ಬಂಡವಾಳಿಗರ ಪರವಾಗಿದೆ ಸರ್ಕಾರ: ಪಾಟ್ಕರ್
Team Udayavani, Jan 14, 2022, 2:20 PM IST
ವಿಜಯಪುರ: ಭಾರತದಲ್ಲಿ ನಮ್ಮ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ. ದೇಶದಲ್ಲಿನ ಸಾರ್ವಜನಿಕ ಉದ್ಯಮ ಗಳನ್ನು ಖಾಸಗೀಕರಣ ಮಾಡಿ, ಮಾರಾಟ ಮಾಡಿ ಇಡೀ ದೇಶದ ಸೇವಾ ವ್ಯವಸ್ಥೆಯನ್ನು ಬಂಡವಾಳಿಗರ ಕೈಗೆ ಒಪ್ಪಿಸಲಾಗಿದೆ ಎಂದಿ ಪರಿಸರವಾದಿ, ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ದೂರಿದರು.
ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕೊಳಚೆ ಪ್ರದೇಶದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸರ್ಕಾರಗಳಿಗೆ ಜನ ಸಾಮಾನ್ಯರಿಗೆ ಮೂಲ ಭೂತಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಭೂಮಿ ಬೆಲೆ ಹೆಚ್ಚಾದಂತೆ ಮುಂದೆ ನಗರದ ಸ್ಲಂಗಳಿಗೂ ಸಮಸ್ಯೆ ಉಂಟಾಗುತ್ತದೆ. ವಿಜಯಪುರ ನಗರದ ರಂಗೀನ್ ಮಸೀದಿ, ಕೊಳಚೆ ಪ್ರದೇಶ, ಮಹ್ಮದ ನಗರ, ನಗರ ಸ್ಲಂಗಳ ಸ್ಥಿತಿಗತಿ ಸಂಪೂರ್ಣ ದುಸ್ಥಿತಿಯಲ್ಲಿದೆ ಎಂದು ವಿಷಾದಿಸಿದರು.
ಮತ್ತೊಂದೆಡೆ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲರ್ಭಯ ಕಲ್ಪಿಸುವ ಬದಲು ಕೊಳಚೆ ಪ್ರದೇಶದ ಜನರನ್ನೇ ಎತ್ತಂಗಡಿ ಮಾಡುವ ಹುನ್ನಾರ ನಡೆಸಿವೆ. ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ನೇತೃತ್ವದಲ್ಲಿ ಸ್ಥಳೀಯರು ಒಗ್ಗೂಡಿ ಧೈರ್ಯದಿಂದ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಬೇಕು ಎಂದು ಕಿವಿಮಾತು ಹೇಳಿದರು.
ಫಾ| ಅಂತೋನಿದಾಸ್, ಫಾ.ಟೀಯೊಲ, ಅಕ್ರಂ ಮಾಶ್ಯಾಳಕರ, ನಿರ್ಮಲಾ ಹೊಸಮನಿ, ಎಂ.ಸಿ. ಕಮ್ಮಾರ, ಶೋಭಾ ಗಾಯಕವಾಡ, ಭೀಮಸಿ ಕಲಾದಗಿ, ಮಿನಾಕ್ಷಿ ಕಾಲೇಬಾಗ, ಹಮಿದಾ ಪಟೇಲ್, ಸಿದ್ದಲಿಂಗ ಬಾಗೇವಾಡಿ, ಭಗವಾನರೆಡ್ಡಿ, ಫಯಾಜ್ ಕಲಾದಗಿ, ಎಂ.ಸಿ. ಮುಲ್ಲಾ, ಮಹಾದೇವ ರಾವಜಿ, ಭರತಕುಮಾರ, ದಾನಪ್ಪ ಸೋರಗೊಂಡ, ಲಾಳೆಮಶಾಕ ಕುಂಟೋಜಿ, ರಿಜ್ವಾನ್ ಮುಲ್ಲಾ, ಸದಾನಂದ ಮೋದಿ, ಗಿತಾ ಕಟ್ಟಿ, ಜಯಶ್ರೀ ಚಲವಾದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ
Vijayapura: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು
Vijayapura NTPC ಚಿಮಣಿ ಮೇಲಿಂದ ಬಿದ್ದು UP ಮೂಲದ ಕಾರ್ಮಿಕ ಸಾವು
Vijayapura: ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ
MUST WATCH
ಹೊಸ ಸೇರ್ಪಡೆ
Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ
Ramanagara: ಈಜಲು ಹೋಗಿದ್ದ ಮೂವರು ಮಕ್ಕಳು ನೀರುಪಾಲು
Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ
Tollywood: ಪ್ರಶಾಂತ್ ನೀಲ್ – Jr. NTR ಸಿನಿಮಾಕ್ಕೆ ಈ ಟೈಟಲ್ ಫಿಕ್ಸ್?
Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ