ಬಿಪಿನ್ ರಾವತ್ಗೆ ಶ್ರದ್ಧಾಂಜಲಿ
Team Udayavani, Dec 12, 2021, 2:03 PM IST
ಯಾದಗಿರಿ: ದೇಶದ ಮೂರು ಸೇನಾ ಪಡೆಗಳ ಮುಖ್ಯಸ್ಥ ಜ. ರಾವತ್ ಮತ್ತು ಅವರ ಪತ್ನಿ ಸೇರಿದಂತೆ 11 ಜನ ಸೇನಾಧಿಕಾರಿಗಳು ಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದು, ಈ ಘಟನೆ ದೇಶಕ್ಕೆ ಬರಸಿಡಿಲು ಬಡಿದಂತಾಗಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ದುಃಖ ವ್ಯಕ್ತಪಡಿಸಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಪಿನ್ ರಾವತ್ ಅವರ ಶೌರ್ಯ, ಸಾಹಸ ಹಾಗೂ ದೇಶಪ್ರೇಮ, ಸೈನಿಕ ಆಡಳಿತಾತ್ಮಕ ಕ್ರಮಗಳಲ್ಲಿ ಅವರ ಚಾಣಾಕ್ಷತೆ ಉತ್ತಮವಾಗಿತ್ತು. ಇದರಿಂದ ದೇಶದ ಮಿಲಿಟರಿ ಶಕ್ತಿ ಬಲಾಡ್ಯವಾಗಿತ್ತು ಎಂದು ಸ್ಮರಿಸಿದರು.
ನಗರ ವೀರಶೈವ ಸಮಾಜದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್ ಮಾತನಾಡಿದರು. ತಾಲೂಕು ಪ್ರ. ಕಾರ್ಯದರ್ಶಿ ಬಸವರಾಜ ಮೋಟ್ನಳ್ಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೃತ ಎಲ್ಲ ಸೇನಾನಿಗಳ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಮಹೇಶ ಆನೆಗುಂದಿ, ಸಿದ್ದು ಪಾಟೀಲ್, ಮಹೇಶ ಕುಮಾರ ಹಿರೇಮಠ, ವಿಶಾಲ, ಮಲ್ಲಿಕಾರ್ಜುನ, ಬಂಡೆಪ್ಪ ಆಕಳ, ವಿಶ್ವನಾಥ ಕೋರಿ, ಬಸವರಾಜ ನಾಸಿ, ಡಾ| ಭೀಮರಾಯ ಲಿಂಗೇರಿ, ಶರಣು ಆಶನಾಳ, ನೂರೊಂದಪ್ಪ ಲೇವಡಿ, ಬಾಪುಗೌಡ ದಶರಥ ಸಾತನೂರ, ಬಸವರಾಜ ಸಾವೂರ, ಮಲ್ಲು ಹಳಕಟ್ಟಿ, ದೇವೇಂದ್ರರೆಡ್ಡಿ, ಶರಣು ಇಡ್ಮೂರು ಸೇರಿದಂತೆ ಮಹಾಸಭಾ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?