ಅಭಿವೃದಿಗೆ ಶಿಕ್ಷಣವೇ ಮೂಲಮಂತ್ರ


Team Udayavani, Nov 12, 2021, 5:38 PM IST

26education

ಗುರುಮಠಕಲ್‌: ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರವಾಗಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಎಸ್‌ ಎಸ್‌ಕೆ ಸಮಾಜದ ಮುಖಂಡ ಚಂದ್ರಲಾಲ್‌ ಚೌದ್ರಿ ಹೇಳಿದರು.

ಪಟ್ಟಣದ ಅಂಕಮ್ಮದೇವಿ ದೇವಸ್ಥಾನದಲ್ಲಿ ಎಸ್‌ ಎಸ್‌ಕೆ ಸಮಾಜದ ನವ ಯುವಕ ಸಂಘದಿಂದ ಆಯೋಜಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಉತ್ತರ ಭಾರತದಲ್ಲಿ ಸಹಸ್ರಾ ನದಿ ಸಹಸ್ರಾರ್ಜುನ ಮಹಾರಾಜರ ಬಾಣದಿಂದ ಹುಟ್ಟಿದೆ. ಅದು ಇಂದಿಗೂ ಪ್ರಖ್ಯಾತಿ ಹೊಂದಿದೆ. ಕ್ರಿ.ಪೂ 2600ರಲ್ಲಿ ವಿವಿಧ ಪುರಾಣಗಳಲ್ಲಿ ಮಹಾರಾಜರ ಕುರಿತು ಉಲ್ಲೇಖಗಳಿವೆ. ಆಗ ಒಂದು ಸಹಸ್ರ ಅಶ್ವಮೇಧ ಯಜ್ಞ ಮಾಡುವುದರೊಂದಿಗೆ ಋಷಿಮುನಿಗಳ ಅಪಾರ ಸೇವೆ ಸಹಸ್ರಾರ್ಜುನ ಮಹಾರಾಜರು ಮಾಡಿದ್ದಾರೆ ಎಂದರು.

ಎಸ್‌ಎಸ್‌ಕೆ ಸಮಾಜದ ಬುಡ್ಡಪ್ಪ ಜನಾರ್ಧನ ಮಾತನಾಡಿ, ಮಹಾರಾಜರ ಸಾಕಷ್ಟು ತಪಸ್ಸುಗಳ ಫಲವಾಗಿ ದತ್ತಾತ್ರೇಯ ದೇವರಿಂದ ಸಹಸ್ರಾರ್ಜುನ ಮಹಾರಾಜರಿಗೆ ಸಹಸ್ರ ಬಾಹು ವರದಾನ ದೊರೆಯುತ್ತದೆ. ಇದನ್ನರಿತ ಅಗ್ನಿ ಋಷಿಗಳು ಮಹಾರಾಜರ ಹತ್ತಿರ ಬಂದು ನೀವೆ ನನ್ನನ್ನು ತೃಪ್ತಿ ಪಡಿಸಬೇಕೆಂದು ಕೇಳಿದಾಗ ಅವರು ತಮ್ಮ ಶಕ್ತಿಯಿಂದ ಸಾಕಷ್ಟು ಆಶ್ರಮ ಸುಡಲಾರಂಭಿಸಿದರು. ಅದರಲ್ಲಿ ಆಪವ ಋಷಿಗಳ ಆಶ್ರಮವೂ ಸುಟ್ಟು ಹೋಗಿದ್ದರಿಂದ ಕುಪಿತಗೊಂಡ ಋಷಿ ಅಗ್ನಿದೇವರಲ್ಲಿ ಇಷ್ಟು ಶಕ್ತಿ ಬರಲು ಕಾರಣೀಕರ್ತರು ಯಾರೆಂದು ತಿಳಿದು ಆಗ ಸಹಸ್ರಾರ್ಜುನ ಮಹಾರಾಜರಿಗೆ ಶಾಪ ನೀಡುವುದನ್ನು ಕಾಣುತ್ತೇವೆ ಎಂದರು. ಗುರುಮಠಕಲ್‌ ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರರಾವ್‌ ಬಸೂದೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ ಕುಮಾರ ಹಬೀಬ ಮಾತನಾಡಿದರು.

ದಂಡೋತಿಯ ಜಯಶ್ರೀ ಮಾತೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಯಂತಿ ನಿಮಿತ್ತ ಬೆಳಗ್ಗೆ 8 ಗಂಟೆಗೆ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ರಾಮಕಿಶನರಾವ್‌ ಗೊಂಗಲೆ, ಗೌರವಾಧ್ಯಕ್ಷ ನಾರಾಯಣರಾವ್‌ ಚೌಧರಿ, ಡಾ|ನರಸಿಂಗರಾವ್‌, ತುಳಸಿರಾಮ ಗೊಂಗಲೆ, ಚಂದ್ರಕಾಂತ ಚೌದರಿ, ಜಗದೀಶ ಮೇಂಗಜಿ, ಹಣಮಂತರಾವ್‌ ಗೊಂಗಲೆ, ಅನೀಲ್‌ ಬಸೂದೆ ಇದ್ದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.