ಆಗಸ ಅವಘಡ: ಹಾರಾಡುತ್ತಲೇ ಪ್ರಾಣ ಪಕ್ಷಿ ಹಾರಿ ಹೋದ ಹಲವು ಘಟನೆಗಳು…


Team Udayavani, Dec 9, 2021, 6:40 AM IST

ಆಗಸ ಅವಘಡಗಳು; ಹಲವು ಘಟನೆಗಳನ್ನುಇಲ್ಲಿ ಮೆಲುಕು ಹಾಕಲಾಗಿದೆ

ತ್ವರಿತ ಪ್ರಯಾಣಕ್ಕೆ ಆಗಸ ಯಾನ’ ಸೂಕ್ತ. ಮೋಡ ಸೀಳಿ ಮೇಲೇರುವ ವಿಮಾನ, ಹೆಲಿಕಾಪ್ಟರ್‌ ಪಯಣದ ಅನುಭವವೇ ವಿಶಿಷ್ಟ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಅವಘಡಗಳು ಎದೆ ಝಲ್ಲೆನಿಸುತ್ತಿವೆ. ನಭಕ್ಕೆ ಹಾರಿದ ಲೋಹದ ಹಕ್ಕಿಗಳು ಮರಳಿ ಭುವಿಗೆ ತಾಗುವವರೆಗೂ ಜೀವ ಕೈಯಲ್ಲೇ ಹಿಡಿದಿಡುವ ಸ್ಥಿತಿ ನಿರ್ಮಾಣವಾಗಿದೆ. ಏರ್‌ ಟ್ರಾಫಿಕ್‌’ ಮಧ್ಯೆಯೂ ಸುರಕ್ಷಿತವಾಗಿ ಗೂಡು ಸೇರುವುದು ಪ್ರಯಾಸ ಎನಿಸಿದೆ. ಆಗಸದಲ್ಲಿ ಹಾರಾಡುತ್ತಲೇ ಪ್ರಾಣ ಪಕ್ಷಿ ಹಾರಿ ಹೋದ ಹಲವು ಘಟನೆಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಸಂಜಯ ಗಾಂಧಿ
ಕಾಂಗ್ರೆಸ್‌ ಸಂಸದ, ಇಂದಿರಾ ಹಾಗೂ ಫಿರೋಜ್‌ ಗಾಂಧಿ ಪುತ್ರ ಸಂಜಯ ಗಾಂಧಿ 1980, ಜೂ.23ರಂದು ನವದೆಹಲಿಯ ಸಫ‌ªರ್‌ಜಂಗ್‌ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಆಗಸ ದುರಂತ’ದಲ್ಲಿ ಮೃತಪಟ್ಟಿದ್ದರು. ಸ್ವತಃ ವಿಮಾನ ಚಲಾಯಿಸುವ ಸಾಮರ್ಥ್ಯ ಹೊಂದಿದ್ದ ಸಂಜಯ ಗಾಂಧಿ, ದೆಹಲಿ ಫ್ಲೈಯಿಂಗ್‌ ಕ್ಲಬ್‌ನಿಂದ ಹೊಸ ಏರ್‌ಕ್ರಾಫ್ಟ್ ನಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ದುರಂತ ಸಂಭವಿಸಿತ್ತು. 8 ಸರ್ಜನ್‌ಗಳು ಸತತ ನಾಲ್ಕು ಗಂಟೆಗಳ ಕಾಲ ಅವರ ಮೃತದೇಹವನ್ನು ಹೊಂದಿಸಿ ಹೊಲಿಗೆ ಹಾಕಿದ್ದು ದುರಂತದ ಭೀಕರತೆಗೆ ಸಾಕ್ಷಿಯಾಗಿತ್ತು.

ವೈ.ಎಸ್‌.ರಾಜಶೇಖರ ರೆಡ್ಡಿ
ಅಖಂಡ ಆಂಧ್ರಪ್ರದೇಶ ಸಿಎಂ ಆಗಿದ್ದ ವೈ.ಎಸ್‌.ರಾಜಶೇಖರ್‌ ರೆಡ್ಡಿ 2009, ಸೆ.2ರಂದು ಪಕ್ಷದ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್‌ ದುರಂತ ಸಂಭವಿಸಿತ್ತು. ಕರ್ನೂಲ್‌ ಸಮೀ ಪದ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಬೆಲ್‌ 430 ಹೆಲಿಕಾಪ್ಟರ್‌ ಹವಾಮಾನ ವೈಪರೀತ್ಯ, ತಾಂತ್ರಿಕ ತೊಂದರೆಯಿಂದ ಪತನವಾ ಗಿತ್ತು. ದಟ್ಟ ಕಾನನದಲ್ಲಿ ದುರಂತ ಸಂಭವಿಸಿದ್ದರಿಂದ ಸತತ ಕಾರ್ಯಾಚರಣೆ ನಡೆಸಿ 27 ಗಂಟೆ ಬಳಿಕ ವೈಎಸ್‌ಆರ್‌ ಮೃತದೇಹ ಪತ್ತೆಯಾಗಿತ್ತು. ಜತೆಗಿದ್ದ ಮೂವರು ಕೂಡ ಅಸುನೀಗಿದ್ದರು.

ಜಿಎಂಸಿ ಬಾಲಯೋಗಿ
ಗಂಟಿ ಮೋಹನ ಚಂದ್ರ ಬಾಲಯೋಗಿ ಲೋಕಸಭೆ ಸ್ಪೀಕರ್‌ ಆಗಿದ್ದರು. 2002, ಮಾ.3ರಂದು ಆಂಧ್ರದ ಕೃಷ್ಣಾ ಜಿಲ್ಲೆಯ ಕೈಕಲೂರ್‌ ಬಳಿ ಬಳಿ ಸಂಭವಿಸಿದ ಬೆಲ್‌ 2006 ಹೆಲಿಕಾಪ್ಟರ್‌ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಮಾಧವರಾವ್‌ ಸಿಂಧಿಯಾ
ಗ್ವಾಲಿಯರ್‌ ಮಹಾರಾಜನ ಪುತ್ರ, ಸೋಲರಿಯದ ಸರದಾರ, ಸತತ 9 ಬಾರಿ ಲೋಕಸಭೆಗೆ ಆಯ್ಕೆಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದ ಮಾಧವರಾವ್‌ ಸಿಂಧಿಯಾ ಕಾಂಗ್ರೆಸ್‌ ಪಕ್ಷದ ಭಾವಿ ಪ್ರಧಾನಿ’ ಎಂದೇ ಪ್ರಸಿದ್ಧಿಯಾಗಿದ್ದರು. ಆದರೆ, 2002, ಸೆ.30ರಂದು ಪಕ್ಷದ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಖಾಸಗಿ ವಿಮಾನ (ಬೀಚ್‌ಕ್ರಾಫ್ಟ್ ಕಿಂಗ್‌ ಏರ್‌ ಸಿ90)ದಲ್ಲಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿ ಅಸುನೀಗಿದ್ದರು. ಜತೆಗಿದ್ದ ಮೂವರು ಪತ್ರಕರ್ತರು, ಆಪ್ತ ಕಾರ್ಯದರ್ಶಿ ಸೇರಿ ಎಂಟು ಜನ ಮೃತಪಟ್ಟಿದ್ದರು. ಮಾಧವರಾವ್‌ ಸಿಂಧಿಯಾ ಕೊರಳಲ್ಲಿ ಧರಿಸುತ್ತಿದ್ದ ದುರ್ಗಾ ಮಾತೆ ಲಾಕೆಟ್‌ನಿಂದ ಅವರ ಮೃತದೇಹ ಗುರುತಿಸಲಾಗಿತ್ತು!

ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

ಮೋಹನ ಕುಮಾರಮಂಗಲಂ
ಕಾಂಗ್ರೆಸ್‌ ಹಾಗೂ ಸಿಪಿಐ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಮೋಹನ ಕುಮಾರಮಂಗಲಂ 1973, ಮೇ 31ರಂದು ಸಂಭವಿಸಿದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ದುರಂತದಲ್ಲಿ ಅಸುನೀಗಿದ್ದರು. ಅವಘಡದ ಭೀಕರತೆಗೆ ಹಲವರ ಮೃತದೇಹ ಕೂಡ ಪತ್ತೆಯಾಗಿರಲಿಲ್ಲ. ಕುಮಾರಮಂಗಲಂ ಅವರು ಧರಿಸುತ್ತಿದ್ದ ಶ್ರವಣ ಯಂತ್ರ ಹಾಗೂ ಬಳಸುತ್ತಿದ್ದ ಪಾರ್ಕರ್‌ ಪೆನ್‌ನಿಂದ ಗುರುತಿಸಲಾಗಿತ್ತು.

ನಟಿ ಸೌಂದರ್ಯ
ಪಂಚಭಾಷಾ ತಾರಾ ನಟಿ ಕೆ.ಎಸ್‌.ಸೌಂದರ್ಯ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಬೆಂಗಳೂರು ಮೂಲದ ಮೋಹಕ ನಟಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಸಿನಿಮಾ ಜತೆಗೆ ರಾಜಕೀಯ ನಂಟು ಹೊಂದಿದ್ದರು. 2004, ಏ.17ರಂದು ಬೆಂಗಳೂರಿನಿಂದ ಆಂಧ್ರದ ಕರೀಂನಗರಕ್ಕೆ ಬಿಜೆಪಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ವಿಮಾನ ದುರಂತದಲ್ಲಿ ಅಸುನೀಗಿದ್ದರು. ಜತೆಗಿದ್ದ ಅವರ ಸೋದರ ಅಮರನಾಥ ಕೂಡ ಮೃತಪಟ್ಟಿದ್ದರು.

ಡೋರ್ಜಿ ಖಂಡು
ಭಾರತೀಯ ಸೇನೆಯ ಗುಪ್ತಚರ ವಿಭಾಗದಲ್ಲಿ ಸುಮಾರು ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಡೋರ್ಜಿ ಖಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2011, ಏ.30ರಂದು ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್‌ ಅವಘಡದಲ್ಲಿ ಅಸುನೀಗಿದ್ದರು. ದಟ್ಟ ಅರಣ್ಯದಲ್ಲಿ ದುರಂತ ಸಂಭವಿಸಿದ್ದರಿಂದ ಸತತ ಐದು ದಿನಗಳ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಪತ್ತೆಹಚ್ಚಲಾಗಿತ್ತು.

ಹೋಮಿ ಜಹಾಂಗೀರ್‌ ಬಾಬಾ
ಭಾರತಕ್ಕೆ ಪರಮಾಣು ಶಕ್ತಿ’ ತುಂಬಿದ ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್‌ ಬಾಬಾ ಸಾಧನೆಗಳ ಶಿಖರವನ್ನೇ ಏರಿದವರು. ಬ್ರಿಟನ್‌ನಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ಎರಡನೇ ವಿಶ್ವ ಸಮರ ವೇಳೆ ಭಾರತಕ್ಕೆ ಬಂದವರು ವಾಪಸ್‌ ತೆರಳಲಿಲ್ಲ. ಐಐಎಸ್‌ಸಿಯಲ್ಲಿ ಕೆಲಸ ಆರಂಭಿಸಿ ಇಲ್ಲಿಯೇ ವಿವಿಧ ಹಂತಗಳಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿದರು. 1966, ಜ|24ರಂದು ಪಶ್ಚಿಮ ಯುರೋಪ್‌ನ ಮೌಂಟ್‌ ಬ್ಲಾಂಕ್‌ ಬಳಿ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟರು. ಜಿನಿವಾ ಏರ್‌ಪೋರ್ಟ್‌ ಹಾಗೂ ಪೈಲಟ್‌ ನಡುವಿನ ಸಂಪರ್ಕ ಕೊರತೆಯಿಂದ ಈ ಅವ ಘಡ ಸಂಭವಿಸಿತು ಎನ್ನುವುದು ಘಟನೆ ಬಳಿಕ ಸಿಕ್ಕ ವಿವರಣೆ.

ಟಾಪ್ ನ್ಯೂಸ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.