ತ್ರಿಪುರ ಹಿಂಸಾಚಾರ: ಎಫ್ಐಆರ್ ತೆಗೆಯಲು ಸುಪ್ರೀಂ ಸೂಚನೆ
ತ್ರಿಪುರ ಹಿಂಸಾಚಾರ: ವಕೀಲರು, ಪತ್ರಕರ್ತರ ಮೇಲೆ ದಾಖಲಾಗಿದ್ದ ಎಫ್ಐಆರ್
Team Udayavani, Nov 17, 2021, 11:15 PM IST
ನವದೆಹಲಿ: ತ್ರಿಪುರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ಹಿಂಸಾಚಾರ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡಿದ್ದಕ್ಕೆ ಮೂವರು ನಾಗರಿಕರ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ಅನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ವಕೀಲರಾದ ಮುಕೇಶ್ ಮತ್ತು ಅನ್ಸಾರುಲ್ ಹಕ್ ಮತ್ತು ಪತ್ರಕರ್ತರಾದ ಶ್ಯಾಮ್ ಮೀರಾ ಸಿಂಗ್ ಅವರ ವಿರುದ್ಧದ ಎಫ್ಐಆರ್ ತೆಗೆದುಹಾಕಲು ತ್ರಿಪುರ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಮುಂದಿನ ಆದೇಶದವರೆಗೂ ಆ ಮೂವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ಸೂಚಿಸಲಾಗಿದೆ.
ಇದನ್ನೂ ಓದಿ:ಕುಲಭೂಷಣ್ ಜಾಧವ್ ಗೆ ಸ್ವಲ್ಪ ರಿಲೀಫ್; ಐಸಿಜೆಗೆ ಮನವಿ-ಮಸೂದೆ ಅಂಗೀಕರಿಸಿದ ಪಾಕ್
ತ್ರಿಪುರ ಹಿಂಸಾಚಾರದ ವೇಳೆ ಶ್ಯಾಮ್ ಅವರು “ತ್ರಿಪುರ ಬರ್ನಿಂಗ್’ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಇದು ಕಾನೂನುಬಾಹಿರ ಚಟುವಟಿಕೆ ಎಂದಿದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅದನ್ನು ವಿರೋಧಿಸಿ ಮೂವರು ನ್ಯಾಯಾಲಯದ ಮೆಟ್ಟಿಲೇರಿದ್ದರು.