ಕೆರೆಗೆ ಸೇರುತ್ತಿದೆ ಚರಂಡಿ ಕಲುಷಿತ ನೀರು
Team Udayavani, Dec 8, 2021, 1:44 PM IST
ಗುಂಡ್ಲುಪೇಟೆ: ಉತ್ತೂರು ಏತ ನೀರಾವರಿ ಯೋಜನೆಯಡಿ ತುಂಬಿರುವ ಬೊಮ್ಮಲಾಪುರ ಕೆರೆಗೆ ಗ್ರಾಮದ ಚರಂಡಿ ನೀರು ಸೇರುತ್ತಿದೆ. ಇದರಿಂದ ಕೆರೆ ಸಂಪೂರ್ಣವಾಗಿ ಕಲುಷಿತವಾಗುತ್ತಿದೆ.
ಕಳೆದ ಹಲವು ವರ್ಷಗಳಿಂದಲೂ ಬರಿದಾಗಿದ್ದ ಬೊಮ್ಮಲಾಪುರ ಕೆರೆ ಏತ ನೀರಾವರಿ ಯೋಜನೆಯಡಿ ಕಳೆದ 10 ದಿನಗಳ ಹಿಂದೆ ತುಂಬಿ ಕೋಡಿ ಬಿದ್ದು, ಮುಂದಿನ ಶಿವಪುರ ಕಲ್ಕಟ್ಟ ಕೆರೆಗೆ ಹರಿಯುತ್ತಿದೆ. ಆದರೆ ಬೊಮ್ಮಲಾಪುರ ಗ್ರಾಮಸ್ಥರು ಚರಂಡಿ ನೀರನ್ನು ಕೆರೆಗೆ ಬಿಡುತ್ತಿರುವ ಹಿನ್ನೆಲೆ ಕೋಡಿ ನೀರಿನ ಜೊತೆ ಕಲುಷಿತ ಚರಂಡಿ ನೀರು ಮುಂದಿನ ಕೆರೆಗೆ ಹೋಗುವಂತಾಗಿದೆ. ಇದರಿಂದ ಕೆರೆಯಲ್ಲಿರುವ ಹಲವು ಜಲಚರ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಂತಾಗಿದೆ.
ಗ್ರಾಪಂ ಬೇಜವಾಬ್ದಾರಿ: ಗ್ರಾಮದ ಹಲವು ಚರಂಡಿ ಹೂಳು ತುಂಬಿದ್ದು, ಇನ್ನು ಕೆಲವು ಚರಂಡಿ ನೀರು ಕೆರೆಗೆ ಸೇರುತ್ತಿದ್ದರೂ ಗ್ರಾಪಂ ಆಡಳಿತ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಗ್ರಾಮದ ಕಲುಷಿತ ನೀರು ಕೆರೆಗೆ ಹೋಗುತ್ತಿದೆ. ಈ ಬಗ್ಗೆ ಕ್ರಮ ವಹಿಸಿ ಕೆರೆಗೆ ನೀರು ಸೇರದಂತೆ ನೋಡಿಕೊಳ್ಳಬೇಕೆಂದು ಸ್ಥಳೀಯರಾದ ಜಯರಾಂ ಒತ್ತಾಯಿಸಿದ್ದಾರೆ. ರಾಸುಗಳಿಗೆ ಕಲುಷಿತ ನೀರು: ಬೊಮ್ಮಲಾಪುರ ಕೆರೆ ತುಂಬಿ ಶಿವಪುರ ಕೆರೆಗೆ ನೀರು ಹರಿಯುತ್ತಿದೆ. ಈ ಮಾರ್ಗವಾಗಿ ಹಲವು ಕಾಲುವೆಗಳು ಸಿಗುತ್ತಿದ್ದು, ಆ ಭಾಗದ ಅಧಿಕ ಮಂದಿ ರೈತರು ಕೆರೆಯ ನೀರನ್ನೆ ದನ-ಕರುಗಳಿಗೆ ಕುಡಿಸುತ್ತಿದ್ದಾರೆ. ಇದರಿಂದ ಮೂಖ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗುವ ಭೀತಿ ರೈತರಿಗೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!