ಎಂ.ಎ.ಹೆಗಡೆ ಅವರಿಗೆ‌ ಮರಣೋತ್ತರ ಚಂದುಬಾಬು‌ ಪ್ರಶಸ್ತಿ ಪ್ರದಾನ‌


Team Udayavani, Oct 24, 2021, 6:15 PM IST

25award

ಶಿರಸಿ: ಸರಕಾರಕ್ಕೆ ಬಾಗದ ಹೋರಾಟಗಾರ, ಯೋಜನೆ ‌ತಲುಪಿಸಲು ಜನ ಸೇವಕ ಎಂದು ಹಿರಿಯ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.

ನಗರದ ಟಿಎಂಎಸ್ ಸಭಾಂಗಣದಲ್ಲಿ ರವಿವಾರ ಯಕ್ಷ ಸಂಭ್ರಮ ಟ್ರಸ್ಟ ನೀಡುವ ಚಂದುಬಾಬು ಪ್ರಶಸ್ತಿಯನ್ನು ದಿವಂಗತ‌ ಪ್ರೋ.ಎಂ.ಎ.ಹೆಗಡೆ ಅವರಿಗೆ ಮರಣೋತ್ತರವಾಗಿ ಅವರ ಮಗ ವಿನಾಯಕ ಹೆಗಡೆ ಅವರಿಗೆ ಪ್ರದಾನ ಮಾಡಿ‌ ಮಾತನಾಡಿದರು.

ದೋಷ ಕಂಡರೆ ಸಹಿಸದೇ ಇದ್ದರೂ ಪ್ರತಿಭೆ‌ ಕಂಡಾಗ ಪ್ರೋತ್ಸಾಹಿಸುವ ಗುಣ ಪ್ರೋ.ಎಂ.ಎ.ಹೆಗಡೆ ಅವರದ್ದು. ಪಾಂಡಿತ್ಯ ಉಳ್ಳ ಶಿಕ್ಷಕ. ವಿದ್ವತ್ ಪರಂಪರೆ ಬೆಳೆಸುವ ಆಧ್ಯಾಪಕರು. ಎಂ.ಎ.ಹೆಗಡೆ ಅವರ ಕಾರ್ಯ ಕ್ಷಮತೆಗೆ ಸರಕಾರವೇ ಎದೆ ಮುಟ್ಟಿಕೊಳ್ಳುವಂತಿತ್ತು. ವಿನಯ, ದೈನ್ಯವನ್ನು ಬೇರ್ಪಡಿಸಿಕೊಂಡು‌ ಕೆಲಸ ಮಾಡಿದವರು ಅವರು ಎಂದರು‌.

ಎಂ ಎ ಹೆಗಡೆ ಅಡಿಯಲ್ಲಿ ಬೆಳೆದವರಿಗೆ ವ್ಯಕ್ತಿತ್ವ, ಮಾತುಗಾರಿಕೆ ಎಲ್ಲವೂ ಸಹಜವಾಗಿಯೇ ಬೆಳೆದುಬರುತ್ತಿತ್ತು. ಪದ ಪ್ರಯೋಗ ಬಳಕೆ, ಅದಕ್ಕೆ ಪೂರಕ ಮಾತುಕಥೆ ಅವರಿಂದ ಅನೇಕರು ಕಲಿತಿದ್ದರು ಎಂದರು.

ಇದನ್ನೂ ಓದಿ: ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

ಯಕ್ಷ ಸಂಭ್ರಮದ ತಾಳ ಮದ್ದಲೆ‌ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಟಿ ಎಂ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಹುಳಗೋಳ, ಮನುಷ್ಯನಿಗೆ ಆರೋಗ್ಯ ಮತ್ತು ಧೈರ್ಯ ಮುಖ್ಯ. ಇವೆರಡಿದ್ದರೆ ಮುಂದುವರಿಯಲು ಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನನ್ನು ಉಲ್ಲಸಿತವಾಗಿ ಇಡುತ್ತವೆ. ಯಕ್ಷಗಾನ ನಮ್ಮ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿದ್ದು, ನಮಗೆ ಕಟ್ಟಿಕೊಟ್ಟಿದೆ ಎಂದರು.

ಸಂಕಲ್ಪದ ಪ್ರಮೋದ ಹೆಗಡೆ, ಎಂ.ಎ.ಹೆಗಡೆ ಅವರು ಮೂರೂ ಸರಕಾರದ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಜಿಲ್ಲೆಗೊಂದು‌ ವ್ಯವಸ್ಥಿತ ರಂಗ‌ ಮಂದಿರದ‌ ಕೊರತೆ‌ ಇದೆ‌ ಎಂದರು.

ಯಕ್ಷ ಸಂಭ್ರಮದ ಅಧ್ಯಕ್ಷ ಕೇಶವ ಹೆಗಡೆ ಗಡಿಕೈ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಚಂದು ಸ್ವಾಗತಿಸಿದರು. ಅನಂತ‌ ದಂತಳಿಕೆ ಸಮ್ಮಾನ‌ ಪತ್ರ ವಾಚಿಸಿದರು. ವಾದಿರಾಜ  ಕಲ್ಲೂರಾಯ‌ ನಿರ್ವಹಿಸಿದರು. ಎಂ.ವಿ.ಹೆಗಡೆ‌ ಅಮಚಿಮನೆ ವಂದಿಸಿದರು.

ಈ ವೇಳೆ ವಿನಾಯಕ‌ ಎಂ.ಹೆಗಡೆ, ಬಕುಲ ಹೆಗಡೆ, ಸಾವಿತ್ರಿ ಹೆಗಡೆ, ಶ್ರೀಪಾದ ಹೆಗಡೆ  ಸೋಮನಮನೆ,‌ ಇಂದಿರಾ‌ ಹೆಗಡೆ ಇತರರು ಇದ್ದರು.

ಮತ್ತೀಘಟ್ಟದ ರಾಮಕೃಷ್ಣ‌ ಹೆಗಡೆ ಅವರಿಗೆ ಚಂದುಬಾಬು‌ ಪ್ರಶಸ್ತಿ ಮೊತ್ತವನ್ನು ಅಕಾಡೆಮಿ‌ ಸದಸ್ಯೆ ನಿರ್ಮಲಾ‌ ಹೆಗಡೆ ಅವರ ಮೂಲಕ‌ ಹಸ್ತಾಂತರಿಸಿದರು.

ಬಳಿಕ ಎಂ.ಎ.ಹೆಗಡೆ ಅವರು ಬರೆದ ಗಯಯಜ್ಞ ಆಖ್ಯಾನ ಪ್ರಸ್ತುತಗೊಂಡಿತು. ವಿ.ಗಣಪತಿ ಭಟ್ಟ, ಅನಂತ ದಂತಳಿಕೆ, ನರಸಿಂಹ ಭಟ್ಟ, ಪ್ರಸನ್ನ ಭಟ್ ಹಿಮ್ಮೇಳದಲ್ಲಿ, ಉಮಾಕಾಂತ ಭಟ್ಟ, ವಾಸುದೇವ ರಂಗಾ ಭಟ್ಟ, ಗಣಪತಿ ಸಂಕದಗುಂಡಿ, ವಾದಿರಾಜ‌ ಕಲ್ಲೂರಾಯ, ಪ್ರಸಾದ ಭಟಕಳ, ಡಿ.ಕೆ.ಗಾಂವ್ಕರ್ ಅರ್ಥದಾರಿಗಳಾಗಿ‌ ಪಾಲ್ಗೊಂಡರು. ಸೋಮವಾರ ದಕ್ಷಾದ್ವರ ತಾಳಮದ್ದಲೆ ನಡೆಯಲಿದ್ದು, ಸತೀಶ ಪಟ್ಲ ಇತರರು ಪಾಲ್ಗೊಳ್ಳಲಿದ್ದಾರೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.