ಜೈಪುರ ಟಿ20ಗೆ ಎದುರಾಗಲಿದೆ ದಟ್ಟ ಮಂಜು
Team Udayavani, Nov 16, 2021, 7:00 AM IST
ಜೈಪುರ: ಪಿಂಕ್ ಸಿಟಿಯ “ಸವಾಯ್ ಮಾನ್ಸಿಂಗ್ ಸ್ಟೇಡಿಯಂ’ 2013ರ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಸಡಗರದಲ್ಲಿದೆ.
ಬುಧವಾರ ಇಲ್ಲಿ ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಟಿ20 ಮುಖಾಮುಖಿ ಸಾಗಲಿದೆ. ಇದು ಜೈಪುರದಲ್ಲಿ ನಡೆಯಲಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವೆಂಬುದು ಮತ್ತೊಂದು ಸಡಗರಕ್ಕೆ ಕಾರಣ.
ಆದರೆ ಕಳೆದೆರಡು ದಿನಗಳಿಂದ ಜೈಪುರ ದಟ್ಟ ಮಂಜಿನಿಂದ ಆವೃತ ವಾಗಿದೆ. ಪಂದ್ಯ 7 ಗಂಟೆಗೆ ಆರಂಭ ವಾಗುವುದಿದ್ದರೂ ಮೊದಲ ಇನ್ನಿಂಗ್ಸ್ ವೇಳೆಯೇ ಮಂಜಿನ ಪ್ರಭಾವ ತೀವ್ರಗೊಳ್ಳಲಿದೆ. ಹೀಗಾಗಿ “ಆಂಟಿ ಡ್ಯೂ ಸ್ಪ್ರೇ’ ಪ್ರಯೋಗಿಸಬೇಕಾಗುತ್ತದೆ ಎಂದು ಕ್ರೀಡಾಂಗಣದ ಅಧಿಕಾರಿ ಯೊಬ್ಬರು ಹೇಳಿದ್ದಾರೆ.
ಬ್ಯಾಟಿಂಗ್ ಟ್ರ್ಯಾಕ್?
ಆದರೂ ಇಲ್ಲಿನ ಟ್ರ್ಯಾಕ್ ಬ್ಯಾಟಿಂಗಿಗೆ ಹೆಚ್ಚಿನ ಸಹಕಾರ ನೀಡುವ ಸಾಧ್ಯತೆ ಇದೆ. 2013ರಲ್ಲಿ ಇಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಏಕದಿನ ಪಂದ್ಯ ನಡೆದಾಗ ರನ್ ಪ್ರವಾಹವೇ ಹರಿದು ಬಂದಿತ್ತು. ಆಸೀಸ್ನ 359 ರನ್ನುಗಳ ಕಠಿನ ಗುರಿಯನ್ನು ಭಾರತ 43.3 ಓವರ್ಗಳಲ್ಲೇ ಬೆನ್ನಟ್ಟಿತ್ತು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.
ಇದನ್ನೂ ಓದಿ:ನಮ್ಮ ಕುಟುಂಬದ ತಂಟೆಗೆ ಬಂದರೆ ಹುಷಾರ್: ಬಿಜೆಪಿಗೆ ಎಚ್ಡಿಕೆ ಎಚ್ಚರಿಕೆ
25 ಸಾವಿರ ಸಾಮರ್ಥ್ಯ
ಸ್ಟೇಡಿಯಂ 25 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಆನ್ಲೈನ್ನಲ್ಲಿ 8 ಸಾವಿರ ಟಿಕೆಟ್ ಮಾರಾಟ ವಾಗಿದೆ ಎಂದು ಆರ್ಸಿಎ ಕಾರ್ಯದರ್ಶಿ ಮಹೇಂದ್ರ ವರ್ಮ ಹೇಳಿದ್ದಾರೆ.
ರಾಜಸ್ಥಾನ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಒಳಜಗಳದಿಂದಾಗಿ ಕಳೆದೊಂದು ದಶಕದಲ್ಲಿ ಜೈಪುರಕ್ಕೆ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ತಪ್ಪಿತ್ತು. ಈಗ ಸಮಸ್ಯೆ ತಿಳಿಯಾಗಿದೆ. ಫೆಬ್ರವರಿಯಲ್ಲಿ ಇಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಕೂಡ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ