ಮುಂದಕ್ಕೆ ಧಾವಿಸುವುದು ಖಂಡಿತ: ತೋಮರ್
Team Udayavani, Dec 25, 2021, 9:00 PM IST
ನಾಗ್ಪುರ: “ಸದ್ಯ ನಾವು ಒಂದು ಹೆಜ್ಜೆ ಹಿಂದೆ ಇರಿಸಿದ್ದೇವೆ. ಆದರೆ, ನಾವು ಮುಂದಕ್ಕೆ ಹೋಗುವುದು ಖಂಡಿತ’ ಹೀಗೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಶುಕ್ರವಾರ ನಾಗ್ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರ ಕಾರಣದಿಂದಾಗಿ ರೈತರಿಗೆ ಅನುಕೂಲವಾಗಬೇಕಾಗಿದ್ದ ಮೂರು ಕಾಯ್ದೆಗಳನ್ನು ಸಂಸತ್ನಲ್ಲಿ ರದ್ದು ಮಾಡುವ ನಿರ್ಧಾರ ಕೈಗೊಳ್ಳಬೇಕಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಪ್ರಧಾನಿ ಮೋದಿಯವರ ಆಡಳಿತದ ಅವಧಿಯಲ್ಲಿ ಕೃಷಿ ಕ್ಷೇತ್ರದ ಸುಧಾರಣೆಗೆ ದೊಡ್ಡ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತೋಮರ್ ಹೇಳಿದ್ದಾರೆ.