ಸಿಆರ್ಪಿಎಫ್ ಯೋಧರಿಗೆ ಸಿಗಲಿದೆ ಸಂಸ್ಕಾರದ ಪಾಠ!
ಸಿಬಂದಿ ನಡುವಿನ ಬಾಂಧವ್ಯ ವೃದ್ಧಿ ,ಆತ್ಮಹತ್ಯೆ ತಡೆಗೆ ಈ ಕ್ರಮ
Team Udayavani, Dec 25, 2021, 7:10 AM IST
ಹೊಸದಿಲ್ಲಿ: ಭಯೋತ್ಪಾದಕರು ಹಾಗೂ ನಕ್ಸಲರ ವಿರುದ್ಧ ಹೋರಾಡುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರು ಖಿನ್ನತೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವಂಥ ಘಟನೆ ಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಆರ್ಪಿಎಫ್, ಯೋಧರನ್ನು “ಸಂಸ್ಕಾರಿ’ಗಳನ್ನಾಗಿಸಿ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಪೂರಕವಾಗಿ “ಸಂಸ್ಕಾರ ಶಾಲೆ’ಗಳನ್ನು ಆರಂಭಿಸಲು ನಿರ್ಧರಿಸಿದೆ.
ಸಿಆರ್ಪಿಎಫ್ ಯೋಧರೊಬ್ಬರು ನೀಡಿರುವ ಸಲಹೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೀನಿಯರ್ ಮತ್ತು ಜೂನಿಯರ್ ಸಿಬಂದಿ ನಡುವೆ ಆಗಾಗ ಮನಸ್ತಾಪಗಳಾಗುತ್ತವೆ. ಪರಸ್ಪರ ಗೌರವದ ಕೊರತೆ, ವಾಗ್ವಾದಗಳು, ಜಗಳ, ಕೊಲೆ, ಆತ್ಮಹತ್ಯೆ ಪ್ರಕರಣಗಳು ಪಡೆಯ ವರ್ಚಸ್ಸಿಗೂ ಧಕ್ಕೆ ತರುತ್ತಿವೆ. ಹೀಗಾಗಿ ಸಿಬಂದಿ ನಡುವೆ ಗೌರವ ಬೆಳೆಸುವಂಥ ಕಾರ್ಯಕ್ರಮ ಕೈಗೊಂಡರೆ ಉತ್ತಮ ಎಂಬ ಸಲಹೆ ನೀಡಲಾಗಿತ್ತು.
ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಸಿಆರ್ಪಿಎಫ್ ಕ್ಷೇಮಾಭಿವೃದ್ಧಿ ವಿಭಾಗವು ಅರೆ ಸೇನಾ ಪಡೆಯ ಎಲ್ಲ ಘಟಕಗಳಿಗೂ “ಸಂಸ್ಕಾರ ಶಾಲೆ’ ಆರಂಭಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ. ಆದರೆ ಈ ಶಾಲೆಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು
ಸುತ್ತೋಲೆಯಲ್ಲಿ ಏನಿದೆ?
ಯೋಗಾಭ್ಯಾಸವು ಹೇಗೆ ನಮ್ಮ ಶರೀರವನ್ನು ಫಿಟ್ ಆಗಿಸುತ್ತದೋ, ಅದೇ ಮಾದರಿಯಲ್ಲಿ ಸಂಸ್ಕಾರವು ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ. ಹೀಗಾಗಿ ಎಲ್ಲ ಘಟಕಗಳು, ವಲಯಗಳು ಹಾಗೂ ಬೆಟಾ
ಲಿಯನ್ಗಳು “ಸಂಸ್ಕಾರ ಶಾಲೆ’ಯನ್ನು ಆರಂಭಿಸ ಬೇಕು. ಇಲ್ಲಿ ಹಿರಿಯರು ಮತ್ತು ಕಿರಿಯರು ಉತ್ತಮ ನೈತಿಕ ಮೌಲ್ಯಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಆಗಾಗ್ಗೆ ಅನೌಪಚಾರಿಕ ಗೆಟ್ ಟುಗೆದರ್ ನಡೆಸಬೇಕು. ಒಳ್ಳೆಯ ವಿಚಾರಗಳನ್ನು ವಿನಿಮಯ ಮಾಡಿ ಸಿಬಂದಿಯ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ
Goa; ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ವಿದೇಶಿ ಯುವತಿ ಬಂಧನ
ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು
Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!
MUST WATCH
ಹೊಸ ಸೇರ್ಪಡೆ
Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ
India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್ ಸ್ವೀಪ್; ಡಿಕೆಶಿ
Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ
Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು
Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ