ಚಿಂತಾಮಣಿ: ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು
Team Udayavani, Oct 19, 2021, 1:57 PM IST
ಚಿಂತಾಮಣಿ: ಕುರಿಗಳನ್ನು ತೊಳೆಯಲು ಕೆರೆಗೆ ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಯುವಕರು ಸಾವನ್ನಪ್ಪಿದ ಘಟನೆ ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೊಡದವಾಡಿ ಗ್ರಾಮದ ಸುರೇಶ್ ರವರ ಮಗ ಶೋದನ್,(19)ಚೌಡಪ್ಪ ನವರ ಮಗ ಸುದರ್ಶನ್(17) ಹಾಗೂ ರಮೇಶ್ ರವರ ಮಗ ಸತೀಶ್(18) ವರ್ಷ ಎಂದು ತಿಳಿದು ಬಂದಿದ್ದು ಮೂವರು ಯುವಕರು ಕೆರೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಮೂವರು ಯುವಕರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾಗಿದ್ದು ಮೂವರು ತಮ್ಮಕುರಿಗಳನ್ನು ತೊಳೆಯಲು ಹೋದ ಸಮಯದಲ್ಲಿ ಕೆರೆಯಲ್ಲಿ ಮುಳಗಿದ್ದಾರೆ.
ಕೆರೆಯಲ್ಲಿ ಮುಳುಗಿದ ಯುವಕರ ಪೈಕಿ ಇಬ್ಬರ ದೇಹಗಳು ಪತ್ತೆಯಾಗಿದ್ದು ಇನ್ನೊಬ್ಬ ಯುವಕನ ದೇಹಕ್ಕೆ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಹುಡುಕಾಟ ನಡೆಸುತ್ತಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.