ಬೆಳ್ಳಿಗದೆ ಉಡುಗೊರೆ: ಹನುಮದೇವರಿಗೆ ಅರ್ಪಿಸಿದ ಸಿಎಂ
Team Udayavani, Dec 25, 2021, 8:48 PM IST
ಸಾಂದರ್ಭಿಕ ಚಿತ್ರ
ವಿಜಯಪುರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೆ ವಿಜಯಪುರ ಕಾರ್ಯಕ್ರಮದ ಸನ್ಮಾನದಲ್ಲಿ ನೀಡಿದ ಬೆಳ್ಳಿ ಗದೆಯನ್ನು ನಗರದ ಹನುಮದೇವರಿಗೆ ಸಮರ್ಪಿಸುವಂತೆ ಮರಳಿಸಿದ ಘಟನೆ ಶನಿವಾರ ಜರುಗಿತು.
ವಿಜಯಪುರ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಬೆಳ್ಳಿಯ ಗದೆಯನ್ನು ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಭಾಷಣ ಮುಗಿಸು ಕೊನೆಯಲ್ಲಿ ತಮಗೆ ಸನ್ಮಾನ ಮಾಡಿದ ವಿಜುಗೌಡ ಅವರನ್ನು ಕರೆದು, ಅವರಿಗೇ ಬೆಳ್ಳಿ ಗದೆಯನ್ನು ಮರಳಿಸಿ, ಗದೆಯನ್ನು ನಗರದ ಹನುಮದೇವರಿಗೆ ಸಮರ್ಪಿಸಿ ಎಂದು ಮನವಿ ಮಾಡಿದರು.
ನಾನು ಯಾವುದೇ ಸಮಾರಂಭದಲ್ಲಿ ಬೆಳ್ಳಿಯ ಗದೆಯನ್ನು ಸ್ವೀಕರಿಸಿದರೂ ಅದನ್ನು ಅಲ್ಲಿನ ಹನುಮ ದೇವರಿಗೆ ಸಮರ್ಪಿಸಲು ಸ್ಥಳೀಯರಿಗೆ ಹಸ್ತಾಂತರಿಸುತ್ತೇನೆ. ಬೆಳ್ಳಿಯ ಕತ್ತಿ, ಖಡ್ಗ ನೀಡಿದರೆ ಗ್ರಾಮ ದೇವತೆ ಗುಡಿಗೆ ಸಮರ್ಪಿಸಲು ಮರಳಿಸುತ್ತೇನೆ ಎಂದು ತಾವು ಗದೆಯನ್ನು ಸ್ವೀಕರಿಸಿ, ಮರಳಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಶಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್