ಉಚಿತ ಕಾನೂನು ಸಲಹೆ ಪಡೆಯಿರಿ: ಯಾತನೂರ
Team Udayavani, Nov 14, 2021, 3:10 PM IST
ಆಲಮೇಲ: ಬಡ ಜನರು ಮತ್ತು ದೀನ ದಲಿತರು ಉಚಿತವಾಗಿ ಕಾನೂನಿನ ಸಲಹೆ ಪಡೆದುಕೊಂಡು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಂದಗಿಯ ವಕೀಲ ಎಂ.ಸಿ. ಯಾತನೂರ ಹೇಳಿದರು.
ಪಪಂ ಸಭಾ ಭವನದಲ್ಲಿ ಶನಿವಾರ ಸಿಂದಗಿಯ ವಕೀಲರ ಸಂಘ ಮತ್ತು ಆಲಮೇಲ ತಾಲೂಕಾಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಹಾಗೂ ಮೆಗಾ ಶಿಬಿರದಲ್ಲಿ ಅವರು ಮಾತನಾಡಿದರು.
ಕಾನೂನಿನ ತಿಳಿವಳಿಗೆ ಇಲ್ಲದವರಿಗೆ ಆರ್ಟಿಕಲ್ 21ರಲ್ಲಿ ತಮ್ಮ ಹಕ್ಕಿನ ಬಗ್ಗೆ ಸಲಹೆ ಪಡೆದುಕೊಳ್ಳಬಹುದು. ಅನಾಗರಿಕ ಜನರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಒಳಗಿರುವ ಬಡ ಜನರಿಗೆ ಉಚಿತವಾಗಿ ಕಾನೂನಿನ ಮೂಲಕ ನ್ಯಾಯ ಕೊಡಿಸಲಾಗುವದು ಎಂದರು.
ವಯಸ್ಕ ತಂದೆ ತಾಯಿ ಆಸ್ತಿ ಪಡೆದುಕೊಂಡು ಸಂರಕ್ಷಣೆ ಮಾಡಿದೆ ತಿರಸ್ಕರಿದರೆ ಅಂಥವರು ತಮ್ಮ ತಾಲೂಕಿನ ನ್ಯಾಯಾಲಯಕ್ಕೆ ಬಂದು ದೂರು ನೀಡಿದರೆ ಕಾನೂನು ಪ್ರಾಧಿಕಾರದ ಮೂಲಕ ತಂದೆ ತಾಯಿ ಆಸ್ತಿಯನ್ನು ಮರಳಿ ವಶಪಡಿಸಿಕೊಳ್ಳಬಹುದು ಎಂದರು.
ಆಲಮೇಲ ತಾಲೂಕಿನ ಗ್ರೇಡ 2 ತಹಶೀಲ್ದಾರ್ ಪ್ರಕಾಶ ಸಿಂದಗಿ ಮಾತನಾಡಿ, ಬಡ ಜನರಿಗೆ ಸರ್ಕಾರದ ಯೋಜನೆಗಳು ಪಡೆದುಕೊಳ್ಳುವ ಸಲುವಾಗಿಯೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರು ಸರ್ಕಾರದ ಮಾಸಾಸನ ವಂಚಿತರಾಗಿದ್ದರೆ ಜಾಗೃತಿ ಕಾರ್ಯಕ್ರಮದಲ್ಲಿ ಶಿಬಿರಗಳು ಹಮ್ಮಿಕೊಂಡು ಆ ಸ್ಥಳದಲ್ಲೆ ತಕ್ಷಣವೆ ಪರಿಹಾರ ಒದಗಿಸಲಿದೆ. ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ತಹಶೀಲ್ದಾರ್ ಅಥವಾ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೆ ತಕ್ಷಣ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ವಕಿಲರಾದ ಬಿ.ವೈ. ಕುಮಸಗಿ, ಪಪಂ ಸಿಒ ಶಾಂತಪ್ಪ ಹಾದಿಮನಿ, ಕಂದಾಯ ಅಧಿಕಾರಿ ಎಂ.ಎ. ಅತ್ತಾರ, ಬಿ.ಜಿ. ನಾರಾಯಣಕರ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ