ಹೊಸ TRK 251 ಸರಣಿಯ ಇಟಾಲಿಯನ್ ಬೈಕ್
Team Udayavani, Dec 17, 2021, 8:04 AM IST
ಇಟಾಲಿಯನ್ ಬೈಕ್ ತಯಾರಕಾ ಕಂಪನಿ ಬೆನೆಲ್ಲಿ (Benelli) ಹೊಸ TRK 251 ಸರಣಿಯ ಬೈಕ್ ಬಿಡುಗಡೆ ಮಾಡಿದೆ. ಇದು ಕಂಪನಿಯ ಜನಪ್ರಿಯ ಸಾಹಸ ಕ್ರೀಡೆಗೆ ಬಳಸಲು ವಿನ್ಯಾಸಗೊಂಡಂತಿದೆ.
ಇದು ಲಿಕ್ವಿಡ್-ಕೂಲ್ಡ್ ಸಿಂಗಲ್-ಸಿಲಿಂಡರ್ 249cc ಎಂಜಿನ್ನಿಂದ ಕೂಡಿದೆ, ಭಾರತದಲ್ಲಿ ಹಿಂದೆ ನೀಡಲಾಗಿದ್ದ (Leoncino 250) ಲಿಯೊನ್ಸಿನೊ 250 ಯನ್ನೇ ಹೋಲುವ ಬೈಕ್ ಇದಾಗಿದೆ. ಇದು 9,250 rpm ನಲ್ಲಿ 25.8 hp ಗರಿಷ್ಠ ಶಕ್ತಿಯನ್ನು ಮತ್ತು 8,000 rpm ನಲ್ಲಿ 21.1 Nm ಗರಿಷ್ಠ (ಟಾರ್ಕ್) ಪರಿವರ್ತಕವನ್ನು ಹೊಂದಿದೆ,
ಈ ಬೈಕ್ ಅದರ ನೇರ ಪ್ರತಿಸ್ಪರ್ಧಿ KTM 250 ಅಡ್ವೆಂಚರ್ಗಿಂತ ಸ್ವಲ್ಪ ಕಡಿಮೆಯಾಗಿದೆ, ಇದು 29.9hp ಮತ್ತು 24Nm(Newton metres) ಸಾಮರ್ಥ್ಯ ನೀಡುತ್ತದೆ. KTM 250 ಅಡ್ವೆಂಚರ್ ರೂ 2.30 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಬೆಲೆಯನ್ನು ಹೊಂದಿದೆ.
TRK251 ಉಕ್ಕಿನಿಂದ ಮಾಡಲ್ಪಟ್ಟ ವಿನ್ಯಾಸವನ್ನು ಇದು ಹೊಂದಿದೆ, ಇದನ್ನು ಅಡ್ವೆಂಚರ್ ಟೂರರ್ ಎಂದು ಮಾರಾಟ ಮಾಡಲಾಗಿದ್ದರೂ, ಅದರ ಗ್ರೌಂಡ್ ಕ್ಲಿಯರೆನ್ಸ್ ಕೇವಲ 170mm ಆಗಿದೆ, ಇದು Yamaha R15 V4 ನಂತೆಯೇ ಇರುತ್ತದೆ. ಆದಾಗ್ಯೂ, ಇದು ದೊಡ್ಡ 18 ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.
TRK ಯ 17-ಇಂಚಿನ ಮಿಶ್ರಲೋಹದ ಚಕ್ರಗಳು ಸ್ಪಷ್ಟವಾಗಿ ರಸ್ತೆ-ಆಧಾರಿತವಾಗಿವೆ ಮತ್ತು ಅತ್ಯಾಧುನಿಕ ಅಟೋಮೊಬೈಲ್ ತಂತ್ರಜ್ಞಾನವನ್ನು ಹೊಂದಿ ಆಕರ್ಷಕವಾಗಿದೆ. ಇದು ಆಲ್-ಡಿಜಿಟಲ್ ಇನ್ಸ್ಟ್ರುಮೆಂಟೇಶನ್, ಡ್ಯುಯಲ್-ಚಾನೆಲ್ ಹಾಗು ಎಬಿಎಸ್ ಮತ್ತು ಎಲ್ ಇಡಿ ಹೆಡ್ಲೈಟ್ ಅನ್ನು ಸಹ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Android ಮೊಬೈಲ್ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು
ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್, ಫೀಚರ್ಸ್
Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ
Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ