ಅಪ್ಪನ ಸ್ಪರ್ಧೆಗೆ ಅಡ್ಡಿಯಾದ ಮಗ : ದಿನೇಶ್ ಗುಂಡೂರಾವ್ ಆರೋಪ
Team Udayavani, Jan 29, 2022, 5:27 PM IST
ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪರ್ಯೆ ಕ್ಷೇತ್ರದ ಚುನಾವಣಾ ಕಣದಿಂದ ಮಾಜಿ ಮುಖ್ಯಮಂತ್ರಿ, 83 ವರ್ಷದ ಪ್ರತಾಪಸಿಂಹ ರಾಣೆ ಹಿಂದೆ ಸರಿದಿದ್ದು, ಸಚಿವ ವಿಶ್ವಜಿತ್ ರಾಣೆ ತಂದೆಯ ರಾಜಕಾರಣಕ್ಕೆ ಅಡ್ಡಿಯಾಗಿದ್ದಾರೆ ಎಂದು ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪರ್ಯೆ ಕ್ಷೇತ್ರದಿಂದ ಪ್ರತಾಪಸಿಂಹ ರಾಣೆ ಸ್ಫರ್ಧಿಸಲಿದ್ದಾರೆ ಎಂದು ಅವರಿಗೆ ಕಾಂಗ್ರೇಸ್ ಟಿಕೆಟ್ ನೀಡಿತ್ತು. ರಾಣೆಯವರು ಇಂದೂ ಕೂಡ ಚುನಾವಣೆ ಸ್ಫರ್ಧೆಗೆ ಉತ್ಸುಕರಾಗಿದ್ದಾರೆ. ಪ್ರತಾಪಸಿಂಹ ರಾಣೆ ಚುನಾವಣೆಗೆ ಸ್ಫರ್ಧಿಸದಂತೆ ಕುಟುಂಬದವರು ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಬಹುಶಃ ಪ್ರತಾಪಸಿಹ ರಾಣೆಯವರು ಜೀವನದ ಈ ಹಂತದಲ್ಲಿ ತನ್ನ ಮಗನನ್ನು ಎದುರಿಸಲು ಬಯಸಲಿಲ್ಲ. ಮಗ ಅವರನ್ನು ಪಕ್ಕಕ್ಕೆ ತಳ್ಳಿರಬಹುದು. ಇದು ಅತ್ಯಂತ ದುರದೃಷ್ಠಕರ ಸಂಗತಿ. ಮಗ ತನ್ನ ತಂದೆಯನ್ನು ಗೌರವಿಸಬೇಕಿತ್ತು ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಪರ್ಯೆ ಕ್ಷೇತ್ರದಿಂದ ಮಾವನ ವಿರುದ್ಧ ಸೊಸೆ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ ಎಂದು ಈ ಕ್ಷೇತ್ರ ಭಾರಿ ಚರ್ಚೆಗೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಣೆ ಯವರ ಸೊಸೆ ಡಾ. ದಿವ್ಯಾ ರಾಣೆ ಸ್ಫರ್ಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು