ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ಜಾರಿ

Team Udayavani, Jan 17, 2022, 7:00 AM IST

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ಈ ಬಾರಿ ಪದವಿ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿ ಮೊದಲ ಸೆಮಿಸ್ಟರ್‌ ಪರೀಕ್ಷೆ ಯನ್ನು ಯುಯುಸಿಎಂಎಸ್‌ (ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ) ಮೂಲಕ ನಡೆಸಲು ಮಂಗಳೂರು ವಿ.ವಿ. ಸಿದ್ಧತೆ ಆರಂಭಿಸಿದೆ.

ಎನ್‌ಇಪಿಯಡಿ ಎಲ್ಲ ಪದವಿ ಕಾಲೇಜು ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಏಕರೂಪ ಕಾಯ್ದುಕೊಳ್ಳಲು ಯುಯುಸಿ ಎಂಎಸ್‌ ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ಪರೀಕ್ಷಾ ವಿಧಾನವೂ ರಾಜ್ಯಾದ್ಯಂತ ಏಕರೂಪವಾಗಲಿದೆ. ಯು ಯುಸಿಎಂಎಸ್‌ ಪರಿಣತಿಗಾಗಿ ಎರಡು ತಾಂತ್ರಿಕ ತಂಡಗಳನ್ನು ಮಂಗಳೂರು ವಿ.ವಿ. ಬೆಂಗಳೂರಿಗೆ ಕಳುಹಿಸಿದೆ.

ನೂತನ ಪರೀಕ್ಷಾ ಮಾದರಿಯನ್ನು ಉನ್ನತ ಶಿಕ್ಷಣ ಇಲಾಖೆಯು ಎಲ್ಲ ವಿ.ವಿ.ಗಳಿಗೆ ಈಗಾಗಲೇ ನೀಡಿದ್ದು, ಇದರ ಆಧಾರದಲ್ಲಿ ಕಾಲೇಜು ಮಟ್ಟದಲ್ಲಿ ಉಪನ್ಯಾಸಕರಿಗೆ ಪ್ರತ್ಯೇಕ ತರಬೇತಿ ಆಯೋಜಿಸಲು ವಿ.ವಿ. ನಿರ್ಧರಿಸಿದೆ.

ಉನ್ನತ ಶಿಕ್ಷಣ ಇಲಾಖೆ ಮೇಲುಸ್ತುವಾರಿ ಮಂಗಳೂರು ವಿ.ವಿ.ಯಲ್ಲಿ ಇದುವರೆಗೆ ಪದವಿ ಪರೀಕ್ಷೆಗೆ “ಎಂಯು ಲಿಂಕ್ಸ್‌’ ಎಂಬ ಸಾಫ್ಟ್ವೇರ್‌ ಇತ್ತು. ಇದನ್ನು ವಿ.ವಿ.ಯೇ ನಿರ್ವಹಣೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಮಾಹಿತಿ ವಿ.ವಿ.ಯಲ್ಲಿಯೇ ಇದೆ. ಆದರೆ “ಯುಯುಸಿಎಂಎಸ್‌’ ನಿಯಂತ್ರಣ ರಾಜ್ಯ ಉನ್ನತ ಶಿಕ್ಷಣ ಇಲಾಖೆಯದ್ದು. ಹೀಗಾಗಿ ರಾಜ್ಯದ ಎಲ್ಲ ವಿ.ವಿ.ಗಳಿಗೆ ಒಳಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳ ಮಾಹಿತಿ, ಅಂಕಪಟ್ಟಿ ಇತ್ಯಾದಿ ಎಲ್ಲವೂ ಮುಂದೆ ಇಲಾಖೆಯಲ್ಲಿಯೇ ಭದ್ರವಾಗಿರಲಿದೆ.

ಇದನ್ನೂ ಓದಿ:11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

ಎನ್‌ಇಪಿ ವಿದ್ಯಾರ್ಥಿಗಳಿಗೆ ಮಾತ್ರ!
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿಗೆ ಸೇರ್ಪಡೆಯಾದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಯುಯುಸಿಎಂಎಸ್‌ ಸಾಫ್ಟ್ ವೇರ್‌ ಅಡಿ ಪರೀಕ್ಷೆ ನಡೆಯಲಿದೆ. ಉಳಿದ ವಿದ್ಯಾರ್ಥಿಗಳ ಪದವಿ ಪೂರ್ಣವಾಗುವವರೆಗೆ “ಎಂಯು ಲಿಂಕ್ಸ್‌’ ಮೂಲಕ ಪರೀಕ್ಷೆ ನಡೆಯಲಿದೆ.

ಏನಿದು “ಯುಯುಸಿಎಂಎಸ್‌’?
ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆಯು ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರಕಾರದ ಪ್ರಮುಖ ಕಾರ್ಯ ಕ್ರಮಗಳಲ್ಲಿ ಒಂದು. ದೇಶದಲ್ಲಿ ಕರ್ನಾ ಟಕ ಈ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತರುತ್ತಿದೆ. ಯುಯುಸಿಎಂಎಸ್‌ ರಾಜ್ಯದ ಎಲ್ಲ ವಿ.ವಿ. ಮತ್ತು ಕಾಲೇಜು ಗಳನ್ನು ಕ್ರೋಡೀಕರಿಸಿ ಮತ್ತು ಏಕೀಕರಿಸಿ ಎಲ್ಲರಿಗೂ ಒಂದೇ ವ್ಯವಸ್ಥೆಯಡಿ ವಿವಿಧ ಮಾಹಿತಿ ಒದಗಿಸು ತ್ತದೆ. ಈ ವ್ಯವಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳ ಸಮಗ್ರ ಚಟುವಟಿಕೆಗಳನ್ನು ಗಣಕೀಕರಣ ಗೊಳಿಸುತ್ತದೆ.

ಅಂಕಪಟ್ಟಿ ಡಿಜಿ ಲಾಕರ್‌ನಲ್ಲಿ  
ಯುಯುಸಿಎಂಎಸ್‌ ಅನುಷ್ಠಾನವಾದ ಬಳಿಕ ಹಂತಹಂತವಾಗಿ “ಡಿಜಿ ಲಾಕರ್‌’ ಜಾರಿಗೆ ಬರಲಿದೆ. ಅಂದರೆ ಮುಂದೆ ಅಂಕಪಟ್ಟಿಯನ್ನು ವಿ.ವಿ.ಯು ಮುದ್ರಿಸಿ ನೀಡ ಬೇಕಿಲ್ಲ. ವಿದ್ಯಾರ್ಥಿಗಳಿಂದ ಕಳೆದು ಹೋಗುವ ಪ್ರಮೇಯವೂ ಇಲ್ಲ. ಅದು ಡಿಜಿ ಲಾಕರ್‌ನಲ್ಲಿ ಭದ್ರ ವಾಗಿದ್ದು, ನೋಂದಣಿ ಸಂಖ್ಯೆ ನಮೂ ದಿಸಿ ಡೌನ್‌ಲೋಡ್‌ ಮಾಡಿ ಕೊಳ್ಳಬಹುದು.

ಸಮಗ್ರ ವಿ.ವಿ. ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ಅನುಷ್ಠಾನಕ್ಕೆ ಗಮನ ಹರಿಸಿದ್ದೇವೆ. ವಿ.ವಿ.ಗಳು ಹೊಸ ತಂತ್ರಾಂಶ ಖರೀದಿ /ನವೀಕರಣ ಕೈಗೆತ್ತಿಕೊಳ್ಳಬಾರದು ಎಂಬ ಸೂಚನೆ, ಸಿಂಡಿಕೇಟ್‌ ನಿರ್ಣಯದಂತೆ ಮಾರ್ಚ್‌ನಲ್ಲಿ ಎನ್‌ಇಪಿ ಮೊದಲ ಸೆಮಿಸ್ಟರ್‌ ಪರೀಕ್ಷೆಯನ್ನು ಯುಯುಸಿ ಎಂಎಸ್‌ ಮೂಲಕ ನಡೆಸಲಾಗುವುದು.
-ಪ್ರೊ| ಪಿ.ಎಲ್‌. ಧರ್ಮ,
ಕುಲಸಚಿವರು (ಪರೀಕ್ಷಾಂಗ)
ಮಂಗಳೂರು ವಿ.ವಿ.

- ದಿನೇಶ್‌ ಇರಾ

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.