದಲಿಗೆ, ಹನಿ ನೀರಾವರಿಯನ್ನಾಗಿ ಪರಿವರ್ತಿಸಿ ಹೆಕ್ಟೇರ್‌ ಪ್ರದೇಶ ವಿಸ್ತರಿಸಿದೆ. ಆದರೆ ಮುಂಡಗಿ-ಕೊಪ್ಪಳ-ಯಲಬುರ್ಗಾ ಭಾಗದಲ್ಲಿನ ಜನರು ಇಂದಿಗೂ ನೀರಾವರಿ ಕನಸು ಕಾಣುತ್ತಲೇ ಇದ್ದಾರೆ. ಅದು ಸಕಾರಗೊಂಡಿಲ್ಲ.

ಹೌದು. ಬರದ ನಾಡಿನ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿ ಅವರ ಬದುಕು ಹಸನ ಮಾಡುವ ಉದ್ದೇಶದಿಂದ 1992ರಲ್ಲೇ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಗೊಳಿಸಿದೆ. ಹೂವಿನಹಡಗಲಿ ಭಾಗದ ರೈತರು ನೀರಾವರಿ ಬಹುಪಾಲು ಪೂರ್ಣಗೊಂಡಿದೆ. ಆದರೆ ಎಡ ಭಾಗದಲ್ಲಿನ ಗದಗ-ಮುಂಡರಗಿ, ಕೊಪ್ಪಳ ಹಾಗೂ ಯಲಬುರ್ಗಾ ಭಾಗದಲ್ಲಿ ಬಹುಪಾಲು ನೀರಾವರಿ ಪ್ರದೇಶಕ್ಕೆ ನೀರು ಹರಿಯಬೇಕಿದ್ದರೂ ಇಲ್ಲಿವರೆಗೂ ರೈತರ ಜಮೀನಿಗೆ ನೀರೇ ಹರಿಯುತ್ತಿಲ್ಲ. ಇಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯತನವೂ? ಏನು ಎಂಬುದು ತಿಳಿಯದಂತಾಗಿದೆ. ಮುಂಡರಗಿ ಹಾಗೂ ಕೊಪ್ಪಳ ಭಾಗದ ರೈತ ಸಮೂಹಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಬಿಳಿ ಆನೆ ಎಂಬಂತೆ ಭಾಸವಾಗಿ ತೋರಿಕೆಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.

ಹನಿ ನೀರಾವರಿಗೆ: ಕೆಲವು ವರ್ಷಗಳ ಹಿಂದೆ ಈ ಯೋಜನೆಯಡಿ ಎಡ ಭಾಗದ ಜಮೀನುಗಳಿಗೂ ಕಾಲುವೆ ಮೂಲಕ ಹರಿ ನೀರಾವರಿ ಯೋಜನೆ ರೂಪಿಸಲಾಗಿತ್ತು. ಆದರೆ ಯೋಜನೆ ಪ್ರದೇಶ ವಿಸ್ತರಿಸಲು ಹರಿ ನೀರಾವರಿಯಿಂದ ಹನಿ ನೀರಾವರಿಗೆ ಯೋಜನೆ ಪರಿವರ್ತನೆಗೊಳಿಸಿದ್ದಾರೆ. ಹೂವಿನಹಡಗಲಿಯ ಬಲ ಭಾಗ ಮಾತ್ರ ಹರಿ ನೀರಾವರಿಯಾಗಿದೆ. ಆದರೆ ಎಡ ಭಾಗದಲ್ಲಿನ ಗದ ಗ-ಮುಂಡರಗಿ-ಕೊಪ್ಪಳ-ಯಲಬುರ್ಗಾ ಭಾಗವು ಸಂಪೂರ್ಣ ಹನಿ ನೀರಾವರಿಗೆ ಪರಿವರ್ತಿಸಲಾಗಿದೆ. ಒಂದು ಹಂತದಲ್ಲಿ ಹನಿ ನೀರಾವರಿ ಯೋಜನೆ ಏಷ್ಟು ಯಶಸ್ವಿಯಾಗಿದೆ? ಎನ್ನುವ ಪ್ರಶ್ನೆ ರೈತ ಸಮೂಹದಲ್ಲೂ ಮೂಡಿದೆ. ಹೀಗಾದರೆ ರೈತರ ಜಮೀನಿಗೆ ನೀರು ಬರುವುದಾದರೂ ಹೇಗೆ ಎನ್ನುವ ಚರ್ಚೆ ಶುರುವಾಗಿದೆ.

ಹನಿ ನೀರಾವರಿ ಪ್ರದೇಶವೆಷ್ಟು?: ಸಿಂಗಟಾಲೂರು ಏತ ನೀರಾವರಿ ಅಡಿ ಗದಗ ತಾಲೂಕಿಗೆ 66,827 ಎಕರೆ, ಮುಂಡರಗಿ ತಾಲೂಕಿನಲ್ಲಿ 92,281 ಎಕರೆ, ಕೊಪ್ಪಳ ತಾಲೂಕಿನಲ್ಲಿ 55,706 ಎಕರೆ, ಯಲಬುರ್ಗಾ ತಾಲೂಕಿನಲ್ಲಿ 14,624 ಎಕರೆ ಪ್ರದೇಶವು ಸೇರಿ ಒಟ್ಟಾರೆ 4 ತಾಲೂಕು ಸೇರಿ ಒಟ್ಟಾರೆ 2,29,438 ಎಕರೆ ಪ್ರದೇಶ ಹನಿ ನೀರಾವರಿಗೆ ಒಳಪಡಲಿದೆ. ಇನ್ನೂ ಕೊಪ್ಪಳ-ಯಲಬುರ್ಗಾ ತಾಲೂಕಿನಲ್ಲಿಯೇ 70,330 ಎಕರೆ ಪ್ರದೇಶ ನೀರಾವರಿ ಸೌಲಭ್ಯ ಕಾಣಬೇಕಿದೆ. ಅದು ಹನಿ ನೀರಾವರಿ ಮೂಲಕವೇ ಎನ್ನುವುದು ಗಮನಾರ್ಹ ಸಂಗತಿ. 33 ಕಿ.ಮೀ.

ಕಾಲುವೆ ಮಾತ್ರ ನಿರ್ಮಾಣ: ಏತ ನೀರಾವರಿ ಯೋಜನೆಯಡಿ ಮುಂಡರಗಿ ತಾಲೂಕು ವ್ಯಾಪ್ತಿವರೆಗೂ 33 ಕಿ.ಮೀ. ಕಾಲುವೆಯ ಕಾಮಗಾರಿ ನಿರ್ಮಾಣಗೊಂಡಿದ್ದರೆ, ಅಲ್ಲಿಂದ ಕೊಪ್ಪಳ ತಾಲೂಕು ವ್ಯಾಪ್ತಿವರೆಗೂ 33 ಕಿಲೊ ಮೀಟರ್‌ ನಿಂದ 72 ಕಿಲೊ ಮೀಟರ್‌ ಕಾಲುವೆ ನಿರ್ಮಾಣ ಮಾಡಲಾಗಿದೆ. ಅಂದರೆ ಕೊಪ್ಪಳ ತಾಲೂಕಿನಲ್ಲಿ ಕೇವಲ 33 ಕಿ.ಮೀ. ಕಾಲುವೆ ನಿರ್ಮಾಣ ಮಾಡಲು ಒಂದು ದಶಕ ಕಾಲಹರಣ ಮಾಡಲಾಗಿದೆ. ಹನಿ ನೀರಾವರಿಯಾದರೂ ರೈತರ ಜಮೀನಿಗೆ ಬಂದೇ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಕಾಲಾವಧಿ ಯಲ್ಲಿ ಯೋಜನೆ ಪರಿಷ್ಕೃತಗೊಳಿಸಿ 5,768 ಕೋಟಿ ರೂ.ಗೆ ಅಂದಾಜು ಯೋಜನಾ ವರದಿ ಅನುಮೋದನೆಗೊಂಡಿದೆ. ಈ ಪೈಕಿ 2084 ಕೋಟಿ ವೆಚ್ಚಾಗಿದೆ. ಇತ್ತೀಚೆಗೆ ಮಾಹಿತಿ ಹಕ್ಕಿನಲ್ಲಿ ಲಭ್ಯವಾದ ಮಾಹಿತಿಯಂತೆ 3 ಸಾವಿರ ಕೋಟಿಯಷ್ಟು ಖರ್ಚಾಗಿದೆ. ಕೋಟಿ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೂ ಎಡ ಭಾಗದ ರೈತರ ಜಮೀನಿಗೆ ಹನಿ ನೀರು ಬರದೇ ಇರುವುದು ದುರಂತವೇ ಸರಿ.

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.