ತಿರುಚ್ಚಿ – ಹುಬ್ಬಳ್ಳಿ ಏರ್ಪೋರ್ಟ್ ವಿಲೀನ?
7 ಸಣ್ಣ ವಿಮಾನ ನಿಲ್ದಾಣಗಳನ್ನು 6 ದೊಡ್ಡದರ ಜೊತೆ ವಿಲೀನಗೊಳಿಸಲು ಚಿಂತನೆ
Team Udayavani, Oct 27, 2021, 9:00 AM IST
ನವದೆಹಲಿ: ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಯ ನಡುವೆಯೇ ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದಂತೆ ದೇಶದ 7 ಸಣ್ಣ ಏರ್ಪೋರ್ಟ್ಗಳನ್ನು 6 ದೊಡ್ಡ ವಿಮಾನನಿಲ್ದಾಣಗಳೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಅದರಂತೆ, ವಾರಾಣಸಿ ವಿಮಾನನಿಲ್ದಾಣದೊಂದಿಗೆ ಖುಶಿ ನಗರ ಮತ್ತು ಗಯಾ ಏರ್ಪೋರ್ಟ್, ಅಮೃತಸರದೊಂದಿಗೆ ಕಾಂಗ್ರಾ, ಭುವನೇಶ್ವರದೊಂದಿಗೆ ತಿರುಪತಿ, ರಾಯ್ಪುರದೊಂದಿಗೆ ಔರಂಗಾಬಾದ್, ಇಂದೋರ್ನೊಂದಿಗೆ ಜಬಲ್ಪುರ ಮತ್ತು ತಿರುಚ್ಚಿಯೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ವಿಲೀನಗೊಳಿಸಲಾಗುತ್ತದೆ.
ಇದಲ್ಲದೇ, ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ವಯ ಮುಂದಿನ 4 ವರ್ಷಗಳಲ್ಲಿ 25 ಏರ್ಪೋರ್ಟ್ಗಳನ್ನು ಖಾಸಗಿಗೆ ವಹಿಸುವ ಗುರಿಯನ್ನೂ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ(ಎಎಐ) ಹಾಕಿಕೊಂಡಿದೆ.
ಮಾರ್ಚ್ನೊಳಗೆ ಪ್ರಕ್ರಿಯೆ ಪೂರ್ಣ:
ಇದೇ ವೇಳೆ, ಮುಂದಿನ ವರ್ಷದ ಮಾರ್ಚ್ ವೇಳೆಗೆ ದೇಶದ 13 ವಿಮಾನನಿಲ್ದಾಣಗಳ ಖಾಸಗೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಬಿಡ್ಡಿಂಗ್ ಮಾಡಲು 13 ಏರ್ಪೋರ್ಟ್ಗಳ ಪಟ್ಟಿಯನ್ನು ಈಗಾಗಲೇ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲೇ ಬಿಡ್ಡಿಂಗ್ ಪೂರ್ಣಗೊಳ್ಳಲಿದೆ ಎಂದು ಪ್ರಾಧಿಕಾರದ ಮುಖ್ಯಸ್ಥ ಸಂಜೀವ್ ಕುಮಾರ್ ತಿಳಿಸಿದ್ದಾರೆ ಎಂದು “ದ ಇಕನಾಮಿಕ್ ಟೈಮ್ಸ್’ವರದಿ ಮಾಡಿದೆ.
ಇದನ್ನೂ ಓದಿ:1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK
ಪ್ರಯಾಣಿಕನಿಂದ ಬರುವ ತಲಾ ಆದಾಯದ ಮಾದರಿಯನ್ನು ಬಿಡ್ಡಿಂಗ್ಗೆ ಅನುಸರಿಸಲಾಗುತ್ತದೆ. ಈ ಮಾದರಿಯನ್ನು ಈ ಹಿಂದೆಯೂ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಜೇವಾರ್ ಏರ್ಪೋರ್ಟ್(ಗ್ರೇಟರ್ ನೋಯ್ಡಾ)ನ ಬಿಡ್ಡಿಂಗ್ ಪ್ರಕ್ರಿಯೆಯೂ ಇದೇ ಮಾದರಿಯಲ್ಲಿ ನಡೆದಿತ್ತು.
ಯಾವ ಏರ್ಪೋರ್ಟ್ನಲ್ಲಿ ಯಾವುದು ವಿಲೀನ?
1. ತಿರುಚ್ಚಿ ವಿಮಾನ ನಿಲ್ದಾಣದೊಂದಿಗೆ ಹುಬ್ಬಳ್ಳಿ
2. ವಾರಾಣಸಿಯೊಂದಿಗೆ ಕುಶಿನಗರ ಮತ್ತು ಗಯಾ
3. ಭುವನೇಶ್ವರದೊಂದಿಗೆ ತಿರುಪತಿ
4. ರಾಯ್ಪುರದೊಂದಿಗೆ ಔರಂಗಾಬಾದ್
5. ಇಂದೋರ್ನೊಂದಿಗೆ ಜಬಲ್ಪುರ
6. ಅಮೃತಸರದೊಂದಿಗೆ ಕಾಂಗ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ
MUST WATCH
ಹೊಸ ಸೇರ್ಪಡೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು
Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ