ಬೆಂಗಳೂರು ಸಿನಿಮೋತ್ಸವ : ಇಲ್ಲಿವೆ ನಾಳೆಯ ಸಿನಿಮಾಗಳು


Team Udayavani, Mar 4, 2022, 7:32 PM IST

ಬೆಂಗಳೂರು ಸಿನಿಮೋತ್ಸವ : ನಾಳೆ ಇಲ್ಲಿವೆ ಸಿನಿಮಾಗಳು

ಬೆಂಗಳೂರು : ಮಾರ್ಚ್‌ 5 ಶನಿವಾರ ವಾರಾಂತ್ಯ. ಸಾಮಾನ್ಯವಾಗಿ ಹೆಚ್ಚು ಜನಸಂದಣಿ ಇರುವ ದಿನ. ಹಾಗಾಗಿ ಆಯ್ದ ಸಿನಿಮಾಗಳಿಗೆ ಟಿಕೇಟುಗಳೂ ಸಿಗುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಆರು ವಿಭಿನ್ನ ನಿರ್ವಹಣೆ, ಕಥಾವಸ್ತುವಿನ ಚಿತ್ರಗಳನ್ನು ಪಟ್ಟಿ ಮಾಡಲಾಗಿದೆ. ಟಿಕೇಟು ಕಾದರಿಸಿ ವೀಕ್ಷಿಸಿ.

ಎ ಹೀರೋ (A Hero)- ಇರಾನ್‌ – 2021- ಅಸ್ಘರ್ ಫಹ್ರಾದಿ

ಅಸ್ಘರ್‌ ಫಹ್ರಾದಿ ಇರಾನಿನ ಆಧುನಿಕ ಸಂದರ್ಭದ ಕಥಾನಕಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದವ. ಈಗಾಗಲೇ ಎರಡು ಚಿತ್ರಗಳಿಗೆ [ಎ ಸಪರೇಶನ್‌ ಮತ್ತು ಸೇಲ್ಸ್‌ ಮ್ಯಾನ್‌] ಆಸ್ಕರ್‌ ಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ. ಕಾನ್‌ ಸಿನಿಮಾದಲ್ಲಿ ಗ್ರ್ಯಾಂಡ್‌ ಫಿಕ್ಸ್‌ ಪ್ರಶಸ್ತಿ ಪಡೆದ ಚಿತ್ರವಿದು. ಈ ಬಾರಿಯ ಆಸ್ಕರ್‌ ನಲ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಚಿತ್ರ. ಬದುಕಿನ ಸಂಕಷ್ಟಗಳು, ಅನಿವಾರ್ಯತೆ, ಪ್ರಾಮಾಣಿಕತೆ, ಮೌಲ್ಯಗಳು ಇತ್ಯಾದಿಯ ಸುತ್ತ ಕಥೆ ಹರಡಿಕೊಳ್ಳುತ್ತಾ ಪ್ರೇಕ್ಷಕನನ್ನೂ ಒಳಗೊಳ್ಳುವ ಚಿತ್ರ.

ಡ್ರೈವ್‌ ಮೈ ಕಾರ್‌ (Drive My Car)- 2021- ಜಪಾನ್‌- Doraibu Maika

ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಸೆಣಸುತ್ತಿರುವ ಪ್ರಮುಖ ಚಲನಚಿತ್ರಗಳಲ್ಲಿ ಇದೂ ಒಂದು. ಅಷ್ಟೇ ಅಲ್ಲ, ಪ್ರಮುಖವಾದುದು. ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದಿರುವ ಚಿತ್ರ. 2021 ರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪಟ್ಟಿಯಾಗಿರುವ ಚಿತ್ರವಿದು. ಕಾನ್‌ ಚಿತ್ರೋತ್ಸವದಲ್ಲೂ ಪಾಲ್ಗೊಂಡು ಅತ್ಯುತ್ತಮ ಚಿತ್ರ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಸೆಣಸಿತ್ತು. ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿತು. ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯನ್ನು ಅತ್ಯುತ್ತಮ ಚಿತ್ರಕ್ಕಾಗಿ ಪಡೆದಿದೆ.

ಯೂನಿ (YUNI)- ಇಂಡೋನೇಶಿಯಾ- 2021- Arawinda Kirana

ಸಂಪ್ರದಾಯ ಮತ್ತು ಸ್ವಾತಂತ್ರ್ಯ ನಡುವಿನ ಅರ್ಥ ವಿಸ್ತಾರತೆಯ ಸಿನಿಮಾವಿದು. ಕಥಾನಾಯಕಿ ಉನ್ನತ ವಿದ್ಯಾಭ್ಯಾಸಕ್ಕೆ ಅಣಿಯಾಗುತ್ತಾಳೆ. ಆ ಸಂದರ್ಭದಲ್ಲಿ ಒಬ್ಬ ವರನನ್ನು ಹುಡುಕಲಾಗುತ್ತದೆ. ಆದರೆ ಉನ್ನತ ವಿದ್ಯಾಭ್ಯಾಸ ಕಾರಣಕ್ಕೆ ಕಥಾ ನಾಯಕಿ ತಿರಸ್ಕರಿಸುತ್ತಾಳೆ. ಆ ಬಳಿಕ ಮತ್ತೊಂದು ವರ ನೋಡಿದಾಗಲೂ ಒಪ್ಪುವುದಿಲ್ಲ. ಅಲ್ಲಿನ ಸಂಪ್ರದಾಯದ ಪ್ರಕಾರ ಎರಡು ಬಾರಿ ತಿರಸ್ಕಾರ ಮಾಡಿದವರನ್ಯಾರೂ ಮದುವೆಯಾಗುವುದಿಲ್ಲ. ಕಥಾ ನಾಯಕಿ ಕಾವ್ಯವನ್ನು ಪ್ರೀತಿಸುತ್ತಾ, ತನ್ನ ದುಗುಡವನ್ನು ಮರೆಯಲು ಯತ್ನಿಸುತ್ತಾಳೆ. ಆ ಸಂದರ್ಭದಲ್ಲಿ ಅವಳ ಕಾವ್ಯದ ಉಪನ್ಯಾಸಕನೇ ಮೂರನೆಯವನಾಗಿ ವಿವಾಹದ ಪ್ರಸ್ತಾವ ಮುಂದಿಡುತ್ತಾನೆ. ಕೆಲವು ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿರುವ ಸಿನಿಮಾವಿದು.

ವೋರ್ಟೆಕ್ಸ್ (Vortex)- ಫ್ರೆಂಚ್‌- 2021- Gaspar Noe

ಕಾನ್‌ ಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಕಂಡ ಚಲನಚಿತ್ರಗಳಲ್ಲಿ ಇದೂ ಒಂದು. ತನ್ನ ಎಂದಿನ ಜಾಡಿನಿಂದ ಹೊರಬಂದು ಈ ಸಿನಿಮಾ ನಿರ್ದೇಶಿಸಿರುವ ನಿರ್ದೇಶಕ ಗಾಸ್ಪರ್‌, ಇಳಿವಯಸ್ಸಿನ ದಂಪತಿಯ ಬದುಕಿನ ಹೋರಾಟವನ್ನು ಅವರ ಮಗನ ಸುತ್ತ ಹೆಣೆಯುತ್ತಾ ಕಥೆ ವಿವರಿಸಲು ಪ್ರಯತ್ನಿಸುತ್ತಾನೆ. ಕಥೆ ಹೇಳಿರುವ ಕ್ರಮಕ್ಕೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಪಾತ್ರಗಳಲ್ಲಿನ ನಟನೆ [ಡೇರಿಯೊ ಅರ್ಜೆಂಟೊ, ಫ್ರಾಂಕೊಯಿಸ್‌ ಲೆಬ್ರುನ್‌] ಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಅಹದ್ಸ್‌ ನೀ (Ahed’s Knee) –2021- ಇಸ್ರೇಲ್‌- Nadav Lapid

ಸಿನಿಮಾ ನಿರ್ದೇಶಕನೊಬ್ಬ ತನ್ನ ಸಿನಿವೊಂದರ ಪ್ರದರ್ಶನಕ್ಕಾಗಿ ತನ್ನ ದೇಶಕ್ಕೆ ಬರುತ್ತಾನೆ. ಅಲ್ಲಿ ಆ ದೇಶದ ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬಳು ಈ ಪ್ರದರ್ಶನವನ್ನು ವ್ಯವಸ್ಥೆ ಮಾಡಿರುತ್ತಾಳೆ. ಅಲ್ಲಿ ಎದುರಾಗುವ ಸನ್ನಿವೇಶಗಳು ಅವನಿಗೆ ವಾಸ್ತವವನ್ನು ಅರಿವಿಗೆ ತರುತ್ತವೆ. ಒಂದೆಡೆ ತನ್ನ ದೇಶದಲ್ಲಿ ಸಾಯುತ್ತಿರುವ ಸ್ವಾತಂತ್ರ್ಯ ಮತ್ತು ತನ್ನ ಮನೆಯಲ್ಲಿ ಸಾವಿನ ಅಂಚಿನಲ್ಲಿರುವ ತಾಯಿಯ ಹೋರಾಟ- ಎರಡೂ ವಿಭಿನ್ನವಾದ ಅನುಭವವನ್ನು ಕಟ್ಟಿಕೊಡುತ್ತವೆ.

ಬರ್ಗ್‌ಮನ್ ಐಲ್ಯಾಂಡ್ (Bergman Island)- ಫ್ರಾನ್ಸ್‌- Mia Hansen Love

ಈ ಚಲನಚಿತ್ರವೂ ಬಹಳ ಸರಳವಾದ ಕಥಾ ಹಂದರವನ್ನು ಹೊಂದಿರುವಂಥದ್ದು. ಸಿನಿಮಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ದಂಪತಿಯೊಂದು ಸಿನಿಮಾ ನಿರ್ದೇಶಕ ಬರ್ಗ್ ಮನ್ ಹೆಚ್ಚು ಸಿನಿಮಾಗಳನ್ನು ಚಿತ್ರೀಕರಿಸಿರುವ ದ್ವೀಪಕ್ಕೆ ವಿಹಾರಕ್ಕೆಂದು ಹೋಗುತ್ತಾರೆ. ಅಲ್ಲಿ ಒಂದಿಷ್ಟು ದಿನವಿದ್ದು ಮನಸ್ಸಿಗೆ ಉಲ್ಲಾಸ ತುಂಬಿಕೊಂಡು ಬರುವುದು ಉದ್ದೇಶ. ಹಾಗೆ ದಿನ ಕಳೆಯುತ್ತಿದ್ದ ದಂಪತಿಯ ನಡುವೆ ಕಲ್ಪನಾ ಲೋಕ ಮತ್ತು ವಾಸ್ತವದ ನಡುವಿನ ಪ್ರತ್ಯೇಕತೆಯ ಗೆರೆ ಅಳಿಸಿ ಹೋಗುತ್ತಾ, ಬೇರೆಯದೇ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇವೆಲ್ಲವನ್ನೂ ಬಹಳ ಸುಂದರವಾಗಿ ಹೆಣೆದಿರುವುದಕ್ಕೇ ಈ ಚಿತ್ರ ಪ್ರಶಂಸೆಗೆ ಒಳಗಾಗಿರುವುದು. ನವಿರಾದ ನೆಲೆಯಲ್ಲೇ ಸಾಗುತ್ತಾ, ಬದುಕಿನ ವಾಸ್ತವದ ಕಠೋರತೆಯನ್ನು ಹೇಳಲು ಪ್ರಯತ್ನಿಸುವುದು ಈ ಚಿತ್ರದ ವಿಶೇಷ. ಇದೂ ಸಹ ಕಾನ್‌ ಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಕಂಡಿತ್ತು.

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

vijay raghavendra’s swapna mantapa movie

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

The Judgement;

The Judgement; ಭವಿಷ್ಯ ನಿರ್ಧರಿಸುವ ಜಡ್ಜ್ಮೆಂಟ್‌: ರವಿಚಂದ್ರನ್‌

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

kiccha sudeepa gave update about max

MAX; ಅಭಿಮಾನಿಗಳಿಗೆ ಸುದೀಪ್‌ ಅಪ್ಡೇಟ್

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.