ಅಕ್ಕಮಹಾದೇವಿ ವಿವಿಗೆ ನಿರಾಸಕ್ತಿಯ ಬರೆ
Team Udayavani, Oct 22, 2021, 12:17 PM IST
ಸಿಂಧನೂರು: ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಬಿಕಾಂ, ಬಿಎಸ್ಸಿ, ಬಿಎ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ದುಬಾರಿ ಶುಲ್ಕ ಪಾವತಿಸಲಾಗದ ಬಡವರಿಗೆ ವರವಾಗಬೇಕಾದ ಇಲ್ಲಿನ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ನಿರಾಸಕ್ತಿಯ ಮಂಕು ಕವಿದಿದೆ.
ಅತ್ಯಂತ ಕಡಿಮೆ ಶುಲ್ಕ ಪಾವತಿಸಿ ವಿಶ್ವವಿದ್ಯಾಲಯ ದರ್ಜೆಯ ಸುಸಜ್ಜಿತ ಸೌಲಭ್ಯದ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಕೇಂದ್ರದ ಬಗ್ಗೆಯೇ ಆಡಳಿತ ವರ್ಗದಲ್ಲಿ ಇಚ್ಛಾಶಕ್ತಿ ಕೊರತೆ ರಾರಾಜಿಸಿದೆ. ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಚ್ಚಿ ಹೋಗಿದ್ದ ವಿಜ್ಞಾನ ವಿಭಾಗ ತೆರೆಯಲು ನಾಲ್ಕು ಜನ ಉಪನ್ಯಾಸಕರು ಮನಸ್ಸು ಮಾಡಿದ ಪರಿಣಾಮ ಕಾಲೇಜಿನ ಸೀಟುಗಳೇ ಭರ್ತಿಯಾಗಿವೆ. ಅಕ್ಕಮಹಾದೇವಿ ವಿವಿ ಸೆಂಟರ್ನಲ್ಲಿ ಲಭ್ಯ ಇರುವ ಸೀಟು ಭರ್ತಿ ಮಾಡಲು ಯಾರೊಬ್ಬರೂ ಪ್ರೋತ್ಸಾಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸಿಕ್ಕರೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಅಡವಿಯಲ್ಲಿ ಮಾತ್ರ ಫಲಕ
ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜ್ಞಾನಸಿಂಧು ಆವರಣ ಎಂಬ ಹೆಸರಿನಲ್ಲಿ ಸಣ್ಣ ಬ್ಯಾನರ್ ಕುಷ್ಟಗಿ ರಸ್ತೆಯಲ್ಲಿ ಹಾಕಲಾಗಿದೆ. ಸರ್ಕಾರಿ ವಿವಿ ಕೇಂದ್ರದಲ್ಲಿ ಬಿಎ ವಿಭಾಗದಲ್ಲಿನ ವ್ಯಾಸಂಗದ ವಿಷಯ ಕನ್ನಡ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಕಾರ್ಯ, ಇತಿಹಾಸ, ಮಹಿಳಾ ಅಧ್ಯಯನ ಪ್ರಸ್ತಾಪಿಸಲಾಗಿದೆ. ಸಾಮಾನ್ಯರಿಗೆ 4,235 ರೂ., ಎಸ್ಸಿ, ಎಸ್ಟಿ, ಒಬಿಸಿಗೆ 2,990 ರೂ. ಮಾತ್ರ ಶುಲ್ಕವೆಂದು ನಮೂದಿಸಲಾಗಿದೆ. ಬಿಕಾಂ ವಿಭಾಗದಲ್ಲಿನ ವಾಣಿಜ್ಯಶಾಸ್ತ್ರ ಕೋರ್ಸ್ಗೂ ಇದೇ ಶುಲ್ಕ ಅನ್ವಯವಾಗುತ್ತದೆ. ಬಿಎಸ್ಸಿ ಗಣಿತ ಶಾಸ್ತ್ರ, ಗಣಕ ವಿಜ್ಞಾನಕ್ಕೆ ಪ್ರವೇಶ ಪಡೆದರೆ, ಸಾಮಾನ್ಯ ವರ್ಗದವರು ಕೇವಲ 5,035 ರೂ., ಎಸ್ಸಿ, ಎಸ್ಟಿ ವರ್ಗದವರು 3,390 ರೂ. ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಸಿಂಧನೂರು ನಗರದಿಂದ ಎರಡು ಕಿ.ಮೀ ದೂರದಲ್ಲಿ ವಿವಿ ಕೇಂದ್ರಕ್ಕೆ ಅಡವಿಯಲ್ಲಿ ಸಾಗುವ ಮಾರ್ಗದಲ್ಲಿ ಈ ಬ್ಯಾನರ್ ಅಳವಡಿಸಿ, ಪ್ರಚಾರ ಪಡಿಸುತ್ತಿರುವುದು ವಿಶೇಷ.
ಇದನ್ನೂ ಓದಿ: ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು
ಸೌಲಭ್ಯವಿದ್ದರೂ ಸದ್ಬಳಕೆಯಿಲ್ಲ
ಮಹಿಳೆಯರಿಗಾಗಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಪಿಜಿ ಮತ್ತು ಯುಜಿ ಕೇಂದ್ರ ಸಿಕ್ಕರೂ ಅದನ್ನು ಬಳಸಿಕೊಂಡು ಬಡವರಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ನಿರಾಸಕ್ತಿ ವ್ಯಾಪಿಸಿದೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ವಿವಿ ಕೇಂದ್ರದ ಬೃಹತ್ ಕಟ್ಟಡದಲ್ಲಿ ಏಳೆಂಟು ಸಿಬ್ಬಂದಿ ಮಾತ್ರ ಇರುತ್ತಾರೆ. ಅಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಭಾಗದ ಕೊಠಡಿ, ಬೆಂಚ್ ಸೌಲಭ್ಯವೂ ಇದೆ. ಯಾವುದೇ ಖಾಸಗಿ ಶಿಕ್ಷಣ ಹೊಂದಿಲ್ಲದಂತಹ ಬೃಹತ್ ಕಟ್ಟಡ ಹೊಂದಿದ ಏಕೈಕ ಕೇಂದ್ರವಾದರೂ ಅಲ್ಲಿ ಪ್ರವೇಶಾಂತಿ ಹೆಚ್ಚಿಸುವ ಪ್ರಕ್ರಿಯೆಗಳು ಮಂಕಾಗಿದ್ದು, ಬಡವರ ಪಾಲಿಗೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.
ಉನ್ನತ ಶಿಕ್ಷಣ ಮರೀಚಿಕೆ
ಮಹಿಳೆಯರಿಗೆ ಅತ್ಯುನ್ನತ ದರ್ಜೆಯ ಶಿಕ್ಷಣ ನೀಡಲಿಕ್ಕಾಗಿ ಸರ್ಕಾರ 10 ಕೋಟಿ ರೂ. ಗೂ ಹೆಚ್ಚಿನ ಮೊತ್ತ ವ್ಯಯಿಸಿದ್ದರೂ ಅಲ್ಲಿ ಸಂಸ್ಥೆಯ ಮಹತ್ವ ಸಾರುವ ಕೆಲಸವೇ ನಡೆಯುತ್ತಿಲ್ಲವೆಂಬ ವೇದನೆ ಹಲವರಿಗೆ ಕಾಡಲಾರಂಭಿಸಿದೆ. ಖಾಸಗಿ ಲಾಬಿಯ ಪ್ರಭಾವ ಇಲ್ಲವೇ ಸಿಬ್ಬಂದಿ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಈ ನಡುವೆ ಇರುವ ರಸ್ತೆ ಸುಧಾರಿಸುವ ನಿಟ್ಟಿನಲ್ಲಿ ಆಡಳಿತ ವರ್ಗವೂ ಮನಸ್ಸು ಮಾಡದ್ದರಿಂದ ಬಡ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮರೀಚಿಕೆ ಎಂಬಂತಾಗಿದೆ.
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ