ಬೆಳ್ಳಿಗದೆ ಉಡುಗೊರೆ: ಹನುಮದೇವರಿಗೆ ಅರ್ಪಿಸಿದ ಸಿಎಂ
Team Udayavani, Dec 25, 2021, 8:48 PM IST
ಸಾಂದರ್ಭಿಕ ಚಿತ್ರ
ವಿಜಯಪುರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ವಿಜಯಪುರ ಕಾರ್ಯಕ್ರಮದ ಸನ್ಮಾನದಲ್ಲಿ ನೀಡಿದ ಬೆಳ್ಳಿ ಗದೆಯನ್ನು ನಗರದ ಹನುಮದೇವರಿಗೆ ಸಮರ್ಪಿಸುವಂತೆ ಮರಳಿಸಿದ ಘಟನೆ ಶನಿವಾರ ಜರುಗಿತು.
ವಿಜಯಪುರ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಬೆಳ್ಳಿಯ ಗದೆಯನ್ನು ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಭಾಷಣ ಮುಗಿಸು ಕೊನೆಯಲ್ಲಿ ತಮಗೆ ಸನ್ಮಾನ ಮಾಡಿದ ವಿಜುಗೌಡ ಅವರನ್ನು ಕರೆದು, ಅವರಿಗೇ ಬೆಳ್ಳಿ ಗದೆಯನ್ನು ಮರಳಿಸಿ, ಗದೆಯನ್ನು ನಗರದ ಹನುಮದೇವರಿಗೆ ಸಮರ್ಪಿಸಿ ಎಂದು ಮನವಿ ಮಾಡಿದರು.
ನಾನು ಯಾವುದೇ ಸಮಾರಂಭದಲ್ಲಿ ಬೆಳ್ಳಿಯ ಗದೆಯನ್ನು ಸ್ವೀಕರಿಸಿದರೂ ಅದನ್ನು ಅಲ್ಲಿನ ಹನುಮ ದೇವರಿಗೆ ಸಮರ್ಪಿಸಲು ಸ್ಥಳೀಯರಿಗೆ ಹಸ್ತಾಂತರಿಸುತ್ತೇನೆ. ಬೆಳ್ಳಿಯ ಕತ್ತಿ, ಖಡ್ಗ ನೀಡಿದರೆ ಗ್ರಾಮ ದೇವತೆ ಗುಡಿಗೆ ಸಮರ್ಪಿಸಲು ಮರಳಿಸುತ್ತೇನೆ ಎಂದು ತಾವು ಗದೆಯನ್ನು ಸ್ವೀಕರಿಸಿ, ಮರಳಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಶಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SSLC; ಆಳ್ವಾಸ್ ಮೂಡುಬಿದಿರೆಗೆ ಶೇ. 100 ಫಲಿತಾಂಶ : 51ಮಂದಿಗೆ 600ಕ್ಕೂ ಅಧಿಕ ಅಂಕ
‘Manipal ಜ್ಞಾನಸುಧಾ’ ಪದವಿಪೂರ್ವ ಕಾಲೇಜು: ಅರ್ಹರಿಗೆ ಉಚಿತ ಪ್ರವೇಶ
IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ
Vijayapura: ಪೋಕ್ಸೋ ಆರೋಪಿಗೆ 5 ವರ್ಷ, ಗಾಂಜಾ ಬೆಳದವನಿಗೆ 3 ವರ್ಷ ಜೈಲು ಶಿಕ್ಷೆ
Bidar; ರಾಜಿ ಸಂಧಾನದಲ್ಲಿ ಒಂದಾದ ಮೂರು ದಂಪತಿಗಳು