20 ವರ್ಷದಿಂದ ತೆಂಗಿನ ಕಾಯಿ ವ್ಯಾಪಾರದಲ್ಲಿ ಸೈ ಎನಿಸಿಕೊಂಡ ವಸಂತ ನಾಯ್ಕ
Team Udayavani, Dec 13, 2021, 2:06 PM IST
ದಾಂಡೇಲಿ: ಅವರು ದಾಂಡೇಲಿಯವರಲ್ಲ. ಆದರೂ ದಾಂಡೇಲಿಯ ಮೂಲೆ ಮೂಲೆಯ ಜನರಿಗೆ ಪರಿಚಿತರು. ನಗರದ ಬಹುತೇಕ ಮನೆಗೆ ಇವರಿಂದ ಖರೀದಿಸಿದ ತೆಂಗಿನ ಕಾಯಿಗಳೆ ಖಾದ್ಯಗಳಿಗೆ ಬಳಕೆಯಾಗುವುದು ಸಾಮಾನ್ಯ.
ಅಂದ ಹಾಗೆ ನಾನಿಂದು ಹೇಳಲು ಹೊರಟಿರುವುದು ದಾಂಡೇಲಿಯ ಸಂಡೆ ಮಾರ್ಕೆಟಿನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ತೆಂಗಿನ ಕಾಯಿ ರಾಶಿಯ ಜೊತೆಗೆ ಪ್ರತ್ಯಕ್ಷರಾಗುವ ವಸಂತ ನಾಯ್ಕ ಅವರ ಬಗ್ಗೆ. ತೆಂಗಿನ ಕಾಯಿಯಂದ್ರೆ ವಸಂತ ನಾಯ್ಕ, ವಸಂತ ನಾಯ್ಕ ಅಂದ್ರೆ ತೆಂಗಿನ ಕಾಯಿ ಎಂಬಷ್ಟರವರೆಗೆ ಬೆಳೆದಿರುವ ವಸಂತ ನಾಯ್ಕ ಅವರು ಕುಮುಟಾದ ನಿವಾಸಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ನಗರದ ಸಂಡೆ ಮಾರ್ಕೆಟಿನಲ್ಲಿ ವಾರದಲ್ಲಿ ಎರಡು ದಿನ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಾರೆ. ನಗರದ ಬಹುತೇಕ ಹೋಟೆಲ್, ಅಂಗಡಿಗಳ ಮಾಲಕರು ಇವರಿಂದಲೆ ತೆಂಗಿನ ಕಾಯಿ ಖರೀದಿಸಿಕೊಳ್ಳುತ್ತಾರೆ. ನಗರದ ಹೆಚ್ಚಿನ ನಾಗರೀಕರು ಇವರ ಬಳಿ ಬಂದು ವಾರಕ್ಕೆ ಬೇಕಾಗುವಷ್ಟು ತೆಂಗಿನ ಕಾಯಿಗಳನ್ನು ಖರೀದಿಸುತ್ತಾರೆ.
ಮೊದಲೆ ಕುಮುಟಾ ಕಾಯಿ ಅಂದರೆ ಫೇಮಸ್, ಅಂತೆಯೆ ವಸಂತ ಅವರ ಸರಳ ನಡೆ ನುಡಿ, ಗ್ರಾಹಕರೊಂದಿಗಿನ ಅತ್ಯುತ್ತಮ ಬಾಂದವ್ಯ ವಸಂತ ನಾಯ್ಕ ಅವರ ವ್ಯಾಪಾರದ ವರ್ಚಸ್ಸನ್ನು ಪ್ರಗತಿಯೆಡೆಗೆ ಕೊಂಡೊಯ್ದಿದೆ. ಲಾಭವಿದೆ ಹೌದು ಆದರೆ ಅಷ್ಟೆ ಕಷ್ಟದ ಕೆಲಸವೂ ಹೌದು. ಆದರೂ ನಿಷ್ಟೆ ಮತ್ತು ಇಷ್ಟದಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿರುವ ವಸಂತ ಅವರು ದಾಂಡೇಲಿ ಜನರಿಗೆ ಸಿಗುವುದು ವಾರದ ಸಂತೆಯಲ್ಲಿ ಮಾತ್ರ. ಗುಣಮಟ್ಟದ ತೆಂಗಿನ ಕಾಯಿಯ ವ್ಯಾಪಾರದ ಮೂಲಕ ಗಮನ ಸೆಳೆದ ಸಹೃದಯಿ ಶ್ರಮಜೀವಿಗೆ ನಿಮ್ಮೆಲ್ಲರ ಪ್ರೀತಿಯಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!
Mumbai: 45 ದಿನದಲ್ಲಿ 300 ಐಸ್ಕ್ರೀಂ ಆರ್ಡರ್ ಮಾಡಿದ!
Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ