ಸೇನೆಗೆ ಬಂತು ಎಸ್‌-400 ಬಲ : ರಷ್ಯಾದಿಂದ ಮೊದಲ ಕಂತಿನ ಕ್ಷಿಪಣಿ ರವಾನೆ ಶುರು

ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಮೊದಲು ನಿಯೋಜನೆ

Team Udayavani, Nov 15, 2021, 7:40 AM IST

ಸೇನೆಗೆ ಬಂತು ಎಸ್‌-400 ಬಲ : ರಷ್ಯಾದಿಂದ ಮೊದಲ ಕಂತಿನ ಕ್ಷಿಪಣಿ ರವಾನೆ ಶುರು

ದುಬೈ: ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಸ್‌-400 ಟ್ರೈಂಫ್ನ ಪೂರೈಕೆ ಭಾರತಕ್ಕೆ ಶುರುವಾಗಿದೆ. ಮುಂದಿನ ತಿಂಗಳ ಅಂತ್ಯಕ್ಕೆ ಕ್ಷಿಪಣಿಯ ಮೊದಲ ಸ್ಕ್ವಾಡ್ರನ್‌ ಪೂರೈಕೆ ಮುಕ್ತಾಯವಾಗಲಿದೆ ಎಂದು ರಷ್ಯಾದ ಮಿಲಿಟರಿ ತಾಂತ್ರಿಕ ಸಹಕಾರ ಸಂಸ್ಥೆ (ಎಫ್ಎಸ್‌ಎಂಟಿಸಿ) ನಿರ್ದೇಶಕ ಡಿಮಿó ಶುಗೇವ್‌ ಖಚಿತಪಡಿಸಿದ್ದಾರೆ. ದೇಶದ ಎರಡು ನೆರೆ”ಹೊರೆ’ಗಳಾಗಿರುವ ಪಾಕಿಸ್ತಾನ ಮತ್ತು ಚೀನಾ ಪದೇ ಪದೆ ತಂಟೆಕೋರತನ ಪ್ರದರ್ಶಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಚೀನಾ ದಾಳಿಯ ಬಳಿಕ 2 ದೇಶಗಳ ನಡುವೆ ಸೌಹಾರ್ದ ಬಾಂಧವ್ಯ ಉಳಿದಿಲ್ಲ.

ಈಗಾಗಲೇ ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೇಲ್‌ ಯುದ್ಧ ವಿಮಾನಗಳನ್ನು ಚೀನಾ ಗಡಿಗುಂಟ ನಿಯೋಜಿಸಲಾಗಿದೆ. ಇದೀಗ ಎಸ್‌-400 ಕ್ಷಿಪಣಿ ರಕ್ಷಣೆ ವ್ಯವಸ್ಥೆ ಲಭ್ಯವಾಗುತ್ತಿರುವುದರಿಂದ ಭಾರತೀಯ ವಾಯುಪಡೆ (ಐಎಎಫ್)ಗೆ ಮತ್ತಷ್ಟು ಬಲಬರಲಿದೆ. ಚೀನಾ ವಿಚಾರಕ್ಕೆ ಬರುವುದಾದರೆ, ಆ ದೇಶವೂ ಕೂಡ ಇದೇ ಮಾದರಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಿದೆ. ಆ ಪೈಕಿ ಎರಡನ್ನು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಟಿಬೆಟ್‌ನ ನಗ್ರಿ ಗರ್‌ ಗುನ್ಸಾ ಮತ್ತು ನಿಂಗಿc ವಾಯುನೆಲೆಯಲ್ಲಿ ನಿಯೋಜಿಸಿದೆ.

ಮೊದಲು ಪಶ್ಚಿಮದಲ್ಲಿ:
ರಷ್ಯಾ ಜತೆಗೆ 35 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡು ಖರೀದಿಸಲಾಗುತ್ತಿರುವ ಎಸ್‌-400 ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ದೇಶದ ಪಶ್ಚಿಮ ಭಾಗದಲ್ಲಿ ನಿಯೋಜಿಸಲಾಗುತ್ತದೆ. ಅಲ್ಲಿ ನಿಯೋಜಿಸಿದರೆ, ಚೀನಾ ಮತ್ತು ಪಾಕಿಸ್ತಾನಗಳಿಂದ ಉಂಟಾಗಬಹುದಾದ ಸಂಭಾವ್ಯ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಒಟ್ಟು ಐದು ಸ್ಕ್ವಾಡ್ರನ್‌ಗಳಷ್ಟು ಕ್ಷಿಪಣಿಗಳು ದೇಶಕ್ಕೆ ಸಿಗಲಿವೆ.

ಪುಟಿನ್‌ ಭೇಟಿ:
ಮುಂದಿನ ತಿಂಗಳ ಎರಡನೇ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನವದೆಹಲಿಗೆ ಆಗಮಿಸಲಿರುವಂತೆಯೇ ಕ್ಷಿಪಣಿ ದೇಶಕ್ಕೆ ಆಗಮಿಸಲಾರಂಭಿಸಿದೆ. ಪ್ರವಾಸದ ವೇಳೆ ಪುಟಿನ್‌ ಎಸ್‌-400 ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ. ಅವರ ಪ್ರವಾಸದಲ್ಲಿಯೇ ಭಾರತ ಮತ್ತು ರಷ್ಯಾ ನಡುವೆ ಜನವರಿಯಲ್ಲಿ ನಡೆಯಲಿರುವ 2 ದೇಶಗಳ ಮೊದಲ 2+2 ಮಾತುಕತೆಗೂ ವೇದಿಕೆ ನಿರ್ಮಾಣವಾಗಲಿದೆ.

ಇದನ್ನೂ ಓದಿ : ಪಾಕ್‌ ಜೈಲಿನಿಂದ 20 ಭಾರತೀಯ ಮೀನುಗಾರರ ಬಿಡುಗಡೆ : ಸೋಮವಾರ ಭಾರತಕ್ಕೆ ಹಸ್ತಾಂತರ

ಏನಿದು ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ?
– ನಾಲ್ಕು ವಿವಿಧ ರೀತಿಯ ಕ್ಷಿಪಣಿಗಳನ್ನು ಹೊಂದಿರುತ್ತವೆ.
– ಶತ್ರುವಿನ ಯುದ್ಧ ವಿಮಾನ (400 ಕಿಮೀ), ಖಂಡಾಂತರ ಕ್ಷಿಪಣಿ (250 ಕಿಮೀ), ಏರ್‌ಬಾರ್ನ್ ವಾರ್ನಿಂಗ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಮ್‌- ಎಡಬ್ಲೂéಎಸಿಎಸ್‌ (120 ಕಿಮೀ), ಸಣ್ಣ ಕ್ಷಿಪಣಿ (40 ಕಿಮೀ) ವ್ಯಾಪ್ತಿ ಚಲಿಸಬಲ್ಲದು.
36 ಗುರಿ- ಒಂದೇ ಬಾರಿಗೆ ಛೇದನ ಸಾಮರ್ಥ್ಯ
– 400 ಕಿಮೀ ದೂರದಲ್ಲಿ , 30 ಕಿಮೀ ಎತ್ತರದಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನ, ಡ್ರೋನ್‌ಗಳು, ಖಂಡಾಂತರ ಮತ್ತು ಕ್ರೂéಸ್‌ ಮಿಸೈಲ್‌ಗ‌ಳನ್ನು ಛೇದನ ಸಾಮರ್ಥ್ಯ

ಅಭಿವೃದ್ಧಿಪಡಿಸಿದ್ದು ಯಾರು?
1990ರಲ್ಲಿ ಅಲ್ಮಾಜ್‌ ಸೆಂಟ್ರಲ್‌ ಡಿಸೈನ್‌ ಬ್ಯೂರೋ ಅಭಿವೃದ್ಧಿಪಡಿಸಿದೆ. ನ್ಯಾಟೋ ಪಡೆಗಳು ಈ ಕ್ಷಿಪಣಿ ವ್ಯವಸ್ಥೆ ಹೊಂದಿವೆ. 2007ರಲ್ಲಿ ರಷ್ಯಾ ಸೇನೆಗೆ ಸೇರ್ಪಡೆಯಾಗಿತ್ತು.

35 ಸಾವಿರ ಕೋಟಿ ರೂ.- ಭಾರತ-ರಷ್ಯಾ ನಡುವಿನ ಒಪ್ಪಂದದ ಮೊತ್ತ
05- ಇಷ್ಟು ವರ್ಷಗಳಲ್ಲಿ ಪೂರೈಕೆ ಮುಕ್ತಾಯ
05 – ಸ್ವಾಡ್ರನ್‌ಗಳು. ಒಂದು ಸ್ಕ್ವಾಡ್ರನ್‌ನಲ್ಲಿ 12-24 ಯುದ್ಧ ವಿಮಾನಗಳು ಅಥವಾ ಕ್ಷಿಪಣಿಗಳು ಇರುತ್ತವೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.