ತ.ನಾಡು- ಕರ್ನಾಟಕ ಗಡಿಭಾಗದಲ್ಲಿ ಬೀಡು ಬಿಟ್ಟ ಕಾಡಾನೆಗಳು : ಕಾಡಿಗಟ್ಟಲು ಅಧಿಕಾರಿಗಳ ಹರಸಾಹಸ
Team Udayavani, Jan 5, 2022, 12:03 PM IST
ಆನೇಕಲ್: ತಮಿಳುನಾಡು- ಕರ್ನಾಟಕ ಗಡಿಭಾಗದ ಹಳ್ಳಿಯೊಂದರ ಹೊರವಲಯದ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟ ಕಾಡಾನೆಗಳ ಹಿಂಡು ಇಡೀ ದಿನ ಸ್ಥಳೀಯರ ಆಕರ್ಷಣೆ ಮತ್ತು
ಕುತೂಹಲದ ಕೇಂದ್ರವಾಗಿತ್ತು. ಕಾಡಿನ ಹಾದಿ ತಪ್ಪಿ ಬಂದಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟಲು ಎರಡು ರಾಜ್ಯಗಳ ಅರಣ್ಯ ಇಲಾಖೆ ಹಾಗೂ ಪೊಲೀಸರು ಹರಸಾಹಸ ಪಟ್ಟು
ಅಂತಿಮವಾಗಿ ಸಂಜೆ ವೇಳೆಗೆ ಕಾಡಿಗೆ ಸೇರಿಸಲಾಯಿತು.
ಸಹಜವಾಗಿ ವರ್ಷದ ಕೊನೆ ಮತ್ತು ಆರಂಭದ ದಿನಗಳಲ್ಲಿ ಮೇವು ಹರಸಿ ರಾತ್ರಿ ವೇಳೆ ಕಾಡಿನಿಂದ ಹಳ್ಳಿಗಳಿಗೆ ಕಾಡಾನೆಗಳು ಬರುವುದು ಸಾಮಾನ್ಯ. ಅಂತೆಯೇ ಸೋಮವಾರ ರಾತ್ರಿ ತಮಿಳುನಾಡಿನ ಗುಮ್ಮಳಾಪುರ ಕೆರೆ ಮೂಲಕ ರಾಜ್ಯದ ಗಡಿ ಭಾಗದ ಸೋಲೂರು ಬಳಿ ರಸ್ತೆ ದಾಟಿ ಮೆಣಸಿಗನಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಮಾರು 25 ರಿಂದ 30 ಆನೆಗಳ ಹಿಂಡು
ಬೀಡು ಬಿಟ್ಟಿದ್ದವು.
ಮುಂಜಾನೆ 7 ಗಂಟೆ ಸುಮಾರಿನಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಆನೆಗಳನ್ನು ನೋಡಲು ನೀಲಗಿರಿ ತೋಪಿನ ಸುತ್ತಲೂ ಜನ ಸುತ್ತುವರೆದರು. ಇದರಿಂದ ಆನೆಗಳು ದಿಕ್ಕಾಪಾಲಾಗಿ ಓಡಾಡಿ
ನೀಲಗಿರಿ ತೋಪು ಬಹುತೇಕ ಹಾನಿಗೊಳಗಾಯಿತು. ಮಧ್ಯಾಹ್ನ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಹಾಕಿ ಸಿಡಿಸಿ ಆನೆಗಳನ್ನು ಕಾಡಿನ ದಾರಿಗೆ ಓಡಿಸಲು ಮುಂದಾದರು. ಆಗ ಜನರ
ಕಿರಿಕಿರಿ ಇಲ್ಲದ ದಾರಿ ಹುಡುಕಿಕೊಂಡು ಕಾಡಿನ ಹಾದಿ ಹಿಡಿದವು. ಈ ಸಮಯದಲ್ಲೂ ಜನ ಆನೆಗಳನ್ನು ಹಿಂಬಾಲಿಸಿ ಕಿರುಚುತ್ತ ಮತ್ತಷ್ಟು ಕಿರಿಕಿರಿ ಮಾಡಿದ್ದರಿಂದ ಕೆಲಸ ಬಾರಿ ಹೆಣ್ಣಾನೆ ಸಾರ್ವಜನಿಕರ ಮೇಲೆ ದಾಳಿ ಮಾಡಿತ್ತಾದರೂ ಜನ ಚೆಲ್ಲಾಪಿಲ್ಲಿಯಾಗಿ ಓಡಿ ಆನೆ ದಾಳಿಯಿಂದ ಪಾರಾದರು.
ಅಂತಿಮವಾಗಿ ಸೋಲೂರು ಬಳಿ ರಸ್ತೆ ದಾಟಿ ತಮಿಳುನಾಡಿನ ತಮ್ಮಾಪುರ ಗ್ರಾಮದ ಮೂಲಕ ಕರ್ನಾಟಕ ಅರಣ್ಯ ಪ್ರದೇಶ ಸೇರಿಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ