“ಸರ್ದಾರ್ ಪಟೇಲ್ರ ಹಾದಿಯಲ್ಲೇ ನಡೆಯಿರಿ’
Team Udayavani, Oct 15, 2021, 10:49 PM IST
ಸೂರತ್: ದೇಶದ ಜನರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹಾದಿಯಲ್ಲಿ ನಡೆಯಬೇಕು. ಜಾತಿ, ಧರ್ಮ ತಡೆಯಾಗಬಾರದೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಲ್ಲಿ ನಿರ್ಮಿಸಲಾಗುತ್ತಿರುವ ಬಾಲಕರ ಹಾಸ್ಟೆಲ್ನ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದ ಅವರು, “ನಾವು ದೇಶವನ್ನು ಪ್ರೀತಿಸಬೇಕು. ಗುಜರಾತ್ ಜನ ಪಟೇಲ್ರ ಆದರ್ಶವನ್ನು ಬಲಪಡಿ ಸಬೇಕೆಂದು ನಂಬಿದವರು’ ಎಂದಿದ್ದಾರೆ.
ರಾಜಕೀಯ, ಜಾತಿ ಬಲವಿಲ್ಲದ ನಾನು 20 ವರ್ಷ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿಮ್ಮ ಆಶೀರ್ವಾದವೇ ಕಾರಣ ಎಂದಿದ್ದಾರೆ.
ಇದನ್ನೂ ಓದಿ:ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್