ತಿರುಮಲ: ಅನ್ನಪ್ರಸಾದ ಮಳಿಗೆ ಹೆಚ್ಚಳ; ಖಾಸಗಿ ರೆಸ್ಟೋರೆಂಟ್ ಗಳು, ಹೊಟೇಲ್ಗಳಿಗೆ ಬೀಗ
ban private hotels ,
Team Udayavani, Feb 19, 2022, 7:35 AM IST
ಹೈದರಾಬಾದ್: ಇನ್ನು ಮುಂದೆ ದೇಗುಲ ನಗರಿ ತಿರುಮಲದಲ್ಲಿ ಖಾಸಗಿ ಹೊಟೇಲ್ಗಳು ಹಾಗೂ ರೆಸ್ಟೋರೆಂಟ್ ಗಳು ಕಾಣಸಿಗುವುದಿಲ್ಲ. ಅದರ ಬದಲಾಗಿ, ಉಚಿತ ಅನ್ನ ಪ್ರಸಾದ ವಿತರಿಸುವ ಮತ್ತಷ್ಟು ಕಿಯೋಸ್ಕ್ ಗಳು ತಲೆ ಎತ್ತಲಿವೆ.
ತಿರುಮಲದ ತಿರುಪತಿ ದೇವಸ್ಥಾನಮ್ಸ್ ಮಂಡಳಿ(ಟಿಟಿಡಿ) ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಗುಲ ನಗರಿಯ ಎಲ್ಲ ಖಾಸಗಿ ರೆಸ್ಟೋರೆಂಟ್ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಿದೆ. ಅಲ್ಲಿ ಹೆಚ್ಚು ಉಚಿತ ಅನ್ನ ಪ್ರಸಾದಮ್ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.
ತಿರುಮಲದಲ್ಲಿನ ಉಪಾಹಾರಗೃಹಗಳು ಹಾಗೂ ರೆಸ್ಟೋರೆಂಟ್ಗಳಿಗೆ ಬೇರೆ ಉದ್ದಿಮೆ ಮಾಡುವ ಆಯ್ಕೆಯನ್ನು ಒದಗಿಸಲಿದೆ ಎಂದು ಹೇಳಲಾಗಿದೆ.
ಇದೇ ವೇಳೆ, ಮುಂಬಯಿಯಲ್ಲಿ ಶ್ರೀವರಿ ದೇವಾಲಯ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿನ ವಿಚಾರದಲ್ಲಿ ಅನುಮತಿ ಪಡೆಯಲು ಸದ್ಯದಲ್ಲೇ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವುದಾಗಿ ಟ್ರಸ್ಟ್ ಹೇಳಿದೆ.
ಅರ್ಜಿತ ಸೇವಾ ಟಿಕೆಟ್ ದರವನ್ನು ಏರಿಸಲಾಗುವುದು ಎಂಬ ವರದಿಗಳನ್ನೂ ಟಿಟಿಡಿ ಅಲ್ಲಗಳೆದಿದೆ. ಅಲ್ಲದೇ, ಸದ್ಯದಲ್ಲೇ ಅರ್ಜಿತ ಸೇವೆಯನ್ನು ಪುನರಾ ರಂಭಿಸಲಾಗುವುದು ಎಂದಿದೆ.
ಲಡ್ಡು ಪ್ರಸಾದ ದಿಂದ 365 ಕೋಟಿ
2022 - 23ರ ಬಜೆಟ್ನಲ್ಲಿ ಉಲ್ಲೇಖಿಸಿರುವಂತೆ, ವೆಂಕಟೇಶ್ವರ ದೇಗುಲವು 3,096.40 ಕೋಟಿ ರೂ. ಆದಾಯ ಗಳಿಸಿದೆ. ಈ ಪೈಕಿ, ಹುಂಡಿಯಲ್ಲಿ 1,000 ರೂ. ಬಂದಿದ್ದು, ಠೇವಣಿ ಯಿಂದ ಬಂದ ಬಡ್ಡಿ ಮೊತ್ತ 668.5 ಕೋಟಿ ರೂ., ಟಿಕೆಟ್ ಮಾರಾಟದಿಂದ 362 ಕೋಟಿ ರೂ., ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ಭಕ್ತರು ಮುಡಿ ಕೊಟ್ಟಿದ್ದನ್ನು ಮಾರಾಟ ಮಾಡಿ 126 ಕೋಟಿ ರೂ. ಆದಾಯ ಬಂದಿದೆ ಎಂದು ಟಿಟಿಡಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ