ಕುಷ್ಟಗಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿ ಯಶಸ್ವಿ ದಾಳಿಂಬೆ ಕೃಷಿ


Team Udayavani, Jan 21, 2022, 11:01 AM IST

5isrel

ಕುಷ್ಟಗಿ: ಹುಲ್ಲು ಕಡ್ಡಿ ಬೆಳೆಯದ ಸವಳು ಭೂಮಿಯಲ್ಲಿ ಸಿಮೆಂಟ್ ರಿಂಗ್ ಬಳಸಿ ಪಾಲಿಹೌಸ್ ನಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ದಾಳಿಂಬೆ ಬೆಳೆ ಪ್ರಯೋಗ ಯಶಸ್ವಿಯಾಗಿದೆ. ನಿಡಶೇಸಿ ತೋಟಗಾರಿಕೆ ಕ್ಷೇತ್ರ ಹಲವು ಪ್ರಯೋಗಗಳಿಗೆ ಸಾಕಾರವಾಗಿದೆ.

ಕುಷ್ಟಗಿ ತಾಲೂಕಿನ ನಿಡಶೇಸಿಯ ರಾಜ್ಯ ವಲಯದ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿಯ ಉಸ್ತುವಾರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಮಾದರಿ ತೋಟಗಾರಿಕೆ ಕ್ಷೇತ್ರ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದೆ.

ಈ ಸವಳು ಭೂಮಿಯಲ್ಲಿ ನೀರು ಇಂಗದೇ, ಯಾವ ಬೆಳೆಯೂ ಬೆಳೆಯದ ಬರಡು ಭೂಮಿಯಲ್ಲಿ ಬೆಳೆ ತೆಗೆಯಬಹುದಾಗಿದೆ. ಸವಳು, ಜವಳು ಭೂಮಿಯಲ್ಲಿ ಏನೂ ಬೆಳೆಯುವುದಿಲ್ಲ. ಆದರೆ ನಿಡಶೇಸಿ ತೋಟಗಾರಿಕೆ ಕ್ಷೇತ್ರದಲ್ಲಿ 58 ಎಕರೆ ಪ್ರದೇಶದಲ್ಲಿ 20 ಎಕರೆ ಸವಳು ಭೂಮಿ ಇದೆ. ಈ ಭೂಮಿ ಖಾಲಿ ಬಿಡದೇ ಪರ್ಯಾಯ ವಿಧಾನಗಳ ಮೂಲಕ ಬರಡು ಭೂಮಿಯಲ್ಲಿ ಸಸ್ಯ ಕ್ಷೇತ್ರ ಅರಳಿಸಲಾಗುತ್ತಿದೆ.

ಈ ಸವಳು ಭೂಮಿಯಲ್ಲಿ‌ ಪಾಲಿಹೌಸ್ ಅಳವಡಿಸಿಕೊಂಡು ಕಾಯಿಪಲ್ಲೆ ಬೆಳೆ ಈಗಾಗಲೇ ಫಲ ನೀಡಿದೆ. ಇದೇ ಪ್ರಯೋಗ ಮುಂದುವರಿದು ಪ್ಲಾಂಟೇಷನ್ ಬೆಳೆ ಬೆಳೆಯಲು ಪಾಲಿಹೌಸ್ ನಲ್ಲಿ ಸಿಮೆಂಟ್ ರಿಂಗ್ ಬಳಸಿ 10 ಗುಂಟೆ ವಿಸ್ತೀರ್ಣದಲ್ಲಿ 300 ಗಿಡ ಬೆಳೆಯಲಾಗಿದೆ. ದಾಳಿಂಬೆ ಗಿಡದ ಬೇರು, ಒಂದೂವರೆಯಿಂದ ಎರಡೂವರೆ ಅಡಿಯವರೆಗೆ ಹರಡಿಕೊಳ್ಳುತ್ತದೆ. ಹೀಗಾಗಿ  ಸಿಮೆಂಟ್ ರಿಂಗ್ ನಲ್ಲಿ ಬೇರೆ ಜಮೀನಿನಿಂದ ಕೆಂಪು ( ಮಸಾರಿ) ಮಣ್ಣು, ಜೊತೆಗೆ ಕೊಟ್ಟಿಗೆ ಗೊಬ್ಬರ, ಮೇಲು ಗೊಬ್ಬರ ಬೆರೆಸಿ ಹನಿ ನೀರಾವರಿ ಆಧರಿಸಿ ಸೂಪರ್ ಭಗವಾ( ಕೊಪ್ಪಳ ಸ್ಪೆಷಲ್)  ಸುಧಾರಿತ ತಳಿ ದಾಳಿಂಬೆ ಬೆಳೆ ನಾಟಿ ಮಾಡಲಾಗಿದೆ.

ಬೆಳೆದ ದಾಳಿಂಬೆ ಉತ್ತಮವಾಗಿ ಬೆಳೆದಿದ್ದು ರೋಗ ರಹಿತವಾಗಿವೆ. ಈ ಗಿಡಗಳಿಗೆ ಕಸಿ ಕಟ್ಟುವ (ಗೂಟಿ) ಸಸಿಗಳನ್ನು 20 ರಿಂದ 25 ದಿನಗಳವರೆಗೆ ಸಸಿಗಳನ್ನು ಬೆಳೆಸಿ ಕಡ್ಡಿ ಕಟ್ ಮಾಡಲಾಗುತ್ತಿದೆ. ಕಟ್ ಮಾಡಿದ ಕಸಿ ಸಸಿಗಳನ್ನು ನೇರವಾಗಿ ನಾಟಿ ಮಾಡಬಹುದು ಇಲ್ಲವೇ ನರ್ಸರಿಯಾಗಿ ಬೆಳೆಸಿ ರೈತರಿಗೆ ಮಾರಾಟ ಮಾಡಬಹುದು. ನೇರವಾಗಿ ಕಸಿ ಸಸಿಯಾಗಿದ್ದಲ್ಲಿ 2ರಿಂದ 3 ರೂ. ನರ್ಸರಿ ಯಲ್ಲಿ ಬೆಳೆಸಿದರೆ 25 ರೂ.ದಿಂದ 30 ರೂ.ಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಗಿಡ ಬೆಳೆದಂತೆ ಕಸಿ ಸಸಿಗಳನ್ನು ಬೆಳೆಸಬಹುದು ಇಲ್ಲವೇ ಹಣ್ಣಿಗೆ ಬಿಡಬಹುದು. ಈ ಪಾಲಿಹೌಸ್ ನಲ್ಲಿ ಕೀಟ ಹಾಗೂ ರೋಗ ಮುಕ್ತವಾಗಿರುತ್ತಿವೆ ನಿರೀಕ್ಷಿತ ಇಳುವರಿ ಪಡೆಯಬಹುದಾಗಿದ್ದು ಗುಣಮಟ್ಟದ ದಾಳಿಂಬೆ ಸಸಿಗಳಿಗೆ ಸಂಪರ್ಕಿಸಬಹುದಾಗಿದೆ ( 9449630918) ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಆಂಜನೇಯ ದಾಸರ್.

ಇದನ್ನೂ ಓದಿ:

ಕೋಲ್ಕತಾ ಎಲೆ ಬೆಳೆಸುವ ಪ್ಲಾನ್

ಇದೇ ಮಾದರಿಯಲ್ಲಿ ಪಾಲಿಹೌಸ್ ಇಲ್ಲದೇ ನಿಂಬೆ, ಡ್ರಾಗನ್ ಫ್ರುಟ್ ಬೆಳೆಸಲಾಗಿದೆ. ಇನ್ಮುಂದೆ ಕೊಟ್ಟಿಗೆ ಗೊಬ್ಬರ, ಮಣ್ಣು ಬೆರೆಸಿ ಪಾಲಿಹೌಸ್ ನಲ್ಲಿ ಇಲ್ಲವೇ ನೆಟ್ ಪರದೆ ಬಳಸಿ ಎಲೆಬಳ್ಳಿ ಬೆಳೆಸುವ ತಯಾರಿ ನಡೆದಿದೆ. ಇದರಲ್ಲಿಯೇ ಕಲ್ಕತ್ತಾ ಎಲೆ ಬೆಳೆಸಲಾಗುವುದು ಈ ಪ್ರಯೋಗ ಯಶಸ್ವಿಯಾದರೆ ಕ್ಷೇತ್ರ ವಿಸ್ತರಿಸುವ ಯೋಜನೆ ಇದೆ.

ಇದಕ್ಕೆಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ, ಸಹಾಯಕ ತೋಟಗಾರಿಕೆ ನಿರ್ದೇಶಕ ವಿನಾಯಕ ರೆಡ್ಡಿ ಮಾರ್ಗದರ್ಶನ ದಲ್ಲಿ ಕೈಗೊಳ್ಳಲಾಗಿದೆ. ಇದೇ ಸವಳು ಭೂಮಿಯಲ್ಲಿ ಎರಡು ಎಕರೆಯಲ್ಲಿ ಹೊಂಡ ನಿರ್ಮಿಸಿ ಹೆಡ್ ಸ್ನೇಕ್ ಸೇರಿದಂತೆ ವಿವಿಧ ಜಾತಿಯ ಮೀನು ಸಾಕಲಾಗುತ್ತಿದೆ ಎಂದು ಆಂಜನೇಯ ದಾಸರ್ ಅವರು ಉದಯವಾಣಿ ಮಾಹಿತಿ ನೀಡಿದರು.

-ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.