ಚಂದ್ರವಳ್ಳಿ ಕೆರೆ-ಸಿಹಿನೀರು ಹೊಂಡಕ್ಕೆ ಬಾಗಿನ ಅರ್ಪಣೆ
Team Udayavani, Oct 25, 2021, 3:31 PM IST
ಚಿತ್ರದುರ್ಗ: ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಸುರಿಯುತ್ತಿರುವ ವ್ಯಾಪಕಮಳೆಗೆ ಬಹುತೇಕ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಚಿತ್ರದುರ್ಗ ನಗರದ ಜೀವನಾಡಿಗಳಾಗಿರುವ ಸಿಹಿನೀರುಹೊಂಡ, ಚಂದ್ರವಳ್ಳಿ ಕೆರೆಗಳು ಸೇರಿದಂತೆ ಕೋಟೆಯಲ್ಲಿರುವ ಒಡ್ಡು, ಕಲ್ಯಾಣಿಗಳು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿಸಂಪ್ರದಾಯದಂತೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು ಚಂದ್ರವಳ್ಳಿ ಕೆರೆ ಹಾಗೂ ಸಿಹಿನೀರು ಹೊಂಡಕ್ಕೆ ಭಾನುವಾರ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಮದಕರಿನಾಯಕರ ಕಾಲದಲ್ಲಿ ಯಾವುದೇ ಇಂಜಿನಿಯರ್ಗಳು ಇಲ್ಲದ ಕಾಲದಲ್ಲಿ ಕೋಟೆಯ ತುದಿಯಲ್ಲಿ ಬಿದ್ದ ನೀರು ವ್ಯವಸ್ಥಿತವಾಗಿ ಒಡ್ಡು, ಕಲ್ಯಾಣಿ, ಕೆರೆಗಳಿಗೆಹರಿದು ಬರುವಂತೆ ಮಾಡಿರುವ ತಂತ್ರಜ್ಞಾನ ಅದ್ಭುತ ಎಂದು ಬಣ್ಣಿಸಿದರು.
ಚದ್ರವಳ್ಳಿ ಕೆರೆ ಮತ್ತು ಸಿಹಿನೀರು ಹೊಂಡಗಳು ಐತಿಹಾಸಿಕವಾಗಿವೆ.ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿವೆ. ಕೋಟೆ ಮೇಲ್ಭಾಗದಲ್ಲಿರುವಗೋಪಾಲಸ್ವಾಮಿ ಹೊಂಡ ತುಂಬಿದ ನಂತರಆ ನೀರು ಅಕ್ಕ-ತಂಗಿ ಹೊಂಡಕ್ಕೆ ಹರಿದು,ಅಲ್ಲಿಂದ ಸಿಹಿನೀರು ಹೊಂಡಕ್ಕೆ ಬರುತ್ತದೆ. ಇಲ್ಲಿಂದ ಸಂತೇಹೊಂಡ, ಮಲ್ಲಾಪುರ ಕೆರೆ, ಗೊನೂರು ಕೆರೆ, ಕಲ್ಲೆನಹಳ್ಳಿ, ಮಧುರೆ ಕೆರೆಮೂಲಕ ಚಳ್ಳಕೆರೆ ತಾಲೂಕಿನ ರಾಣಿಕೆರೆ ತಲುಪುವುದು ವಿಶೇಷ. ಚಿತ್ರದುರ್ಗ ನಗರಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸಿಹಿನೀರು ಹೊಂಡ ಕಳೆದ 3-4 ವರ್ಷದಿಂದ ಕೋಡಿಬೀಳುತ್ತಿದೆ. ನಗರಕ್ಕೆ ನೀರಿನ ಬರವಿಲ್ಲ. 2008ರಿಂದ ನೀರಿನ ಕೊರತೆ ಇಲ್ಲದೆ ಜನತೆ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಕುಡಿಯುವ ನೀರಿನಯೊಜನೆಗಾಗಿ 140 ಕೋಟಿ ರೂ. ಗಳನ್ನು ನೀಡಿದೆ. ಇದರಲ್ಲಿ ಈಗಾಗಲೇ ವಿವಿ ಸಾಗರ ಮತ್ತು ಶಾಂತಿ ಸಾಗರದಿಂದ ಎರಡನೇ ಹಂತದ ಪೈಪ್ಲೆ„ನ್ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ 2 ವರ್ಷದಲ್ಲಿ 24 ಗಂಟೆ ನೀರು ಸರಬರಾಜು ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಗೊಂದಲ ಇದ್ದರೆ ಬಗೆಹರಿಸಲಾಗುವುದು. ಶ್ರೀಮಂತರು ಸಹ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅದನ್ನು ಪರಿಹಾರ ಮಾಡುವಸಲುವಾಗಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರಲ್ಲಿ ಕೆಲವುನ್ಯೂನತೆಗಳಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ,ಸದಸ್ಯರಾದ ಮೀನಾಕ್ಷಿ, ಭಾಗ್ಯಮ್ಮ,ಆನಂದ, ಶ್ರೀನಿವಾಸ್, ಶ್ವೇತಾ, ತಾರಕೇಶ್ವರಿ,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ರೇಖಾ,ಯೋಜನಾ ನಿರ್ದೇಶಕ ಸತೀಶ್ ರೆಡ್ಡಿಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್