ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು


Team Udayavani, Jan 16, 2022, 2:30 AM IST

ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು

ಉಡುಪಿ: ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಜ. 10ರ ಬಳಿಕ ಕಾರ್ಯಬಾಹುಳ್ಯದಿಂದ ಕೂಡಿದ್ದಾರೆ. ಪರ್ಯಾಯ ಪೀಠವೇರುವ ಸ್ವಾಮೀಜಿಯವರನ್ನು ವಿವಿಧೆಡೆ ಆಹ್ವಾನಿಸಿ ಸತ್ಕರಿಸುವ ಸಂಪ್ರದಾಯ ವಿದೆ. ಹೀಗೆ ಸ್ವಾಮೀಜಿಯವರನ್ನು ವಿವಿಧ ದೇವಸ್ಥಾನಗಳವರು, ವಿದ್ಯಾಲಯಗಳವರು ಕರೆಯುತ್ತಿದ್ದಾರೆ. ಸ್ವಾಮೀಜಿಯವರನ್ನು ಆಹ್ವಾನಿಸಿದಾಗ ಕಾಣಿಕೆ ಸಮರ್ಪಿಸುವುದು ವಾಡಿಕೆ. ಆದರೆ ಕೃಷ್ಣಾಪುರ ಶ್ರೀಗಳು ದೇವಸ್ಥಾನಗಳು, ವಿದ್ಯಾ ಸಂಸ್ಥೆಗಳಿಗೆ ಹೋದಾಗ ಕೊಡುವ ಕಾಣಿಕೆಗಳನ್ನು ಅಲ್ಲಿಯೇ ವಿನಿಯೋಗಿಸಲು ಕೊಟ್ಟು ಬರುತ್ತಿದ್ದಾರೆ. ಸಂಸ್ಥೆಗಳ ಮುಖ್ಯಸ್ಥರು ಇದನ್ನು ಘೋಷಿಸುವಾಗ ಏನೂ ಆಗಿಯೇ ಇಲ್ಲವೆಂಬಂತೆ ಸ್ವಾಮೀಜಿಯವರು ಇನ್ನೊಂದು ಕಡೆಗೆ ತೆರಳುವ ತರಾತುರಿಯಲ್ಲಿ ಹೊರಟಿರುತ್ತಾರೆ.

“ನಾನು ಮಠಕ್ಕೆ ಸೇರಿ ಎರಡು ಮೂರು ವರ್ಷಗಳಾಗಿವೆ. ಎರಡು ಮೂರು ವರ್ಷಗಳಿಂದಲೂ ದೇವಸ್ಥಾನಗಳು, ಶಾಲೆಗಳಿಗೆ ಹೋದರೆ ಅಲ್ಲಿ ಕೊಡುವ ಕಾಣಿಕೆಯನ್ನು ಅಲ್ಲಿಯೇ ವಿನಿಯೋಗಿಸಲು ಬಿಟ್ಟು ಬರುತ್ತಿದ್ದಾರೆ’ ಎಂದು ಸ್ವಾಮೀಜಿಯವರ ಆಪ್ತ ಸಿಬಂದಿ ಮಂಜುನಾಥ್‌ ಹೇಳುತ್ತಾರೆ.

ಇದನ್ನೂ ಓದಿ:ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ

ಆನೆ ಲಾಯದ ಗುರುತು
ಹಿಂದೆ ಎಲ್ಲ ಮಠಗಳಲ್ಲಿಯೂ ಆನೆಗಳನ್ನು ಸಾಕುತ್ತಿದ್ದರು. ಕೆಲವು ಮಠಗಳಲ್ಲಿ ಎರಡೆರಡು ಆನೆಗಳು ಇದ್ದವು. ಆಗಿನ ವಾತಾವರಣವೇ ಬೇರೆ, ಈಗಿನ ವಾತಾವರಣವೇ ಬೇರೆ. ಆಗ ರಥಬೀದಿ ಸುತ್ತ ಗದ್ದೆಗಳು ಇದ್ದರೆ, ಈಗ ಕಾಂಕ್ರೀಟ್‌ ಕಟ್ಟಡಗಳು ಇವೆ. ಈಗ ಆನೆಗಳನ್ನು ಸಾಕಿದರೆ ಅವುಗಳ ಆರೋಗ್ಯ ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಕಷ್ಟಸಾಧ್ಯ. ಅವುಗಳಿಗೆ ಬೇಕಾದ ಹಸುರು ಆಹಾರದ ಪೂರೈಕೆಯೂ ಸಾಧ್ಯವಿಲ್ಲ. ಕೃಷ್ಣಾಪುರ ಮಠದಲ್ಲಿ ಆನೆ ಕಟ್ಟುತ್ತಿದ್ದ ಆನೆ ಲಾಯ ಮಾತ್ರ ಹಾಗೆಯೇ ಇದೆ. ಇದನ್ನು ಆನೆ ಲಾಯದ ಪಳೆಯುಳಿಕೆ ಎನ್ನಬಹುದು.

ಎರಡು ಪಟ್ಟದ ದೇವರು
ಆಚಾರ್ಯ ಮಧ್ವರು ತಮ್ಮ ಶಿಷ್ಯರಿಗೆ ಉಪಾಸನೆಗೋಸ್ಕರ ಒಂದೊಂದು ದೇವತಾ ವಿಗ್ರಹವನ್ನು ನೀಡಿದ್ದರು. ಅದರಂತೆ ಮುಂದೆ ಕೃಷ್ಣಾಪುರ ಮಠದ ಆದ್ಯಯತಿ ಶ್ರೀಜನಾರ್ದನತೀರ್ಥರಿಗೆ ಮಧ್ವರು ಕೊಟ್ಟದ್ದು ದ್ವಿಭುಜ ಕಾಲಿಂಗ ಮರ್ದನ ಕೃಷ್ಣ. ಇದರ ಜತೆ ಜನಾರ್ದನ ತೀರ್ಥರು ಇಷ್ಟಪಟ್ಟು ಉಪಾಸನೆಗೋಸ್ಕರ ನರಸಿಂಹ ದೇವರ ವಿಗ್ರಹವನ್ನೂ ಬಯಸಿ ಪಡೆದಿದ್ದಾರೆ. ಹೀಗೆ ಎರಡು ಪಟ್ಟದ ದೇವರನ್ನು ಕೃಷ್ಣಾಪುರ ಮಠ ಹೊಂದಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.