ಸದ್ಬಳಕೆಯಾಗಲಿ ನರೇಗಾ ಅನುದಾನ
Team Udayavani, Feb 5, 2022, 5:25 PM IST
ವಿಜಯಪುರ: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಅಕುಶಲ ಮತ್ತು ಅರೆಕುಶಲ ಕೂಲಿಕಾರರಿಗೆ ವರದಾನವಾಗಿದೆ. ಈ ಹಿಂದೆ ಬಡ ಜನತೆ ಬೇರೆ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದ ವ್ಯವಸ್ಥೆಗೆ ಮನರೇಗಾ ಕಡಿವಾಣ ಹಾಕಿದೆ ಎಂದು ಬಬಲೇಶ್ವರ ತಾಪಂ ಇಒ ಜುಬೇರ್ ಅಹ್ಮದ್ ಪಠಾಣ ಹೇಳಿದರು.
ಬಬಲೇಶ್ವರ ತಾಪಂ, ನಿಡೋಣಿ ಗ್ರಾಪಂ ಸಹಯೋಗದಲ್ಲಿ ನರೇಗಾ ದಿನಾಚರಣೆ ಅಂಗವಾಗಿ ನಿಡೋಣಿ ಸರ್ಕಾರಿ ಉರ್ದು ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನರೇಗಾ ಯೋಜನೆಯಿಂದ ಗ್ರಾಮೀಣ ಜನರು ಸ್ಥಳಿಯವಾಗಿ 100 ದಿನಗಳಕಾಲ ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ಒದಗಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಉದ್ಯೋಗ ಅರಸಿ ಹಳ್ಳಿಯ ಜನರು ದೂರದ ಊರುಗಳಿಗೆ ಗುಳೆ ಹೋಗುವ ಅಗತ್ಯವಿಲ್ಲ ಎಂದರು.
ಸದರಿ ಯೋಜನೆ ಅಡಿಯಲ್ಲಿ ಶಾಲಾ ಅಭಿವೃದ್ದಿಗೆ ಅಪರಿಮಿತ ಅನುದಾನವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಸಸಿ ನೆಡುವುದು, ಅಡುಗೆ ಕೋಣೆ, ಮಳೆ ನೀರಿನ ಕೊಯ್ಲು ಮಾಡುವ ಮೂಲಕ ಸರ್ವಾಂಗೀಣ ಅಭಿವೃದ್ದಿಗೆ ನರೇಗಾ ಸಹಕಾರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಶಹಾಪುರ ಮಾತನಾಡಿ, ಮನರೇಗಾ ಯೋಜನೆಯಿಂದ ನಮ್ಮ ಗ್ರಾಮ ಪಂಚಾಯತ್ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ನಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ಕಾಂಪೌಂಡ್ ನಿರ್ಮಾಣ, ಕಲ್ಯಾಣಿ ಕಾಮಗಾರಿ, ತೆರೆದ ಬಾವಿ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳು, ಚೆಕ್ ಡ್ಯಾಂ ಅರಣ್ಯೀಕರಣ ತೊಟದ ರಸ್ತೆ ನಿರ್ಮಾಣ ಕಾಮಗಾರಿ ನರೇಗಾ ಯೋಜನೆಯಿಂದ ಅಭಿವೃದ್ದಿ ಮಾಡಿದ್ದು ಗ್ರಾಮದ ಸರ್ವಾಂಗಿಣ ಅವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಪಿಡಿಒ ಬಿ.ಎಚ್. ಮುಜಾವರ ಮಾತನಾಡಿದರು. ರವಿ ಮಾಸರೆಡ್ಡಿ, ಭಾರತಿ ಹೀರೆಮಠ, ಮದರಸಾಬ್ ಇನಾಮದಾರ, ರೇಣುಕಾ ರಸಾಳಕರ, ಸವಿತಾ ತಳವಾರ, ಮಹೇಶ ಕಗ್ಗೋಡದವರ, ಅಶೋಕ ಕೋಟ್ಯಾಳ, ರೇಖಾ ಪಾಟೀಲ, ಗೀತಾ, ರೂಪಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ